ಎಚ್.ಡಿ. ಕುಮಾರಸ್ವಾಮಿ ಲೆಕ್ಕಾಚಾರವೇ ಅರ್ಥವಾಗುತ್ತಿಲ್ಲ
Team Udayavani, Feb 12, 2017, 3:45 AM IST
ಮಂಡ್ಯ: “ಮುಂದಿನ ಮುಖ್ಯಮಂತ್ರಿ ನಾನೇ ಎಂದು ಕುಮಾರಸ್ವಾಮಿ ಯಾವ ಗಣಿತದ ಲೆಕ್ಕಾಚಾರ ಹಾಕಿ ಭಾಗಾಕಾರ ಮಾಡಿ ಹೇಳಿದ್ದಾರೋ ನನಗೆ ಗೊತ್ತಿಲ್ಲ’ ಎಂದು ಜೆಡಿಎಸ್ ಭಿನ್ನಮತೀಯ ಶಾಸಕ ಎನ್.ಚೆಲುವರಾಯಸ್ವಾಮಿ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, “ಕುಮಾರಸ್ವಾಮಿ ಯಾವತ್ತು ನಾನು ಮುಖ್ಯಮಂತ್ರಿಯಾಗೋಲ್ಲ ಅಂತ ಹೇಳಿದ್ದಾರೆ. 2008ರಲ್ಲಿ ಇದೇ ಮಾತನ್ನು ಹೇಳಿದ್ದರು. 2013ರಲ್ಲೂ ನಾನೇ ಮುಂದಿನ ಸಿಎಂ ಎಂದಿದ್ದರು. ಈಗಲೂ ಅದೇ ಮಾತನ್ನು ಹೇಳುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾದರೆ ನಾವೇನೂ ಬೇಜಾರು ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನಿಂದ ನಮಗೆ ಆಹ್ವಾನ ಬಂದಿರುವುದು ನಿಜ. ಅದನ್ನು ನಾವು ಇಲ್ಲ ಎನ್ನುವುದಿಲ್ಲ. ಅದರ ಬಗ್ಗೆ ನಾವೆಲ್ಲರೂ ಚರ್ಚಿಸಿ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಸ್ಪಷ್ಟಪಡಿಸಿದರು.