ಆಯುಷ್ಮಾನ್ ಆರೋಗ್ಯಚೀಟಿ ವಿತರಣೆ
Team Udayavani, Oct 21, 2019, 4:57 PM IST
ಮಂಡ್ಯ: ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಸಂಸದೆ ಸುಮಲತಾ ಅವರ ಗೃಹಕಚೇರಿಯಲ್ಲಿ ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಆರೋಗ್ಯ ಚೀಟಿ ವಿತರಣೆ ಮಾಡಲಾಯಿತು.
ಗುರುತಿನ ಚೀಟಿ ಉಚಿತ ವಿತರಣೆಗೆ ಪ್ರಧಾನಮಂತ್ರಿ ಜನಕಲ್ಯಾಣಾಧಿಕಾರಿ ಯೋಜನೆಗಳ ಅಭಿಯಾನದ ರಾಜ್ಯಾಧ್ಯಕ್ಷೆ ಡಾ. ರೂಪಾ ಅಯ್ಯರ್ ಚಾಲನೆ ನೀಡಿ ಮಾತನಾಡಿದರು. ಕೇಂದ್ರಸರ್ಕಾರದ ಜನಕಲ್ಯಾಣಯೋಜನೆಗಳನ್ನು ಸಂಸದೆ ಸುಮಲತಾ ಅವರ ನೇತೃತ್ವದಲ್ಲಿ ಫಲಾನುಭವಿ ಗಳಿಗೆ ಹಂತಹಂತವಾಗಿ ತಲುಪಿಸಲು ಮುಂದಾಗಿ ದ್ದೇವೆ, ನಾಗರೀಕರು ಮತ್ತು ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಫಲಾನುಭವಿಗಳು ಸದುಪಯೋಗ ಪಡೆಯುವಂತೆ ತಿಳಿಸಿದರು.
ಆಯುಷ್ಮಾನ್ ಆರೋಗ್ಯಚೀಟಿಯ ಫಲಾನುಭವಿಗಳು ಆಕಸ್ಮಿಕವಾಗಿ ಅನಾರೋಗ್ಯಕ್ಕೆ, ಅಪಘಾತಕ್ಕೆ ಒಳಗಾದಾಗ ದುಬಾರಿ ಶುಲ್ಕ ಭರಿಸಲು ಪರದಾಡುವ ಸ್ಥಿತಿ ಬರುವುದಿಲ್ಲ. ದೂರದಲ್ಲಿ ದುಬಾರಿ ವೆಚ್ಚದ ಅನಾರೋಗ್ಯಕ್ಕೆ ಒಳಗಾದಾಗ ಚೀಟಿ ಉಪಯೋಗಕ್ಕೆ ಬರುತ್ತದೆ. ಎಲ್ಲರೂ ಫಲಾನುಭವಿಗಳಾಗಬಹುದು ಎಂದು ಸಲಹೆ ನೀಡಿದರು.
ಮಂಡ್ಯದಲ್ಲಿ ಅಂಬರೀಶ್ ಅಭಿಮಾನಿಗಳ ಸಂಘದ ಸಹಕಾರದಲ್ಲಿ ವ್ಯವಸ್ಥಿತವಾಗಿ ಜನರಿಗೆ ಆಯುಷ್ಮಾನ್ ಆರೋಗ್ಯ ಚೀಟಿಗಳನ್ನು ನೀಡಲಾಗುತ್ತಿದೆ. ಜನರು ಇಂತಹ ಯೋಜನೆ ಗಳನ್ನು ಸದುಪ ಯೋಗಪಡಿಸಿಕೊಳ್ಳಲು ಮುಂದಾಗಬೇಕಿದೆ ಎಂದರು. ಇದೇ ವೇಳೆ ನೂರಾರು ಮಂದಿ ತಮ್ಮ ಆಧಾರ್ ಚೀಟಿಯೊಂದಿಗೆ ಆಗಮಿಸಿ, ಸಾಲಿನಲ್ಲಿ ನಿಂತು ಆಯುಷ್ಮಾನ್ ಆರೋಗ್ಯ ಚೀಟಿಗಾಗಿ ನೋಂದಣಿ ಮಾಡಿಸಿ, ಸ್ಥಳದಲ್ಲೇ ಪಡೆದುಕೊಂಡರು. ಅಂಬರೀಶ್ ಅಭಿಮಾನಿಗಳ ಸಂಘದವರಾದ ಬೇಲೂರು ಸೋಮಶೇಖರ್, ಬಸೀರ್ ಅಹಮದ್, ಪ್ರದೀಪ್ ಸಿದ್ದೇಗೌಡ, ಕಾರ್ತಿಕ್, ಹಿತೇಶ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
MUST WATCH
ಹೊಸ ಸೇರ್ಪಡೆ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ