ಇಂದಿನಿಂದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ
Team Udayavani, May 24, 2021, 7:34 PM IST
ಮದ್ದೂರು: ಸೋಮವಾರದಿಂದ ತಾಲೂಕಿನಾದ್ಯಂತತಾಲೂಕು ಆಡಳಿತದಿಂದ 18 ರಿಂದ 44 ವರ್ಷವಯೋಮಾನದ ಮುಂಚೂಣಿ ಕಾರ್ಯಕರ್ತರಿಗೆ(ಕೊರೊನಾ ವಾರಿಯರ್ಸ್)ಲಸಿಕೆ ನೀಡುವ ಕಾರ್ಯವನ್ನು ಆದ್ಯ ತಾನುಸಾರಕೈಗೊಂಡಿರುವುದಾಗಿ ತಹಶೀಲ್ದಾರ್ ಎಚ್.ಬಿ.ವಿಜಯಕುಮಾರ್ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ನ್ಯಾಯಾಂಗಸಭಾಂಗಣದಲ್ಲಿ ಭಾನುವಾರ ನಡೆದ ಜಂಟಿಪತ್ರಿಕಾಗೋಷ್ಠಿ ವೇಳೆ ಮಾತನಾಡಿದ ಅವರು,ಕೋವಿಡ್ ಕೆಲಸಕ್ಕೆ ತೊಡಗಿಸಿಕೊಂಡಿರುವ ಶಿಕ್ಷಕರು,ಸಾರಿಗೆ ಸಿಬ್ಬಂದಿ, ಸೆಸ್ಕ್, ಪುರಸಭೆ, ವೈದ್ಯಕೀಯ,ಪೊಲೀಸ್, ಅರೆ ವೈದ್ಯಕೀಯ ಇನ್ನಿತರೆ ಸಿಬ್ಬಂದಿಗಳಿಗೆಆದ್ಯತೆ ಮೇರೆಗೆ ಲಸಿಕೆ ನೀಡಲಿರುವುದಾಗಿ ವಿವರಿಸಿದರು.
ತಾಲೂಕು ಕೇಂದ್ರ ಸೇರಿದಂತೆ ತಾಲೂಕಿನ ವಿವಿಧಪ್ರಾಥಮಿಕ ಕೇಂದ್ರಗಳಲ್ಲಿ ಲಸಿಕೆ ನೀಡುವ ಕಾರ್ಯಎಂದಿನಂತೆ ಮುಂದುವರಿಯಲಿದ್ದು ಪ್ರಥಮ ಲಸಿಕೆಪಡೆದು ಎರಡನೇ ಲಸಿಕೆ ಪಡೆಯುವ ಸಂಬಂಧಆಯಾ ಲಸಿಕೆ ಕೇಂದ್ರಗಳಲ್ಲಿ ಗೊಂದಲಕ್ಕೆಆಸ್ಪದವಿಲ್ಲದಂತೆ ಸಾರ್ವಜನಿಕರು ಪ್ರಯೋಜನಪಡೆದುಕೊಳ್ಳುವಂತೆ ಮನವಿ ಮಾಡಿದರು.
33 ವೆಂಟಿಲೇಟರ್: ತಾಲೂಕು ಸರ್ಕಾರಿ ಆಸ್ಪತ್ರೆಸೇರಿದಂತೆ ಭಾರತೀನಗರ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಚಿಕಿತ್ಸೆಸಂಬಂಧ ಮುಂಜಾಗ್ರತಾ ಕ್ರಮ ವಹಿಸಿದ್ದು,ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ 33ವೆಂಟಿಲೇಟರ್,3 ತೀವ್ರ ನಿಗಾಘಟಕ,41 ಸಾಮಾನ್ಯಪ್ರಕರಣಗಳ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿರುವುದಾಗಿ ವಿವರಿಸಿದರು.
ವಸತಿ ಶಾಲೆ ಕಾಯ್ದಿರಿಸುವಿಕೆ: ಸೋಂಕಿತರ ನಿಗಾಘಟಕದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ದು,ಪಟ್ಟಣದ ಎರಡು ಹಾಸ್ಟೆಲ್ಗಳನ್ನು ನಿಗಾಘಟಕಗಳನ್ನಾಗಿ ಪರಿವರ್ತಿಸಿದ್ದು, ಹೆಚ್ಚುವರಿಯಾಗಿಕೊಪ್ಪ ಹೋಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆಕಾಯ್ದಿಸಿರುವುದಾಗಿ ವಿವರಿಸಿದರು.
ವಾರದಲ್ಲಿ ಗೊಂದಲಕ್ಕೆ ತೆರೆ:ಗೋಷ್ಠಿ ವೇಳೆಮಾತನಾಡಿದ ಟಿಎಚ್ಒ ಡಾ.ಎಂ.ಎನ್.ಆಶಾಲತಾ,ಕೋವಿಡ್ ಲಸಿಕೆ ಪಡೆಯುವ ಸಂಬಂಧಸಾರ್ವಜನಿಕರು ಸ್ವಯಂ ಜಾಗೃತರಾಗಿ ಮುಂದೆಬರುತ್ತಿದ್ದು, ಪ್ರತಿಯೊಬ್ಬರಿಗೂಅಗತ್ಯ ಲಸಿಕೆ ನೀಡುವಸಂಬಂಧ ಹಂತ ಹಂತವಾಗಿ ಕ್ರಮ ವಹಿಸುವುದಾಗಿಮುಂದಿನ ವಾರದೊಳಗೆ ಹೆಚ್ಚುವರಿ ಲಸಿಕೆಸರಬರಾಜು ಸೇರಿದಂತೆ ಎಲ್ಲಾ ಗೊಂದಲಗಳಿಗೂತೆರೆಬೀಳುವುದಾಗಿ ಹೇಳಿದರು.
ವೃತ್ತ ನಿರೀಕ್ಷಕ ಬಿ.ಆರ್ಗೌಡ ಮಾತನಾಡಿ,ಸರ್ಕಾರದ ಮಾರ್ಗಸೂಚಿಯನ್ವಯ ಕಟ್ಟುನಿಟ್ಟಿನಲಾಕ್ಡೌನ್ ಘೋಷಣೆ ಹಿನ್ನೆಲೆಯಲ್ಲಿ ಸಾರ್ವಜನಿಕರು ತಾಲೂಕು ಆಡಳಿತ ಮತ್ತು ಪೊಲೀಸ್ಇಲಾಖೆಯೊಡನೆ ಸಹಕರಿಸುವಂತೆ ಮನವಿ ಮಾಡಿದರಲ್ಲದೇ, ನಿರ್ಬಂಧ ಉಲ್ಲಂ ಸುವ ಪ್ರಕರಣಗಳಲ್ಲಿಕಾನೂನು ಕ್ರಮದ ಎಚ್ಚರಿಕೆ ನೀಡಿದರು.ವಿತರಣೆ: ಅನಿವಾಸಿ ಭಾರತೀಯ ಡಾ.ಲೋಕೇಶ್ಅವರು ಕೊರೊನಾ ಸೋಂಕಿತರಿಗೆ ನೆರವಾಗಲೆಂಬಸದುದ್ದೇಶದಿಂದ ಪಾಂಡವಪುರ ಹಾಗೂ ಮದ್ದೂರುತಾಲೂಕು ಆಸ್ಪತ್ರೆಗೆ 5 ಆಕ್ಸಿಜನ್ ಮತ್ತು 2ಆಕ್ಸಿಮೀಟರ್ಗಳನ್ನು ತಹಶೀಲ್ದಾರ್ ಮೂಲಕಹಸ್ತಾಂತರಿಸಿದರು.ಗೋಷ್ಠಿ ವೇಳೆ ಮದ್ದೂರು ಸಾರ್ವಜನಿಕ ಆಸ್ಪತ್ರೆಆಡಳಿತ ವೈದ್ಯಾಧಿಕಾರಿ ಡಾ.ಬಾಲಕೃಷ್ಣ, ನೋಡಲ್ಅಧಿಕಾರಿ ಮಂಜುನಾಥ್, ಸಿಬ್ಬಂದಿ ಪ್ರವೀಣ್,ನವೀನ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
MUST WATCH
ಹೊಸ ಸೇರ್ಪಡೆ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ