ದೇಶಪ್ರೇಮವಿದ್ದರೆ ಮಗನನ್ನು ಸೈನಿಕನನ್ನಾಗಿ ಮಾಡಲಿ

ಸಿಎಂ ಕುಮಾರಸ್ವಾಮಿಗೆ ಸುಮಲತಾ ತಿರುಗೇಟು

Team Udayavani, Apr 14, 2019, 12:36 PM IST

SUMLATH

ಮಳವಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ದೇಶಪ್ರೇಮವಿದ್ದರೆ ತಮ್ಮ ಮಗನನ್ನು ಸಂಸದನನ್ನಾಗಿ ಮಾಡುವ ಬದಲು ಸೈನಿಕನನ್ನಾಗಿ ಮಾಡಬಹುದಿತ್ತು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ತಿರುಗೇಟು ನೀಡಿದರು.

ಹಲಗೂರು ಹೋಬಳಿಯ ಗೊಲ್ಲರಹಳ್ಳಿ, ಚಿಕ್ಕಎಲಚಗೆರೆ, ದೊಡ್ಡ ಎಲಚಗೆರೆ, ಬ್ಯಾಡರಹಳ್ಳಿ ಕರಲಕಟ್ಟೆ ಮತ್ತು ಹಲಗೂರಿನಲ್ಲಿರೋಡ್‌ ಶೋ ಮುಖಾಂತರ ಮತಯಾಚಿಸಿ ಹಲಗೂರಿನ ವೃತ್ತದಲ್ಲಿ ಮಾತನಾಡಿ, ನಮ್ಮ ದೇಶದ ಗಡಿ ಕಾಯುತ್ತಿರುವ ಸೈನಿಕರಿಂದ ನಾವು ಸುಖವಾಗಿ ಊಟ, ನಿದ್ರೆ, ಮಾಡಿಕೊಂಡು ನೆಮ್ಮದಿಯ ಜೀವನ ಮಾಡುತ್ತಿದ್ದೇವೆ. ಆದರೆ, ಮುಖ್ಯಮಂತ್ರಿಗಳು ಎರಡು ಹೊತ್ತಿನ ಊಟಕ್ಕೆ ತೊಂದರೆ ಇರುವವರು ಸೈನ್ಯಕ್ಕೆ ಸೇರುತ್ತಾರೆ ಎಂಬ ಚುಚ್ಚು
ಮಾತನ್ನಾಡುತ್ತಾರೆ. ಜವಾಬ್ದಾರಿ ಇರುವವರು ಮಾತನಾಡುವ ಮಾತೇ ಇದು ಎಂದು ಪ್ರಶ್ನಿಸಿದರು.

ದೇಶ ಭಕ್ತಿ ಎಂಬುದು ಇವರಿಗೆನು ಗೊತ್ತಿದೆ, ದೇಶ ಭಕ್ತಿ ಇರುವವರು ಯೋಧರಾಗುತ್ತಾರೆ. ಇವರಿಗೆ ಕಾಳಜಿ ಇದ್ದರೆ ಮಗನನ್ನು ಸಂಸದನಾಗುವ ಬದಲು ಸೈನಿಕನಾಗು ಎಂದು ಹೇಳಬಹುದಿತ್ತು ಎಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರೈತರಿಗೆ ನೀಡಿದ ಭರವಸೆಗಳು ಸುಳ್ಳು ಎಂಬುದು ಈಗ ಸಾಬೀತಾಗಿದೆ. ಬರೀದಬ್ಟಾಳಿಕೆ ಮತ್ತು ದ್ವೆ‚àಷದ ರಾಜಕೀಯ ಮಾಡುತ್ತಿದ್ದಾರೆ. ಮಾಧ್ಯಮದವರ ಮೇಲೆ ನಮ್ಮಕಾರ್ಯಕರ್ತರು ಹಲ್ಲೆ ನಡೆಸಿದರೆ ನಾನು ಹೊಣೆಗಾರನಲ್ಲ ಎಂಬ ಬೇಜವಬ್ದಾರಿ ಹೇಳಿಕೆ ನೀಡುತ್ತಾರೆ. ಹದಿನಾರನೇ ತಾರೀಖು ನನ್ನ ಮೇಲೆ ನಾನೇ ಕಲ್ಲು ಹೊಡೆಸಿಕೊಂಡು ನಾನೇ ಅವರ ಮೇಲೆ ಆರೋಪ ಮಾಡುತ್ತೇನೆ ಎಂದು ಹೇಳುತ್ತಾರಲ್ಲ ಇದು ಸರೀನಾ ಎಂದು ಪ್ರಶ್ನಿಸಿದರು.

ಇಡೀ ಸರ್ಕಾರನು °ಎದುರು ಹಾಕಿಕೊಂಡು ನಾನೊಬ್ಬಳೆ ನಿಮ್ಮಗಳ ಧೈರ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಇದು ಇತಿಹಾಸವಾಗಲಿದೆ ನನ್ನನ್ನು ಅರ್ಶಿರ್ವದಿಸಿ ಎಂದರು. ಜಿಲ್ಲೆಯ ಅಭಿವೃದ್ಧಿಗೆ ಅಂಬರೀಶ್‌ ಏನು ಕನಸು ಕಂಡಿದ್ದಾರೋ ಅದನ್ನು ನನಸು ಮಾಡುವ ಆಸೆ ಹೊಂದಿದ್ದು, ನೀವು ಸಹಕಾರ ನೀಡಿ ಎಂದು ಮನವಿ ಮಾಡಿದಚ ಅವರು, ವಿಷ್ಣುವರ್ಧನ್‌ ಸ್ಮಾರಕ ಮಾಡುವುದು ಈಗ ಅವರಿಗೆ ನೆನಪಾಗುತ್ತಿದೆ, ಇಲ್ಲಿಯವರೆಗೂ ಎಲ್ಲಿ ಹೋಗಿತ್ತು ಈ ಅಭಿಮಾನ. ಅಭಿಮಾನಿಗಳು ದಡ್ಡರಲ್ಲ, ಅವರೂ ಸಹ ಎಲ್ಲವನ್ನೂ ನೋಡುತ್ತಿದ್ದಾರೆ. ಈ ರೀತಿಯ ಕುತಂತ್ರ ರಾಜಕಾರಣಿಗಳನ್ನು ದೂರವಿಡಿ ಎಂದರು.

ಇದೇ ಸಂದರ್ಭದಲ್ಲಿ ಅಂಬಿ ಪ್ರಿಯ ಸ್ನೇಹ ಬಳಗದ ಅದ್ಯಕ್ಷರಾದ ದಡಮಹಳ್ಳಿ ಉಮೇಶ್‌ ಮತ್ತು ಸ್ನೇಹಿತರುಗಳಿಂದ ಚುನಾವಣೆ ವೆಚ್ಚಕ್ಕಾಗಿ 10 ಸಾವಿರ ರೂ.ಗಳನ್ನು ನೀಡಲಾಯಿತು

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

ಮಗನಿಗೆ ಮದ್ವೆ ಮಾಡಲು ಹೋಗಿ ಅಪ್ಪನೇ ಮದ್ವೆ ಆದಂತಿದೆ: ಸಚಿವ

ಮಗನಿಗೆ ಮದ್ವೆ ಮಾಡಲು ಹೋಗಿ ಅಪ್ಪನೇ ಮದ್ವೆ ಆದಂತಿದೆ: ಸಚಿವ

Mandya; ಕಾವೇರಿ ನದಿಯಲ್ಲಿ ಈಜಲು ಹೋದ ಮೈಸೂರಿನ ನಾಲ್ವರು ನೀರುಪಾಲು

Mandya; ಕಾವೇರಿ ನದಿಯಲ್ಲಿ ಈಜಲು ಹೋದ ಮೈಸೂರಿನ ನಾಲ್ವರು ನೀರುಪಾಲು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.