ಕುಮಾರಸ್ವಾಮಿ ಪ್ರಿಂಟ್ಂಗ್ ಮಿಷಿನ್ ಇಟ್ಟಿದ್ದಾರಾ?
Team Udayavani, Nov 19, 2018, 6:45 AM IST
ಮಂಡ್ಯ : ಕುಮಾರಸ್ವಾಮಿ ಏನು ಪ್ರಿಂಟ್ ಮಾಡುವ ಮೆಷಿನ್ ಇಟ್ಟು ಕೊಂಡಿ ದ್ದಾರಾ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲದ್ದಕ್ಕೂ ಹೋಗಿ ಕುಮಾರಸ್ವಾಮಿ ಅವರನ್ನು ಹಿಡಿದು ಕೊಂಡರೆ, ಅವ ರೇನು ಪ್ರಿಂಟ್ ಮಾಡುವ ಮೆಷಿನ್ ಇಟ್ಟು ಕೊಂಡಿಲ್ಲ ಎಂದು ಬೆಳಗಾವಿ ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ಉಡಾಫೆ ಉತ್ತರ ನೀಡಿದರು.
ಪ್ರತಿಭಟನಾಕಾರರು ಟ್ಯಾಕ್ಟರ್ ಸುಡೋದು, ಕಾರ್ಖಾನೆಗೆ ರೈತರು ತೆಗೆದುಕೊಂಡು ಹೋಗುವ ಕಬ್ಬನ್ನು ತಡೆಯುವುದು ಸರಿಯಲ್ಲ, ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು ಎಂದು ಮನವಿ ಮಾಡಿದರು.