ರಸ್ತೆ ಡಾಂಬರೀಕರಣದಲ್ಲಿ ಅವ್ಯವಹಾರ: ಆರೋಪ
Team Udayavani, May 24, 2022, 5:50 PM IST
ಕಿಕ್ಕೇರಿ: ಹೋಬಳಿಯ ಕೋಡಿಮಾರನಹಳ್ಳಿ ಗ್ರಾಮ ದಲ್ಲಿ ನಡೆದಿರುವ ರಸ್ತೆ ಡಾಂಬರೀಕರಣ ಕಾಮಗಾರಿಸಂಪೂರ್ಣ ಕಳಪೆಯಾಗಿದ್ದು ಅವ್ಯವಹಾರ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತಿಂಗಳ ಹಿಂದೆ ಕಾವೇರಿ ಜಲಾನಯನಯೋಜನೆಯಲ್ಲಿ ಗ್ರಾಮದ ಬಿಎಂ ರಸ್ತೆಯಿಂದರಾಯಕಾಲುವೆ ಅಚ್ಚುಕಟ್ಟು, ಚೈತನ್ಯ ಕಾನ್ವೆಂಟ್ವರೆಗೆ ನಡೆದಿರುವ ಕಾಮಗಾರಿ ನೆಪಕ್ಕೆ ಮಾಡಿದಂತಿದೆ.41.8ಲಕ್ಷ ರೂ.ಗಳ ಕಾಮಗಾರಿಯಲ್ಲಿ ಶೇ.25ಗುಣಮಟ್ಟದ ಕಾಮಗಾರಿ ನಡೆದಿಲ್ಲ. ನೆಪಕ್ಕೆ ಜಲ್ಲಿಜಲ್ಲಿ, ಇದರ ಮೇಲೆ ಒಂದಿಷ್ಟು ಡಾಂಬರು ಪುಡಿ ಹರಡಿದಂತಿದೆ. ಡಾಂಬರು ಕೆರೆದರೆ ಮಣ್ಣು, ಡಾಂಬರು ಪುಡಿಗೆ ಕೈಗೆ ರಾಶಿ ರಾಶಿಯಾಗಿ ಬರುತ್ತಿದೆ. ಸಂಪೂರ್ಣ ಅವೈಜ್ಞಾನಿಕವಾಗಿ ರಾತ್ರಿ ವೇಳೆ ಕಾಮಗಾರಿ ನಡೆದಿದೆ ಎಂದು ದೂರಿದ್ದಾರೆ.
ಸಚಿವ ಕೆ.ಸಿ.ನಾರಾಯಣಗೌಡರ ವಿಶೇಷ ಅಧಿಕಾರಿ ಡಾ.ಎಚ್.ಟಿ.ಪ್ರಕಾಶ್ ಕಿಕ್ಕೇರಿಗೆ ಬರುತ್ತಿರುವ ವಿಷಯ ತಿಳಿದು ಗ್ರಾಮಸ್ಥರು ಅಧಿಕಾರಿಗಳನ್ನು ರಸ್ತೆಕಾಮಗಾರಿ ವೀಕ್ಷಣೆ ಮಾಡಲೇಬೇಕು ಎಂದು ಪಟ್ಟು ಹಿಡಿದು ಸ್ಥಳಕ್ಕೆ ಕರೆದುಕೊಂಡು ಹೋದರು.
ತೆರಿಗೆ ಹಣ ಪೋಲು: ರಸ್ತೆಯಲ್ಲಿನ ಡಾಂಬರು ಕೈಯಲ್ಲಿ ಕೆರೆದು ಮಣ್ಣು, ಡಾಂಬರು ಗುಡ್ಡೆ ಹಾಕಿ ದರು. ಅಲ್ಲಲ್ಲಿ ಗುಂಡಿ ಬಿದ್ದಿರುವುದನ್ನು ತೋರಿಸಿದರು. ಯಾರದೋ ಗುತ್ತಿಗೆದಾರರ ಹೆಸರಿನಲ್ಲಿ ಉಪಗುತ್ತಿಗೆಗಳನ್ನು ಸಚಿವರ ಆಪ್ತರು, ಪಡೆದು ಕಳಪೆ ಕಾಮಗಾರಿ ಮಾಡುತ್ತಿದ್ದು, ಈ ದಂಧೆಗೆ ಕಡಿವಾಣವೇ ಇಲ್ಲವಾಗಿದೆ. ಸಚಿವರು ವಿಶೇಷ ಕಾಳಜಿ ವಹಿಸಿ ರಸ್ತೆ ಅಭಿವೃದ್ಧಿ ಮಾಡಲು ಅನುದಾನ ನೀಡಿದರೆ, ಇವರ ಹೆಸರಿಗೆ ಮಸಿ ಬಳಿಯುವಂತೆ ಪರ್ಸೆಂಟೇಜ್ ರೀತಿ ಕೆಲಸ ನಡೆಯುತ್ತಿದೆ. ಸರ್ಕಾರಕ್ಕೆ ನಾವು ಕಟ್ಟುತ್ತಿರುವ ತೆರಿಗೆ ಹಣ ಅಪವ್ಯಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಚರಿಸಲು ಕಷ್ಟ: ಭೂಮರಾ ಬಿಲ್ಡರ್ ಹೆಸರಿನಲ್ಲಿ ಕಾಮಗಾರಿ ನಡೆದರೂ ಈ ಕಾಮಗಾರಿ ಮಾಡಿರುವುದು ಬಿಜೆಪಿ ಹೋಬಳಿ ಅಧ್ಯಕ್ಷ ಚಿಕ್ಕತರಹಳ್ಳಿ ಗುತ್ತಿಗೆದಾರ ನಾಗೇಶ್. ಸಚಿವರಿಗೆ ತಮ್ಮ ಸಮಸ್ಯೆ ಕೇಳಿಕೊಳ್ಳಲು ಕಷ್ಟವಾಗುತ್ತಿದೆ. ಲಕ್ಷಾಂತರ ರೂ. ಕಬಳಿಸಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿರಸ್ತೆಯನ್ನು ಗುಣಮಟ್ಟದಿಂದ ಮಾಡಿಸಿಕೊಡಿ. ಈ ರಸ್ತೆಯ ಮಾರ್ಗವಾಗಿಯೇ ಜಮೀನುಗಳಿಗೆ ತೆರಳ ಬೇಕಿದೆ. ಶಾಲೆಗಳಿಗೆ ಮಕ್ಕಳು ಈ ಮಾರ್ಗವಾಗಿಯೇ ಓಡಾಡಬೇಕಿದೆ. ಶಾಲಾ ವಾಹನ ಓಡಾಡಲು ಕಷ್ಟವಾಗಿದೆ. ಹೊಸದಾಗಿ ನಿರ್ಮಿಸಿರುವ ಈ ರಸ್ತೆಯಲ್ಲಿಕೇವಲ ಎತ್ತಿನಗಾಡಿ ಓಡಾಡಿ ಗುಂಡಿ ಬಿದ್ದಿವೆ. ರಸ್ತೆಗೆಇಲ್ಲಿರುವ ಕೆಮ್ಮಣ್ಣು ಬಳಸಿಕೊಂಡಿದ್ದಾರೆ ಎಂದು ಅವಲತ್ತುಕೊಂಡರು.
ಡಾಂಬರು ಕೆರೆದರೆ ಮಣ್ಣು ಕಾಣಿಸುತ್ತದೆ:ಡಾಂಬರು ನೆಪ ಮಾತ್ರಕ್ಕೆ. ಮಣ್ಣಿನ ಮೇಲೆ ಡಾಂಬರು ಪುಡಿ ಎರಚಿದ್ದಾರೆ. ಡಾಂಬರು ಹಾಕಿದ ಕೆಲವೇ ದಿನದಲ್ಲಿ ಕಿತ್ತುಬಂದಿದೆ. ಅಲ್ಲಲ್ಲಿ ಗುಂಡಿ ಬಿದ್ದಿದೆ.ಲಕ್ಷಾಂತರ ರೂ. ಗುತ್ತಿಗೆದಾರ ಕಬಳಿಸಿದ್ದಾರೆ ಎನ್ನುವುದುಗ್ರಾಮಸ್ಥ ಕೋಳಿ ಸುರೇಶ್ ಅವರ ಆರೋಪವಾಗಿದೆ. ಮುಖಂಡರಾದ ಕೋಳಿ ಸುರೇಶ್, ಮಂಜುನಾಥ್, ಶಶಿಕುಮಾರ್, ಮಂಜು, ಬಾಲರಾಜು ಇದ್ದರು.
ಕಳಪೆ ಕಾಮಗಾರಿ ನಡೆದಿರುವುದು ಕಣ್ಣಿಗೆ ಕಾಣುತ್ತಿದ್ದು, ಪರಿಶೀಲನೆ ನಡೆಸಿ ಸೂಕ್ತ ಕ್ರಮವಹಿಸಲು ಅಧಿಕಾರಿಗಳಿಗೆ ತಿಳಿಸಲಾಗುವುದು. – ಡಾ.ಪ್ರಕಾಶ್, ಸಚಿವ ಕೆ.ಸಿ.ನಾರಾಯಣಗೌಡರ ವಿಶೇಷ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ