ರಂಗನತಿಟ್ಟಿನ ಐಲ್ಯಾಂಡ್‌ಗಳಿಗೆ ಹಾನಿ


Team Udayavani, Aug 26, 2019, 3:07 PM IST

mandya-tdy-1

ಶ್ರೀರಂಗಪಟ್ಟಣ ಪಕ್ಷಿಧಾಮದ ಹೋರ ನೋಟ

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಪ್ರವಾಹದಲ್ಲಿ ಶೇಕಡಾ ಅರ್ಧದಷ್ಟು ರಂಗನತಿಟ್ಟು ಪಕ್ಷಿಧಾಮ ಹಾನಿಗೊಳಗಾಗಿದೆ.

ಸುಮಾರು 1.80 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಕಾವೇರಿ ನದಿ ಮೂಲಕ ಜಲಾಶಯದಿಂದ ಹೊರಬಿಡಲಾಯಿತು. ಇದರಿಂದ ಪಕ್ಷಿಧಾಮದ ಪ್ರವಾಸಿಗರ ದೋಣಿವಿಹಾರ ಹಾಗೂ ಪ್ರವೇಶವನ್ನು ನಿಷೇಧಿಸಲಾಯಿತು. ಈ ಬಾರಿ 20 ದಿನಗಳಿಗೂ ಹೆಚ್ಚು ದಿನ ಕಾವೇರಿ ನದಿ ಕಣಿವೆಯಲ್ಲಿ ಪ್ರವಾಹದ ಭೀತಿ ಎದುರಾದ ಪರಿಣಾಮ ಹಿಂದೆ ಎಂದು ಕಾಣದಷ್ಟು ಪಕ್ಷಿಧಾಮದ ಐಲ್ಯಾಂಡ್‌ಗಳು ಸಂಪೂರ್ಣ ಜಲಾವೃತವಾಗಿದ್ದವು.

ಕಾವೇರಿ ನದಿ ಮಧ್ಯೆಯಿರುವ ಒಟ್ಟು ಪಕ್ಷಿಧಾಮದಲ್ಲಿ 40ಕ್ಕೂ ಹೆಚ್ಚು ತಿಟ್ಟುಗಳಿದ್ದು ಇವುಗಳ ಕೆಲವು ಅತಿ ಎತ್ತರದ ಐ ಲ್ಯಾಂಡ್‌ ಮುಳುಗಡೆಯಾಗಲಿಲ್ಲ ಇನ್ನು ನದಿ ಮಟ್ಟದಲ್ಲಿದ್ದ ಐಲ್ಯಾಂಡ್‌ಗಳು ನೀರಿನಲ್ಲಿ ಮುಳುಗಡೆಯಾಗಿದ್ದವು. ಅಲ್ಲಿ ವಾಸ ಮಾಡುವ ಪಕ್ಷಿಗಳು ಇತರ ಎತ್ತರ ಪ್ರದೇಶವನ್ನು ಹುಡುಕಿ ವಾಸ ಮಾಡಿರುವುದು ಕಂಡು ಬಂದಿವೆ. ಕೆಲವು ಕಲ್ಲು ಬಂಡೆಯಿಂದ ರಕ್ಷಣೆ ಮದ್ಯೆ ಇರುವ ತಿಟ್ಟುಗಳು ಹೆಚ್ಚಿನದಾಗಿ ಹಾನಿ ಕಂಡು ಬಂದಿಲ್ಲ ಉಳಿದ ಕೆಲವು ಐ ಲ್ಯಾಂಡ್‌ಗಳನ್ನು ಪ್ರವಾಹದ ನೀರು ಕೊರೆದು ಹಾಕಿದೆ. ಸಣ್ಣ ಪುಟ್ಟ ಪಕ್ಷಿಗಳ ಗೂಡುಗಳು ಕೊಚ್ಚಿ ಹೋಗಿವೆ. ಇತರ ಜಲಚರಗಳು ಸಹ ನೀರಲ್ಲಿಕೊಚ್ಚಿಹೋಗಿವೆ. ಈ ಬಾರಿ ಬಂದ ಪ್ರವಾಹದ ತೀವ್ರತೆ ರಂಗನ ತಿಟ್ಟು ಪಕ್ಷಿಧಾಮ ಈ ಬಾರಿ ಸಂಪೂರ್ಣ ಮುಳುಗಡೆಯಾಗಿತ್ತು.

ಸೆಳೆತಕ್ಕೆ ಸಿಕ್ಕ ಐಲ್ಯಾಂಡ್‌: ಪ್ರವಾಹದ ನೀರಿನ ಸೆಳೆತ ಅಧಿಕವಾಗಿದ್ದರಿಂದ ಸುಮಾರು 23 ಐಲ್ಯಾಂಡ್‌ ಗಳಲ್ಲಿ, 10 ಐಲ್ಯಾಂಡ್‌ಗಳು ಸಂಪೂರ್ಣ ಹಾಳಾಗಿದ್ದು, ಇವುಗಳಲ್ಲಿ ಕಾಡು ಉಣಸೆ ಮರದ ಐಲ್ಯಾಂಡ್‌, ಸ್ಟೋನ್‌ ಬಿಲ್ ಐಲ್ಯಾಂಡ್‌, ಸ್ಟೊನ್‌ ಫ್ಲವರ್‌ ಐಲ್ಯಾಂಡ್‌, ನೀರಂಜಿ ಐಲ್ಯಾಂಡ್‌, ಹತ್ತಿಮರ ಐಲ್ಯಾಂಡ್‌, ಪರ್ಪಲ್ ಹೆರಾನ್‌ ಐಲ್ಯಾಂಡ್‌, ಕಾವೇರಿ ನದಿ ಮಧ್ಯ ನಿರ್ಮಿಸಲಾದ ಮರಳು ಮೂಟೆ ಕಟ್ಟಿದ್ದ ಐಲ್ಯಾಂಡ್‌, ಬಿದುರಿನ ಐಲ್ಯಾಂಡ್‌ ಸಂಪೂರ್ಣ ನೀರಲ್ಲಿ ಕೊಚ್ಚಿಹೋಗಿವೆ.

ಪುನರ್‌ ನಿರ್ಮಾಣ ಕಾರ್ಯ ಶೀಘ್ರ: ಪಕ್ಷಿಧಾಮದಲ್ಲಿನ 10ಕ್ಕೂ ಐಲ್ಯಾಂಡ್‌ಗಳು ಸಂಪೂರ್ಣವಾಗಿ ಹಾನಿಯಾಗಿದ್ದು ಅವುಗಳ ಪುನರ್‌ ನಿರ್ಮಾಣ ಕಾರ್ಯ ಮಾಡಲಾಗುತ್ತದೆ. ನದಿ ಮಧ್ಯೆ ಉಳಿದಿರುವ ಐಲ್ಯಾಂಡ್‌ಗಳ ಅವಶೇಷಗಳನ್ನು ಗುರುತಿಸಿ, ಸುತ್ತಲೂ ಕಲ್ಲುಗಳ ಜೋಡಣೆ ಮಾಡಿ, ಪ್ಲಾಸ್ಟಿಕ್‌ ಚೀಲಗಳಲ್ಲಿ ಮರಳು, ಮಣ್ಣು ಮೂಟೆಗಳನ್ನು ಜೋಡಿಸಿ ಮಣ್ಣು ಸುರಿದು ಐಲ್ಯಾಂಡ್‌ಗಳ ಪುನರ್‌ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ವನ್ಯ ಜೀವಿ ವಲಯ ಅರಣ್ಯ ಇಲಾಖೆಯ ರಂಗನತಿಟ್ಟು ಸಹಾಯಕ ಅಧಿಕಾರಿ ಪುಟ್ಟ ಮಾದೇಗೌಡ ಹೇಳಿದರು.

 

● ಗಂಜಾಂ ಮಂಜು

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections: ಎಚ್‌ಡಿಕೆ ಆಯ್ಕೆಯಾದರೆ ಕಾವೇರಿ ವಿವಾದಕ್ಕೆ ಪರಿಹಾರ: ಅಶೋಕ್‌

Lok Sabha Elections: ಎಚ್‌ಡಿಕೆ ಆಯ್ಕೆಯಾದರೆ ಕಾವೇರಿ ವಿವಾದಕ್ಕೆ ಪರಿಹಾರ: ಅಶೋಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.