ಹಾಲು ಹಗರಣ ಎನ್ಡಿಡಿಬಿಗೆ ವಹಿಸಿ
Team Udayavani, Jun 10, 2021, 8:51 PM IST
ಮಂಡ್ಯ: ಮನ್ಮುಲ್ನಲ್ಲಿ ನಡೆದಿರುವಹಾಲು-ನೀರು ಹಗರಣವನ್ನು ರಾಷ್ಟ್ರೀಯ ಡೇರಿಅಭಿವೃದ್ಧಿ ಮಂಡಳಿಯ ತನಿಖೆಗೆ ವಹಿಸಬೇಕುಎಂದು ಮನ್ಮುಲ್ ಸಂಸ್ಥಾಪಕ ಅಧ್ಯಕ್ಷನರಸಿಂಹೇಗೌಡ ಒತ್ತಾಯಿಸಿದರು.
ಹಾಲು-ನೀರು ಬೆರೆಸಿ ಹಾಲು ಸರಬರಾಜುಮಾಡಿದ್ದರಿಂದ ಒಕ್ಕೂಟಕ್ಕೆ ಹಾಗೂ ಗ್ರಾಹಕರಿಗೆ ನಷ್ಟಉಂಟಾಗಿದೆ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಅಲ್ಲದೆ, ಇದರ ಬಗ್ಗೆ ದೊಡ್ಡ ಮಟ್ಟದಹೋರಾಟ ಮಾಡಲು ಎಲ್ಲ ಹಿರಿಯ ಸಹಕಾರಿಗಳುಒಗ್ಗೂಡಲಿದ್ದೇವೆ. ಇದರ ಜತೆಗೆ ಹಾಲು ಉತ್ಪಾದಕರನ್ನು ಕರೆದು ಹೋರಾಟ ರೂಪಿಸಲಾಗುವುದುಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಲು-ನೀರು ಬೆರೆಸಿದ ಮೊದಲ ದಿನವೇಇದನ್ನು ಅ ಧಿಕಾರಿಗಳು ಕಂಡು ಹಿಡಿಯಬಹುದಾಗಿತ್ತು. ಆದರೆ ಇದರಲ್ಲಿ ಆಡಳಿತ ಮಂಡಳಿ ಹಾಗೂಅ ಧಿಕಾರಿಗಳು ವಿಫಲರಾ ಗಿದ್ದಾರೆ. ಹಾಲಿನ ಘನಾಂಶಶೇ.8.5ರಷ್ಟು ಕಡಿಮೆ ಬಂದರೆ ಹಾಲಿನ ದರಕಡಿತಗೊಳಿಸಲಾ ಗುತ್ತದೆ. ಆದರೆ ಇದು ಯಾವುದೂಇಲ್ಲಿ ಪಾಲನೆ ಯಾಗಿಲ್ಲ. ಬಿಎಂಸಿಯಿಂದ ಪರೀಕ್ಷೆಮಾಡಿ ಕಳುಹಿ ಸುತ್ತಿದ್ದ ಅಧಿ ಕಾರಿಗಳು, ಲಾರಿ ವಾಹನಚಾಲ ಕರು, ವ್ಯವಸ್ಥಾಪಕರು, ಆಡಳಿತ ಮಂಡಳಿಸಂಪೂ ರ್ಣವಾಗಿ ವಿಫಲವಾಗಿದೆ ಎಂದರು.ಮೆಗಾಡೇರಿ ಸ್ಥಾಪಿಸಲು ಪ್ರಾರಂಭ ಮಾಡಿದ್ದು,ನಿಗದಿತ ಅವ ಧಿಯಲ್ಲಿ ಪೂರ್ಣಗೊಂಡಿಲ್ಲ.ನಿಯಮಾವಳಿ ಪ್ರಕಾರ ಒಂದೂವರೆ ವರ್ಷದೊಳಗೆಪೂರ್ಣಗೊಳಿಸಬೇಕು. ಇದರಿಂದ ಒಕ್ಕೂಟಕ್ಕೆತುಂಬಲಾರದ ನಷ್ಟವುಂಟಾಗಿದೆ. ಇದರಿಂದ ಅವರುವಿ ಧಿಸಿದ ದಂಡದ ಹಣ ಕಟ್ಟಿಕೊಡಬೇಕು.
ಒಕ್ಕೂಟದಲ್ಲಿ ದಾಸ್ತಾನಿರುವ ಬೆಣ್ಣೆ ಮತ್ತು ಹಾಲಿನಪುಡಿ ಮೇಲಿನ ದರ ನಿಗದಿ ಮಾಡುವಾಗಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ದರದಲ್ಲಿಯಾವುದು ಕಡಿಮೆಯೋ ಅದರಂತೆ ದಾಸ್ತಾನಿನಮೌಲ್ಯ ನಿರ್ಧರಿಸಬೇಕಾಗುತ್ತದೆ. ಆದರೆ ಅದೂಪಾಲನೆಯಾಗದೆ ಒಕ್ಕೂಟಕ್ಕೆ ನಷ್ಟ ಉಂಟಾಗುತ್ತದೆ.ಇದರಿಂದ ಜಿಲ್ಲೆಯ ಲಕ್ಷಾಂತರ ಜನರ ಆರ್ಥಿಕ ಸ್ಥಿತಿದುರ್ಬಲವಾಗುತ್ತದೆ ಎಂದು ಹೇಳಿದರು.ಹಗರಣಕ್ಕೆ ಸಂಬಂ ಧಿಸಿದಂತೆ ಪಿ ಅಂಡ್ ಐನೌಕರರನ್ನು ಅಮಾನತುಗೊಳಿಸಲಾ ಗಿದೆ. ಆದರೆ,ಪ್ರತಿದಿನ ಹಾಲಿನ ಗುಣ ಮಟ್ಟ ಕಂಡು ಹಿಡಿಯಲುಅ ಧಿಕಾರಿಗಳು ಇದ್ದು, ಅವರು ಇದರ ಬಗ್ಗೆತಿಳಿಸಿದ್ದಾರೆಯೇ, ಇದಕ್ಕೆ ಯಾವ ಕ್ರಮಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?