ಜೆಡಿಎಸ್ನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ
ನ.2ಕೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ,ಸದಸ್ಯರ ಸೆಳೆಯಲು ಆಕಾಂಕ್ಷಿಗಳ ಕಸರತ್ತು
Team Udayavani, Oct 27, 2020, 1:18 PM IST
ಮಂಡ್ಯ: ಮುಂದಿನ ತಿಂಗಳು ನ.2ರಂದು ಮಂಡ್ಯ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಆಕಾಂಕ್ಷಿತರು ಸದಸ್ಯರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ.
ಕಳೆದ 2 ವರ್ಷ ಮೀಸಲಾತಿ ಗೊಂದಲದಿಂದ ನೆನೆಗುದಿಗೆ ಬಿದ್ದಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ನ.2ರೊಳಗೆ ಚುನಾವಣೆ ಮುಗಿಸುವಂತೆ ಸೂಚಿಸಿದೆ. ಈ ಹಿಂದೆ ಮೀಸಲಾತಿ ಬಗೆಹರಿಸಿ, ಅ.20ರಂದು ಚುನಾವಣೆನಿಗದಿಪಡಿಸಲಾಗಿತ್ತು. ಆದರೆ, ಹಾಸನ ನಗರಸಭೆಯ ಮೀಸಲಾತಿ ಗೊಂದಲದಿಂದ ಮತ್ತೆ ತಡೆ ನೀಡಲಾಗಿತ್ತು. ನಗರಸಭೆ ಒಟ್ಟು ಸದಸ್ಯರ ಬಲಾಬಲ 35 ಸದಸ್ಯರಿದ್ದು, ಇದರಲ್ಲಿ ಜೆಡಿಎಸ್ 18, ಕಾಂಗ್ರೆಸ್ 10, ಬಿಜೆಪಿ 2, ಪಕ್ಷೇತರರು 5 ಮಂದಿ ಇದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿದೆ.
ಜೆಡಿಎಸ್ಗೆ ಬಹುಮತ ಹೆಚ್ಚಳ: ಈಗಾಗಲೇ ಜೆಡಿಎಸ್ಗೆ ಸ್ಪಷ್ಟ ಬಹುಮತವಿದ್ದು, ಅಧಿಕಾರ ಹಿಡಿಯುವುದು ಖಚಿತವಾಗಿದೆ. ಇದರೊಂದಿಗೆ ಮೂವರು ಪಕ್ಷೇತರರುಸೇರ್ಪಡೆಗೊಳ್ಳುವ ಮೂಲಕ ಬಲ ಹೆಚ್ಚಿದೆ. ಬಹುಮತಕ್ಕೆ 18 ಸದಸ್ಯರು ಬೇಕಾಗಿದೆ. ಈಗ ಜೆಡಿಎಸ್ ಬತ್ತಳಿಕೆಯಲ್ಲಿ 21 ಸದಸ್ಯರ ಬಲವಿದ್ದು, ಶಾಸಕರು ಸೇರಿದಂತೆ ಆ ಸಂಖ್ಯೆ 22ಕ್ಕೇರಿಕೆಯಾಗಿದೆ.
ಆಕಾಂಕ್ಷಿತರ ಲಾಬಿ: ಈ ಹಿನ್ನೆಲೆಯಲ್ಲಿ ಜೆಡಿಎಸ್ನಲ್ಲಿ ಹೆಚ್ಚಿನ ಆಕಾಂಕ್ಷಿತರಿದ್ದಾರೆ. 20ನೇ ವಾರ್ಡ್ನ ಎಚ್. ಎಸ್.ಮಂಜು, 1ನೇ ವಾರ್ಡ್ನ ನಾಗೇಶ್, 19ನೇ ವಾರ್ಡ್ನ ಮಂಜುಳಾಉದಯಶಂಕರ್, 6ನೇ ವಾರ್ಡ್ ನ ಟಿ.ರವಿ, 15ನೇ ವಾರ್ಡ್ನ ಮೀನಾಕ್ಷಿ ಪುಟ್ಟಸ್ವಾಮಿ ಮುಂಚೂಣಿಯಲ್ಲಿದ್ದಾರೆ. ಎಲ್ಲರೂ ಸದಸ್ಯರ ಸೆಳೆಯುವ ಪ್ರಯತ್ನದಲ್ಲಿದ್ದು, ಅಧ್ಯಕ್ಷ ಸ್ಥಾನಕ್ಕೆಇನ್ನಿಲ್ಲದ ಲಾಬಿ ನಡೆಸುತ್ತಿದ್ದಾರೆ.
ಶಾಸಕರಿಂದ ಅಭಿಪ್ರಾಯ ಸಂಗ್ರಹ: ಶಾಸಕ ಎಂ.ಶ್ರೀನಿವಾಸ್ಅವರು ಈಗಾಗಲೇ ಸದಸ್ಯರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.ಯಾರ ಪರ ಎಷ್ಟು ಸದಸ್ಯರಿದ್ದಾರೆ ಎಂಬ ಮಾಹಿತಿ ಪಡೆದುಕೊಂಡಿದ್ದು, ವರಿಷ್ಠರ ಗಮನಕ್ಕೆ ತಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಘೋಷಿಸುವ ಸಾಧ್ಯತೆ ಇದೆ. 20ನೇ ವಾರ್ಡ್ನ ಎಚ್.ಎಸ್.ಮಂಜು ಹಾಗೂ 19ನೇ ವಾರ್ಡ್ನ ಮಂಜುಳಾ ಉದಯ್ ಶಂಕರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಮಹಿಳಾ ಸದಸ್ಯರ ಮೂಲಕ ಮಂಜುಳಾ ಉದಯ ಶಂಕರ್ ಶಾಸಕರಿಗೆ ಒತ್ತಡ ಹಾಕುತ್ತಿದ್ದಾರೆ. ಇತ್ತ ಎಚ್. ಎಸ್.ಮಂಜು ಸಹ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ ಸ್ಥಾನಕ್ಕೇರಲು ಕಸರತ್ತು ನಡೆಸುತ್ತಿದ್ದಾರೆ. ಇವರಿಬ್ಬರಲ್ಲಿ ಒಬ್ಬರಿಗೆ ಬಹುತೇಕ ಅಧ್ಯಕ್ಷ ಸ್ಥಾನ ಖಚಿತ ಎನ್ನಲಾಗುತ್ತಿದೆ.
ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ: ಜೆಡಿಎಸ್ನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ ಶುರುವಾಗಿದೆ. 14ನೇ ವಾರ್ಡ್ನ ಮಹದೇವು, 16ನೇ ವಾರ್ಡ್ನ ಮಂಗಳ ಪುಟ್ಟಸ್ವಾಮಿ, 13ನೇ ವಾರ್ಡ್ನ ಮುಜೂರ್ ಹೆಸರು ಕೇಳಿ ಬರುತ್ತಿದೆ. ಮೂವರಲ್ಲಿ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಕೈ ಎತ್ತುವ ಮೂಲಕ ಮತದಾನ : ಚುನಾವಣೆಯಲ್ಲಿ ಭಾಗವಹಿಸುವ ಸದಸ್ಯರುಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಮತ ಚಲಾಯಿಸಿ, ನಂತರ ಪುಸ್ತಕದಲ್ಲಿ ಸಹಿ ಹಾಕುವಪ್ರಕ್ರಿಯೆ ಮೂಲಕ ಚುನಾವಣೆ ನಡೆಯಲಿದೆ. ಗೈರಾಗುವ ಸದಸ್ಯರು ಹಾಗೂ ಹಾಜರಿದ್ದು ಯಾರ ಪರವೂ ಮತ ಹಾಕದಿದ್ದರೆ ಅಂಥವರನ್ನು ತಟಸ್ಥರೆಂದು ತೀರ್ಮಾನಿಸಲಾಗುತ್ತದೆ. ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ.
ಅಧಿಕಾರಾವಧಿ ಹಂಚಿಕೆ ಸೂತ್ರ : ಜೆಡಿಎಸ್ನಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ ಅಧಿಕಾರಾವಧಿ ಹಂಚಿಕೆ ಸೂತ್ರ ನಡೆಯಬಹುದು. ಆಕಾಂಕ್ಷಿತರು ಹೆಚ್ಚಾಗಿರುವುದರಿಂದ ಒಪ್ಪಂದಗಳು ಏರ್ಪಡುವ ಮಾತುಗಳು ಕೇಳಿ ಬರುತ್ತಿದೆ. ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪುರುಷ ಸದಸ್ಯರಿಗೆ ನೀಡುವ ಯೋಜನೆಯೂ ಇದೆ. ಇಲ್ಲದಿದ್ದರೆ ಅದು ಬದಲಾಗುವ ಸಾಧ್ಯತೆಯೂ ಇದ್ದು, ಮೊದಲ ಅವಧಿ ಎರಡೂ ಸ್ಥಾನಗಳಿಗೆ ಪುರುಷರಿಗೆ ನೀಡಿ, ಎರಡನೇ ಅವಧಿ ಮಹಿಳೆಯರಿಗೂ ನೀಡುವ ಒಪ್ಪಂದ ತಳ್ಳಿ ಹಾಕುವಂತಿಲ್ಲ.
ಚುನಾವಣೆ ಪ್ರಕ್ರಿಯೆ : ನ.2ರ ಬೆಳಗ್ಗೆ 9ರಿಂದ 10ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮಧ್ಯಾಹ್ನ 12ರಿಂದ 12.15ರವರೆಗೆ ನಾಮಪತ್ರಗಳಪರಿಶೀಲನೆ ನಡೆಯಲಿದೆ. ಮಧ್ಯಾಹ್ನ 12.15ರಿಂದ 12.25ರವರೆಗೆ ನಾಮಪತ್ರಗಳನ್ನು ಕಾನೂನು ಬದ್ಧವಾಗಿ ಹಿಂಪಡೆಯಲು ಅವಕಾಶನೀಡಲಾಗಿದ್ದು, ನಂತರ ಅವಶ್ಯಕತೆ ಇದ್ದಲ್ಲಿ ಚುನಾವಣೆ ನಡೆಯಲಿದೆ.
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ