ಡಿವೈಎಸ್ಪಿ ಅಮಾತಿಗೆ ಆಗ್ರಹಿಸಿ ಸಂಘಟನೆಗಳಿಂದ ಧರಣಿ
Team Udayavani, Aug 25, 2019, 1:14 PM IST
ಅಕ್ರಮ ಗಣಿಗಾರಿಕೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದ ಡಿವೈಎಸ್ಪಿ ಅಮಾನತಿಗೆ ಆಗ್ರಹಿಸಿ ಶ್ರೀರಂಗಪಟ್ಟಣದ ಡಿವೈಎಸ್ಪಿ ಕಚೇರಿ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣ: ಅಕ್ರಮ ಗಣಿಗಾರಿಕೆ ಮಾಲೀಕರನ್ನು ಬಂಧಿಸದ ಡಿವೈಎಸ್ಪಿ ಯೋಗೇಂದ್ರಪ್ಪ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಅವರ ಕಚೇರಿ ಎದುರು ಧರಣಿ ನಡೆಸಿತು.
ರೈತ ಸಂಘ , ದಸಂಸ, ಹಾಗೂ ಕರವೇ ಸೇರಿದಂತೆ ಇನ್ನಿತರ ಸಂಘಟನೆಗಳು ಪಟ್ಟಣದ ಡಿವೈಎಸ್ಪಿ ಕಚೇರಿ ಮುಂದೆ ಧರಣಿ ಕುಳಿತು ತಾಲೂಕು ಆಡಳಿತ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 20 ದಿನಗಳ ಹಿಂದೆ ಜಿಪಂ ಸದಸ್ಯ ಮರಿಯಪ್ಪ ಎಂಬುವರ ಕಲ್ಲು ಕ್ವಾರೆಯಲ್ಲಿ ನ್ಪೋಟಕ ಸಿಡಿಸುವಾಗ ಮೂವರಿಗೆ ಕಲ್ಲು ಸಿಡಿದು ಕಣ್ಣು ಬೆನ್ನುಮೂಳೆ ಮುರಿದು, ಕಿವಿಗಳನ್ನು ಕಳೆದುಕೊಂಡ ಕಾರ್ಮಿರನ್ನು ಆಸ್ಪತ್ರೆಗೂ ಸೇರಿಸದೆ, ಅವರಿಗೆ ಪರಿಹಾರವೂ ನೀಡದೆ ಇರುವ ಗಣಿ ಮಾಲೀಕರು ಹಾಗೂ ಕಾರ್ಮಿಕ ಮೇಸ್ತ್ರಿ ವಿರುದ್ಧ ದೂರು ದಾಖಲಾಗಿದ್ದರೂ , ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡಿ ಕಾರ್ಮಿಕರಿಗೆ ಇಲ್ಲಿವರೆಗೆ ಯಾವುದೇ ಪರಿಹಾರ ನೀಡದ ಮಾಲೀಕರನ್ನು ಬಂಧಿಸದೆ ಅವರೊಟ್ಟಿಗೆ ಸಾಮೀಲಾಗಿರುವುದನ್ನು ಖಂಡಿಸಿದರು. ಸಂಘಟನೆಗಳ ಮುಖಂಡರು ಈಗಾಗಲೇ ಹಲವು ಬಾರಿ ಕಾರ್ಮಿಕರ ಪರಿಹಾರ ಹಾಗೂ ಪ್ರಕರಣದ ಬಗ್ಗೆ ಕೇಳಿದರೆ ಇಲ್ಲ ಸಲ್ಲದ ಸಬೂಬು ಹೇಳುತ್ತಿರುವ ಡಿವೈಎಸ್ಪಿ ಯೋಗೇಂದ್ರಪ್ಪ ಅವರನ್ನು ಅಮಾನತು ಪಡಿಸಬೇಕು. ಗಣಿ ನ್ಪೋಟ ದಲ್ಲಿ ಸಿಲುಕಿ ನೊಂದ ಕುಟುಂಬಕ್ಕೆ ಪರಿಹಾರ ಹೊದ ಗಿಸಬೇಕು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ ಒತ್ತಾಯಿಸಿದರು.
ಹಲವು ಬಾರಿ ಅಕ್ರಮ ಗಣಿ, ನ್ಪೋಟಕಗಳ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸಿ ಯಾವುದೇ ಕ್ರಮ ಕೈಗೊಳ್ಳದೆ ಅಕ್ರಮಕ್ಕೆ ದಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಕ್ರಮ ಗಣಿ ಮಾಲೀಕರಿಂದ ಎಗ್ಗಿಲ್ಲದೆ ಸಿಡಿ ಮದ್ದು ನ್ಪೋಟಕಗಳು ದಿನೇ ದಿನೆ ನಡೆಯುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಈ ಬಗ್ಗೆ ಎಸ್ಪಿ ಅವರು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದ ಧರಣಿ ಕಾರ್ಯಕ್ರಮ ಮುಂದುವರಿಸಿದರು.
ನಂತರ ಸ್ಥಳಕ್ಕೆ ಸಿಪಿಐ ಕೃಷ್ಣಪ್ಪ ಆಗಮಿಸಿ ಎಸ್ಪಿ ಹಾಗೂ ಡಿವೈಎಸ್ಪಿ ತುರ್ತು ಕೆಲಸದ ಮೇಲೆ ಬೆಂಗಳೂರಿಗೆ ತೆರಳಿದ್ದು ನಿಮ್ಮ ಸಮಸ್ಯೆಯನ್ನು ಅವರಿಗೆ ನಾನು ತಿಳಿಸುತ್ತೇನೆ ಎಂದು ಪ್ರತಿಭಟನಾಕಾರರನ್ನು ಮನವೊಲಿಸಿ ಮನವಿ ಸ್ವೀಕರಿಸಿದರು.
ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ನಾಗೇಂದ್ರ ಸ್ವಾಮಿ, ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀಕಂಠಯ್ಯ, ಚಂದ್ರು, ದಸಂಸ ಮುಖಂಡ ಕುಬೇರಪ್ಪ, ಮೋಹನ್ ಕರವೇ ಹರೀಶ್ ಸೇರಿದಂತೆ ಇತರ ಗಣಿ ನ್ಪೋಟಕದಲ್ಲಿ ನೊಂದ ಕಾರ್ಮಿಕ ಕುಟುಂಬದ ಸದಸ್ಯರು ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…