ಸಾಹಿತಿಗಳು ಸಂಸ್ಕೃತಿಯ ಸಂರಕ್ಷರು: ಪ್ರೊ.ಭೈರವಮೂರ್ತಿ
Team Udayavani, Sep 3, 2017, 4:17 PM IST
ಮಂಡ್ಯ: ಸಾಹಿತಿಗಳು ಸಂಸ್ಕೃತಿಯ ಸಂರಕ್ಷಕರು ಹಾಗೂ ಕನ್ನಡದ ಶಕ್ತಿ ಕೇಂದ್ರಗಳಾಗಿದ್ದಾರೆ.
ಸಾಹಿತಿಗಳನ್ನು ಸಂರಕ್ಷಿಸಿದರೆ ಕನ್ನಡ ಸಂರಕ್ಷಿಸಿದಂತೆ ಎಂದು ಹಿರಿಯ ಸಾಹಿತಿ ಪ್ರೊ.ಕೆ.ಭೈರವಮೂರ್ತಿ ಅಭಿಪ್ರಾಯಪಟ್ಟರು.
ನಗರದ ಗಾಂಧಿಭವನದಲ್ಲಿ ಸಂಸ್ಕೃತಿ ಸಂಘಟನೆ ಹಮ್ಮಿಕೊಂಡಿದ್ದ ಸಾಹಿತಿ ದಂಪತಿಗಳಿಗೆ ತವರಿನ
ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತಿಗಳು ಸಮಾಜಕ್ಕೆ ನೀಡುವ ಬೆಳಕು ಮತ್ತು ಮಾದರಿಯಿಂದ ಸಂಸ್ಕಾರ ದೊರೆಯುತ್ತದೆ.
ಇದರಿಂದ ಬದುಕಿನ ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ. ಸಾಹಿತಿಗಳು ಬೆಳಕು ಮತ್ತು
ಮಾದರಿಯನ್ನು ಮಾನವ ಹಾಗೂ ಸಮಾಜಕ್ಕೂ ಹಂಚಬೇಕು. ಸಾಧಕರು ಸಮಾಜಕ್ಕೆ ಬೆಳಕು
ನೀಡುತ್ತಾರೆ. ಪರಿಪೂರ್ಣತೆಯನ್ನು ಹುಡುಕುವುದೇ ಸಂಸ್ಕೃತಿಯ ಲಕ್ಷಣ ಎಂದು ಹೇಳಿದರು.
ಕ್ರಿಯಾಶೀಲರಾಗಿರಬೇಕು: ಸಂಸ್ಕೃತಿಯು ಬದುಕಿಗೆ ಸುಕೃತಿ ತಂದುಕೊಡಲಿದೆ. ಸಾಹಿತಿಗಳು ಸುಮ್ಮನೆ ಕೂರಬಾರದು. ಕೊನೆಯ ಉಸಿರುವವರೆಗೂ ಕ್ರಿಯಾಶೀಲರಾಗಿ ಸಂಸ್ಕೃತಿ ಉಳಿಸುವ, ಸಮಾಜವನ್ನು ತಿದ್ದುವ ಹಾಗೂ ಉತ್ತಮ ಸಮಾಜ ರೂಪಿಸಲು ಕೆಲಸ ಮಾಡುತ್ತಲೇ ಇರಬೇಕು. ಅವರು ನಿಜವಾದ ಉತ್ತಮ ಸಾಹಿತಿಗಳಾಗಿ ಉಳಿದುಕೊಳ್ಳುತ್ತಾರೆ ಎಂದು ತಿಳಿಸಿದರು.
ಮಾನವೀಯ ಕಳಕಳಿ: ಸಾಹಿತಿಗಳಲ್ಲಿ ಮಾನವೀಯ ಕಳಕಳಿ ಹೆಚ್ಚಿರುತ್ತದೆ. ಮಾನವ ಧರ್ಮಕ್ಕೆ ಜೀವನ ಮೀಸಲಿಡಬೇಕು. ಕಾಯಕ ನಿಷ್ಠೆ, ಧರ್ಮ ನಿಷ್ಠೆಯನ್ನು ಸಾಹಿತಿಗಳಲ್ಲಿ ಕಾಣಲು ಸಾಧ್ಯ.
ಪ್ರತಿಯೊಬ್ಬರೂ ತಮಗೆ ತಾವೇ ನೀತಿ ಸಂಹಿತೆ ಅಳವಡಿಸಿಕೊಳ್ಳಬೇಕು. ವಿದ್ಯೆ ಜೊತೆಗೆ ವಿನಯ
ಇದ್ದರೆ ಜ್ಞಾನ ಸಂಪತ್ತು ಲಭಿಸುತ್ತದೆ. ಆದರೆ, ಯಾರೂ ಪರಿಪೂರ್ಣರಲ್ಲ. ಸಾಹಿತಿಗಳು ಕೂಡ
ಜ್ಞಾನ ತಪಸ್ವಿಗಳಾಗಿದ್ದಾರೆ. ಸಾಹಿತ್ಯ ಲೋಕಕ್ಕೆ ಸಾಹಿತಿ ದಂಪತಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶ್ಲಾಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ