ವಧು-ವರರಿಂದ ವಿನೂತನ ಪರಿಸರ ಜಾಗೃತಿ
Team Udayavani, Dec 2, 2019, 4:36 PM IST
ಮಳವಳ್ಳಿ: ವಿವಾಹ ಸಮಾರಂಭಕ್ಕೆ ಆಶೀರ್ವದಿಸಲು ಬಂದವರಿಗೆ ನೂತನ ವಧು–ವರರು ಸಸಿ ವಿತರಿಸುವ ಮೂಲಕ ಪರಿಸರ ಪ್ರೇಮ ಮೆರೆದರು.
ಹಲಗೂರು ಗ್ರಾಪಂ ಅಧ್ಯಕ್ಷೆ ಮಂಗಳಮ್ಮ ತಮ್ಮ ಮಗಳ ಮದುವೆ ಸಮಾರಂಭ ನಡೆಯುತ್ತಿದ್ದ ಸಂದರ್ಭದಲ್ಲಿ ವಧು–ವರರಿಗೆ ಶುಭ ಹಾರೈಸಲು ಬಂದಿದ್ದ ಗಣ್ಯರಿಗೆ ತಾಂಬೂಲ ನೀಡುವುದರ ಬದಲು ಸಸಿ ನೀಡಿ ನಿಮ್ಮ ಮನೆಯಂಗಳದಲ್ಲಿ ಸಸಿ ನೆಟ್ಟು ಪರಿಸರ ರಕ್ಷಿಸುವಂತೆ ಮನವಿ ಮಾಡಿದರು.
ಸುಮಾರು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೀಡಿ ಪರಿಸರ ಜಾಗೃತಿ ಸಂದೇಶ ಸಾರಿದರು. ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಇದರಿಂದ ಹೆಚ್ಚು ಆರೋಗ್ಯ ಸಮಸ್ಯೆ ಎಲ್ಲರನ್ನೂ ಕಾಡುತ್ತಿದ್ದು, ಮೊದಲು ನಮಗೆ ಉತ್ತಮ ಆಮ್ಲಜನಕ ದೊರಕಬೇಕು. ಇತ್ತೀಚಿನ ದಿನಗಳಲ್ಲಿರಸ್ತೆ ಅಗಲೀಕರಣ ಮತ್ತಿತರ ಕಾರಣಗಳಿಂದ ಮರ ಕಡಿಯಲಾಗುತ್ತಿದೆ. ಇದರಿಂದ ಸಕಾಲಕ್ಕೆ ಮಳೆಯಾಗದೆ ತುಂಬಾ ತೊಂದರೆಯಾಗುತ್ತಿದೆ. ಮಳೆ ಬರಬೇಕಾದರೆ ಹೆಚ್ಚು ಹೆಚ್ಚು ಗಿಡ–ಮರ ಬೆಳೆಸಬೇಕು. ಆದ್ದರಿಂದ ತನ್ನ ಮಗಳ ಮದುವೆಯಲ್ಲಿ ತಾಂಬೂಲ ನೀಡುವುದರ ಬದಲಾಗಿ ಸಸಿ ನೀಡಿ ಅದನ್ನು ಸಂರಕ್ಷಿಸುವಂತೆ ತಿಳಿಸಲಾಗುತ್ತಿದೆ ಎಂದು ಮಂಗಳಮ್ಮ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
Lok Sabha Elections: ಎಚ್ಡಿಕೆ ಆಯ್ಕೆಯಾದರೆ ಕಾವೇರಿ ವಿವಾದಕ್ಕೆ ಪರಿಹಾರ: ಅಶೋಕ್
ಡಿಕೆಶಿಗೆ ಸಿದ್ದರಾಮಯ್ಯ ಏಕೆ ಸಿಎಂ ಸ್ಥಾನ ಬಿಟ್ಟುಕೊಡಲಿಲ್ಲ: ಪ್ರತಾಪಸಿಂಹ ಪ್ರಶ್ನೆ