ಹೇಮಾವತಿ ನಾಲೆ ಆಧುನೀಕರಣ ಕಾಮಗಾರಿ ಅವೈಜ್ಞಾನಿಕ
Team Udayavani, Sep 7, 2019, 12:16 PM IST
ಹೇಮಾವತಿ ಎಡದಂಡೆ ನಾಲೆಯ ಸಾರಂಗಿ ಸಮೀಪ ಶಿಥಿಲಾವಸ್ಥೆಯಲ್ಲಿರುವ ಮೇಲ್ಗಾಲುವೆ.
ಕೆ.ಆರ್.ಪೇಟೆ: ತಾಲೂಕಿನಲ್ಲಿ 800 ಕೋಟಿ ರೂ.ಗಳ ವೆಚ್ಚದಲ್ಲಿ ಮಾಡುತ್ತಿ ರುವ ಹೇಮಾವತಿ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿಯು ಸಂಪೂರ್ಣ ಅವೈಜ್ಞಾನಿಕ ಹಾಗೂ ಕಳಪೆಯಿಂದ ಕೂಡಿದೆ.
800 ಕೋಟಿ ರೂಪಾಯಿ ಖರ್ಚು ಮಾಡಿ ನಾಲೆ ಆಧುನೀಕರಣ ಮಾಡುವುದರಿಂದ ತಾಲೂಕಿಗೆ ಸಮಸ್ಯೆಯಾಗಲಿದೆ. ಕಾರಣ, ಈ ಹಿಂದೆ ಕೆಲವೆಡೆಗಳಲ್ಲಿ ನಾಲೆಯ ಒಳಭಾಗದ ನೀರಿನಿಂದ ಅಂತರ್ಜಲ ಮಟ್ಟದ ಉತ್ತಮವಾಗಿತ್ತು. ಕೊಳವೆ ಬಾವಿಗಳು ಮತ್ತು ಕೆಲ ಕೆರೆಗಳಿಗಳಲ್ಲಿ ನೀರು ಉಳಿದುಕೊಳ್ಳುತ್ತಿತ್ತು. ಆದರೆ ಈಗ ನಾಲೆಯ ಇಬ್ಬದಿಗೆ ಮತ್ತು ತಳಭಾಗಕ್ಕೆ ಸಿಮೆಂಟ್ ಹಾಕುವುದರಿಂದ ಒಂದೇ ಒಂದು ಹನಿ ನೀರು ಭೂಮಿಯಲ್ಲಿ ಇಂಗಲು ಸಾಧ್ಯವಿಲ್ಲವಾಗಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ಸಂಪೂರ್ಣ ಕ್ಷೀಣಿಸಿ ಕೊಳವೆ ಬಾವಿಗಳು ಬತ್ತಿಹೋಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.
ಸಿಮೆಂಟ್ನಲ್ಲಿ ಪ್ಯಾಕ್: ಬಹುತೇಕ ಬರ ಪೀಡಿತ ಪ್ರದೇಶದಲ್ಲಿಯೇ ಹರಿಯುವ ಕಾಲುವೆಯ ನೀರು ಮಣ್ಣಿನಲ್ಲೇ ಹರಿಯುವದರಿಂದ ಭೂಮಿ ತಂಪಾಗಿರುತ್ತಿತ್ತು. ಕೊಳವೆ ಬಾವಿಗಳಲ್ಲಿ ಕುಡಿಯುವ ನೀರಾದರೂ ಸಿಗುತ್ತಿತ್ತು. ಆದರೆ, ಈಗ ಆಧುನೀಕರಣದ ಹೆಸರಲ್ಲಿ ಸಿಮೆಂಟ್ನಲ್ಲಿ ಪ್ಯಾಕ್ ಮಾಡುವುದರಿಂದ ಭೂಮಿಗೆ ನೀರಿಂಗುವುದಿಲ್ಲ.
ಪಾಂಡವಪುರ ತಾಲೂಕಿಗೆ ಅನುಕೂಲ: ಇದರಿಂದ ಮುಂದಿನ ದಿನಗಳಲ್ಲಿ ಸಂತೇಬಾಚಹಳ್ಳಿ ಹಾಗೂ ಶೀಳನೆರೆ ಹೋಬಳಿಯ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುವುದು ಖಚಿತ. ಆದರೆ, ತಾಲೂಕಿನಲ್ಲಿ ನಾಲೆ ನವೀಕರಣ ಮಾಡಿರುವುದರಿಂದ ಪಕ್ಕದಲ್ಲಿರುವ ಪಾಂಡವಪುರ ಮತ್ತು ನಾಗಮಂಗಲ ತಾಲೂಕಿಗೆ ನೀರು ಸರಾಗವಾಗಿ ಹರಿಯಲು ಅನುಕೂಲವಾಗಿದೆ.
ಪಾಂಡವಪುರ ತಾಲೂಕಿಗೆ ನೀರು ವೇಗವಾಗಿ ಹರಿದು ಬರಲಿ ಎಂಬ ಕಾರಣದಿಂದಲೇ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರೇ ಈ ನಾಲೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಸಿದ್ದಾರೆ ಎಂದೂ ತಾಲೂಕಿನ ನಾಗರೀಕರ ಆರೋಪವಾಗಿದೆ.
ಅಗತ್ಯ ಸ್ಥಳಗಳ ಅಭಿವೃದ್ಧಿ ಇಲ್ಲ: ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ನಾಲೆ ಆಧುನೀಕರಣ ಮಾಡಲಾಗುತ್ತಿದ್ದರೂ, ಮುಖ್ಯವಾಗಿ ನಾಲೆಯಲ್ಲಿ ನೀರು ಹರಿಯುವ ಮೇಲ್ಸೇತುವೆ, ಗೇಟ್ವಾಲ್, ಪ್ರಮುಖ ಸೇತುವೆಗಳನ್ನು ದುರಸ್ತಿ ಮಾಡಿಸಿಲ್ಲ. ದಿನಗಳಲ್ಲಿ ಆಧುನಿಕರಣವಾಗಿರುವ ನಾಲೆಯಲ್ಲಿ ಹೆಚ್ಚು ನೀರು ಹರಿಯಬಿಟ್ಟರೆ ಗೇಟ್ವಾಲ್ಗಳ ಬಳಿ ನಾಲುವೆ ಬಿರುಕು ಬಿಡುವ ಸಾಧ್ಯತೆಗಳಿವೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು