ಚಾಮುಂಡೇಶ್ವರಿ ಅತಿ ಎತ್ತರದ ವಿಗ್ರಹ ಲೋಕಾರ್ಪಣೆ
Team Udayavani, Aug 9, 2021, 4:26 PM IST
ಮದ್ದೂರು: ಮದ್ದೂರು-ಚನ್ನಪಟ್ಟಣ ತಾಲೂಕಿನ ಗಡಿ ಗ್ರಾಮ ಮಳೂರು ಹೋಬಳಿ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಕ್ಷೇತ್ರದಲ್ಲಿ ವಿಶ್ವದ ಅತಿ ಎತ್ತರದ (ಭೂಮಟ್ಟದಿಂದ60 ಅಡಿ)ಸೌಮ್ಯಭಾವದ 18 ಬಾಹುಗಳುಳ್ಳ ಶ್ರೀ ಚಾಮುಂಡೇಶ್ವರಿ ದೇವಿಯ ಸ್ವರ್ಣಲೇಪಿತ ಪಂಚಲೋಹದ ವಿಗ್ರಹ ಭಾನುವಾರ ಪ್ರಾತಃಕಾಲ ಭಕ್ತಾದಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು.
ಅತೀ ಎತ್ತರದ ವಿಗ್ರಹ: ದಕ್ಷಿಣಾ ಏಷ್ಯಾದಲ್ಲೇ ಎತ್ತರದ ವಿಗ್ರಹವೆಂಬ ಖ್ಯಾತಿ ಹೊಂದಿರುವ ಶ್ರೀ ಚಾಮುಂಡೇಶ್ವರಿ ಪಂಚಲೋಹ ವಿಗ್ರಹ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ವಿಧಿ ವಿಧಾನಗಳೊಡನೆ ಅನಾವರಣಗೊಂಡು ಭಕ್ತರ ಹರ್ಷೋದ್ಘಾರಕ್ಕೆ ಕಾರಣವಾಯಿತು.
ಕ್ಷೀರಾಭಿಷೇಕ: ಭಾನುವಾರ ಬೆಳಗ್ಗೆ ಅಮ್ಮನವರಿಗೆ ರುದ್ರಾಭಿಷೇಕ, ಶ್ರೀಚಕ್ರಕ್ಕೆ ಚಕ್ರಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನೆರವೇರಿದ ಬಳಿಕ ಕ್ಷೇತ್ರದಲ್ಲಿನ ಬನ್ನಿಮಂಟಪದಿಂದ ಪೂಜಾಕುಣಿತ, ಡೊಳ್ಳು ಕುಣಿತ, ವೀರಗಾಸೆ, ಹೆಸರಾಂತ ಗುಗ್ಗಳ ಕುಣಿತ, ತೆಂಗಿನ ಕಾಯಿ ಪವಾಡ ಇನ್ನಿತರೆ ಜಾನಪದ ಕಲಾ ಮೇಳಗಳೊಂದಿಗೆ 108 ಹಾಲರವಿಯನ್ನು ಕ್ಷೇತ್ರ ಪಾಲಕರಾದ ಪವಾಡ ಬಸವಪ್ಪ
ಅವರಿಗೆ ಕ್ಷೀರಾಭಿಷೇಕ ಜರುಗಿತು.
ಇದನ್ನೂ ಓದಿ:ಆಗಸ್ಟ್ 9 ಮಲೆ(ಳೆ)ನಾಡಿಗರ ಪಾಲಿಗೆ ಕರಾಳ ದಿನ.! ಇನ್ನೂ ತಪ್ಪಲಿಲ್ಲ ಸಂತ್ರಸ್ಥರ ಕಣ್ಣೀರು.. !
ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ವಿರಳವೆನ್ನಬಹುದಾದ ಭಕ್ತ ಸಮೂಹ ಭಾನುವಾರ ದಿನವಿಡೀ ಶ್ರೀಚಾಮುಂಡೇಶ್ವರಿ ಬಸವಪ್ಪ ನವರ ಕ್ಷೇತ್ರದಲ್ಲಿ ಜರುಗಿದ ವಿವಿಧ ಪೂಜಾ ಕೈಂಕರ್ಯಗಳ ವೇಳೆ ಕೋವಿಡ್ ನಿಯಮಾನುಸಾರ ಮುಂಜಾಗ್ರತಾ ಕ್ರಮವಾಗಿ ಪಾಲ್ಗೊಳ್ಳುವ ಜತೆಗೆ ಆಗಮಿಸಿದ ಭಕ್ತರಿಗೆ ಕ್ಷೇತ್ರದ ಬಸವಪ್ಪ ದರ್ಶನ ನೀಡುವ ಮೂಲಕ ಗಮನಸೆಳೆಯಿತು.
ಆಶೀರ್ವಚನ : ಬೇವೂರು ಮಠದ ಮೃತ್ಯುಂಜಯ್ಯ ಶಿವಾಚಾರ್ಯ ಶ್ರೀಗಳು ನೂತನ ಪ್ರತಿಮೆಯ ಅನಾವರಣ ಮತ್ತು ಇತರೆ ಕಾರ್ಯಕ್ರಮಗಳ ವೇಳೆ ಪಾಲ್ಗೊಂಡು ಆಶೀರ್ವಚನ ನೀಡಿದರು.. ಕಳೆದ ದಶಕದಿಂದೀಚೆಗೆ ಶ್ರೀಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಭಕ್ತರ ನೆರವಿನೊಂದಿಗೆ ಸಾಗಿದ್ದು, ಶಕ್ತಿ ದೇವತೆ ಚಾಮುಂಡೇಶ್ವರಿ ಶಾಂತ ಸ್ವರೂಪಿ ಮೂರ್ತಿ ಪ್ರತಿಷ್ಠಾಪನೆ ಭಕ್ತರ ಅಭೀಕ್ಷೆಯಂತೆ ನೆರೆವೇ ರಿರುವುದಾಗಿ ಸಂಸ್ಥೆ ಧರ್ಮದರ್ಶಿ ಜಿ.ಬಿ. ಮಲ್ಲೇಶ್ ಪತ್ರಿಕೆಗೆ ತಿಳಿಸಿದರು.
ವಿಗ್ರಹದ ವಿಶೇಷತೆ
ಭೂಮಟ್ಟದಿಂದ 60 ಅಡಿ ಎತ್ತರವಿದ್ದು,24 ಅಡಿ ಪೀಠವುಳ್ಳ 36 ಅಡಿ ಲೋಹದ ಮೂರ್ತಿಗೆ ಸ್ವರ್ಣ ಲೇಪನ ಕಾರ್ಯ ಪೂರ್ಣಗೊಂಡಿದ್ದು, ಪುಷ್ಪಲಂಕಾರಗಳ ನಡುವೆ ಅಲಂಕೃತಗೊಂಡಿದ್ದ ಮೂರ್ತಿ ನೋಡುಗರ ಗಮನಸೆಳೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
MUST WATCH
ಹೊಸ ಸೇರ್ಪಡೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ