ತಾಯಿಗೆ ಕಬ್ಬಿಣದ ರಾಡ್ ನಿಂದ ಹೊಡೆದ ತಂದೆ: ಕೋಪಗೊoಡ ಮಗನಿಂದ ತಂದೆಯ ಕೊಲೆ
Team Udayavani, Dec 10, 2020, 6:28 PM IST
ಮಂಡ್ಯ: ತಾಯಿಗೆ ರಾಡಿನಿಂದ ಹೊಡೆದುದ್ದನ್ನು ಕಂಡು ಸಹಿಸಲಾಗದೆ ಕೋಪಗೊಂಡ ಪುತ್ರನೊಬ್ಬ ತಂದೆಗೆ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಪಾಂಡವಪುರ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ರಾಗಿಮುದ್ದನಹಳ್ಳಿ ಗ್ರಾಮದ ದೇವರಾಜು (45) ಕೊಲೆಯಾದ ವ್ಯಕ್ತಿ. ಈತನ ಪುತ್ರನೇ ಅಪ್ಪು(18) ಕೊಲೆ ಮಾಡಿದ ಆರೋಪಿಯಾಗಿದ್ದು, ಘಟನೆ ಬಳಿಕ ನಾಪತ್ತೆಯಾಗಿದ್ದಾನೆ.
ಘಟನೆ ವಿವರ:
ರಾಗಿಮುದ್ದನಹಳ್ಳಿ ಗ್ರಾಮದ ದೇವರಾಜು ಬುಧವಾರ ರಾತ್ರಿ ಸುಮಾರು 7.45ರಲ್ಲಿ ತನ್ನ ಹೆಂಡತಿ ಸಾವಿತ್ರಮ್ಮ ಜತೆ ವಿನಾಃಕಾರಣ ಕ್ಯಾತೆ ತೆಗೆದು ಜಗಳವಾಡುತ್ತಿದ್ದನು. ಈ ವೇಳೆ ಗಂಡ ಹೆಂಡತಿ ನಡುವೆ ಮಾತಿಗೆ ಮಾತು ಬೆಳೆದಾಗ ಕುಪಿತನಾದ ದೇವರಾಜು ತನ್ನ ಪತ್ನಿಗೆ ರಾಡಿನಿಂದ ಹೊಡೆದನು. ಪೆಟ್ಟು ತಿಂದ ಸಾವಿತ್ರಮ್ಮ ಕುಸಿದು ಬಿದ್ದಿದ್ದನ್ನು ಕಂಡ ಮಗ ಅಪ್ಪು ಕೋಪಗೊಂಡು ತಂದೆ ದೇವರಾಜುಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಪಶ್ಚಿಮಬಂಗಾಳದಲ್ಲಿ ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ; ದುರ್ಗಾ ಮಾತೆ ಕೃಪೆಯಿಂದ ಬಚಾವ್
ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ದೇವರಾಜು, ಅವರನ್ನು ಕಂಡ ಅವರ ತಮ್ಮ ನಾಗರಾಜು ಕೂಡಲೇ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ನಂತರ ಅಲ್ಲಿಂದ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ದೇವರಾಜು ಬುಧವಾರ ಮಧ್ಯರಾತ್ರಿ ಮೃತಪಟ್ಟನು ಎನ್ನಲಾಗಿದೆ.
ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ವಂಚನೆ: ಸಬ್ಇನ್ಸ್ಪೆಕ್ಟರ್ ವಿರುದ್ದ ಮಹಿಳಾ ಪಿಎಸ್ಐ ದೂರು !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ