ಕಲ್ಲುಗಣಿ ಪ್ರದೇಶಕ್ಕೆ ಹೇಮಾವತಿ ನಾಲೆ ನೀರು ನುಗ್ಗಿ ಝರಿ ನಿರ್ಮಾಣ
Team Udayavani, Jul 31, 2021, 9:01 PM IST
ಮಂಡ್ಯ: ಕಲ್ಲು ಗಣಿಗಾರಿಕೆಯಿಂದ ದೊಡ್ಡ ಹಳ್ಳ ಬಿದ್ದಿರುವುದರಿಂದ ಹೇಮಾವತಿ ನಾಲೆಯ ನೀರು ನುಗ್ಗಿ ಝರಿ ನಿರ್ಮಿಸಿದೆ. ಇದರಿಂದ ಪ್ರವಾಸಿ ತಾಣದಂತೆ ಗೋಚರಿಸುತ್ತಿದೆ.
ಹೌದು, ಮಂಡ್ಯ ತಾಲೂಕಿನ ಅನುಕುಪ್ಪೆ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗಿತ್ತು. ಅತಿ ಆಳವಾಗಿ ಗಣಿಗಾರಿಕೆ ನಡೆಸಿದ್ದರಿಂದ ದೊಡ್ಡ ಹಳ್ಳ ಬಿದ್ದಿದೆ. ಕಳೆದ ಮರ್ನಾಲ್ಕು ದಿನಗಳಿಂದ ಹೇಮಾವತಿ ಜಲಾಶಯದಿಂದ ನೀರು ಹರಿಸುತ್ತಿದ್ದು, ಕಲ್ಲುಗಣಿ ಪ್ರದೇಶದಲ್ಲಿಯೇ ನಾಲೆ ಹಾದು ಹೋಗಿದೆ. ಇದರಿಂದ ನಾಲೆ ನೀರು ಗಣಿ ಪ್ರದೇಶಕ್ಕೆ ನುಗ್ಗಿ ಮೇಲಿನಿಂದ ಝರಿಯಂತೆ ಧುಮುಕುತ್ತಿದೆ.
ಕಳೆದ ಮರ್ನಾಲ್ಕು ದಿನಗಳಿಂದ ಝರಿಯಂತೆ ಹರಿಯುತ್ತಿರುವ ನೀರನ್ನು ನೋಡಲು ಗ್ರಾಮಸ್ಥರು ಬರುತ್ತಿದ್ದಾರೆ. ಅಲ್ಲದೆ, ಸಂಜೆ ವೇಳೆ ಬಂಡೆಗಳ ಮೇಲೆ ಯುವಕರು ಪಾರ್ಟಿ, ಮೋಜು, ಮಸ್ತಿ ಮಾಡಲು ಮುಂದಾಗುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಅರಣ್ಯ ಪ್ರದೇಶದಲ್ಲಿರುವ ಕಲ್ಲು ಪ್ರಸಿದ್ಧಿ ಪಡೆದಿತ್ತು. ಇದನ್ನು ಕುದುರೆ ಮಂಟಿ ಅಥವಾ ಕುದುರೆ ಕಲ್ಲು ಎಂದು ಕರೆಯಲಾಗುತ್ತಿತ್ತು. ಆದರೆ ಕಲ್ಲು ಗಣಿಗಾರಿಕೆಯಿಂದ ಇದು ನಾಶವಾಗಿದೆ. ಅಲ್ಲದೆ ಗಣಿಗಾರಿಕೆಯಿಂದ ಆಳವಾಗಿ ತೋಡಿರುವ ಜಾಗಕ್ಕೆ ಈಗ ಪಕ್ಕದ ಹೇಮಾವತಿ ನಾಲೆಯ ನೀರು ನುಗ್ಗಿದ್ದು, ಮೇಲಿಂದ ನೀರು ಧುಮುಕುತ್ತಿದೆ.
ಅಲ್ಲದೆ ಚಿರತೆ, ಜಿಂಕೆ ಇತರೆ ಪ್ರಾಣಿಗಳಿರುವ ಈ ಅರಣ್ಯ ಪ್ರದೇಶದಲ್ಲಿ ನಾಲೆಯ ನೀರು ತುಂಬುತ್ತಿರುವುದರಿAದ ಪ್ರಾಣಿಗಳಿಗೂ ಕೂಡ ಉಪಯೋಗವಾಗುತ್ತಿದೆ. ಅಲ್ಲದೆ ಜನ-ಜಾನುವಾರುಗಳಿಗೆ, ವ್ಯವಸಾಯಕ್ಕೆ ಕೂಡ ಈ ನೀರು ಅನುಕೂಲವಾಗಲಿದೆ ಎಂದು ಗ್ರಾಮಸ್ಥರೊಬ್ಬರು ಹೇಳಿದರು.
ಗ್ರಾಮದ ಸರ್ವೆ ನಂ.೪೯ರಲ್ಲಿ ನೆಡುತೋಪು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕಾನೂನು ಬಾಹಿರವಾಗಿ ಪರವಾನಗಿ ನೀಡಲಾಗಿತ್ತು. ಅದರ ಅವಧಿ ಕಳೆದ ತಿಂಗಳು ಮುಗಿದಿತ್ತು. ಆದರೆ ನಿಗದಿತಕ್ಕಿಂತ ಹೆಚ್ಚು ಕಲ್ಲು ತೆಗೆಯಲಾಗಿತ್ತು ಹಾಗೂ ಪರವಾನಗಿ ಮುಗಿದಿದ್ದರೂ ಅಕ್ರಮವಾಗಿ ಕಲ್ಲು ತೆಗೆಯಲಾಗುತ್ತಿದೆ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಕಳೆದ ತಿಂಗಳು ತಹಶೀಲ್ದಾರ್ ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿತ್ತು.
ಅಧಿಕಾರಿಗಳ ದಾಳಿಯ ಸಂದರ್ಭದಲ್ಲಿ ಯಾವುದೇ ಗಣಿಗಾರಿಕೆ ನಡೆಯುತ್ತಿರಲಿಲ್ಲ ಎಂದು ವರದಿ ನೀಡಲಾಗಿತ್ತು. ಆದಾದ ಬಳಿಕ ಕಲ್ಲು ಸ್ಫೋಟಿಸಲು ರಾತ್ರೋ ರಾತ್ರಿ ಕುಳಿಗಳನ್ನು ತೋಡಲಾಗಿತ್ತು. ಇದರ ಬಗ್ಗೆ ಗ್ರಾಮಸ್ಥರು ಫೋಟೋ, ವಿಡಿಯೋ ಸಮೇತ ಅಧಿಕಾರಿಗಳಿಗೆ ದೂರು ನೀಡಿದ್ದರು. ಪ್ರಸ್ತುತ ಗಣಿಗಾರಿಕೆ ಸ್ಥಗಿತಗೊಂಡಿದ್ದು, ಪರವಾನಗಿ ನವೀಕರಿಸದಿರಲು ಟಾಸ್ಕ್ಪೋರ್ಸ್ ಸಮಿತಿ ಸಭೆ ತೀರ್ಮಾನಿಸಿತ್ತು. ಆದರೆ ಈಗ ನಾಲೆಯ ನೀರು ನುಗ್ಗಿ ಝರಿ ಸೃಷ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
MUST WATCH
ಹೊಸ ಸೇರ್ಪಡೆ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ