ಮೈಷುಗರ್‌: ನಿಯಮ, ಮಾರ್ಗಸೂಚಿ ಬಿಡುಗಡೆಯಾಗಿಲ್ಲ

ಕಾರ್ಖಾನೆಯ ಸಮರ್ಪಕ ಆಸ್ತಿ ಗುರುತಿಸುವಲ್ಲಿ ವಿಫ‌ಲ

Team Udayavani, Nov 20, 2020, 1:50 PM IST

ಮೈಷುಗರ್‌: ನಿಯಮ, ಮಾರ್ಗಸೂಚಿ ಬಿಡುಗಡೆಯಾಗಿಲ್ಲ

ಸಾಂದರ್ಭಿಕ ಚಿತ್ರ

ಮಂಡ್ಯ: ಮೈಷುಗರ್‌ ಕಾರ್ಖಾನೆಯನ್ನು 40 ವರ್ಷಗಳ ಕಾಲ ಖಾಸಗಿಯವರಿಗೆ ಹೊರ ಗುತ್ತಿಗೆ ನೀಡಲು ಸಚಿವ ಸಂಪುಟ ನಿರ್ಧಾರ ಮಾಡಿದೆ. ಆದರೆ, ಯಾವುದೇ ನಿಯಮ ಹಾಗೂ ಮಾರ್ಗಸೂಚಿಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಬಹುಮುಖ್ಯವಾಗಿ ಕಾರ್ಖಾನೆಯಆಸ್ತಿ ನಿರ್ವಹಣೆಗೆ ಹೇಗೆ? ಎಂಬ ಪ್ರಶ್ನೆಯೂ ಎದ್ದಿದೆ.

ಸರ್ಕಾರ ನಡೆಸಿದರೆ ಪ್ರತಿ ವರ್ಷ 70 ಕೋಟಿ ರೂ. ನಷ್ಟ ಉಂಟಾಗಲಿದೆ ಎಂಬ ಕಾರಣ ನೀಡಿದ್ದು, ಪಾಂಡವಪರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ಮಾದರಿಯಲ್ಲಿ ಗುತ್ತಿಗೆ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿಯ ನಿರ್ವಹಣೆ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿಲ್ಲ.

ಆಸ್ತಿ ವಿವರ ಅಸ್ಪಷ್ಟ: ಕೃಷಿ ಭೂಮಿ 50 ಎಕರೆ, ಬೆಂಗಳೂರು ಕಚೇರಿ 1.10 ಎಕರೆ, ಮಂಡ್ಯ ನಗರದ ರಾಜ್‌ಕುಮಾರ್‌ ಬಡಾವಣೆಯಲ್ಲಿ 3 ಎಕರೆ, ಮೈಷುಗರ್‌ಕಾರ್ಖಾನೆ ಪ್ರದೇಶ106 ಎಕರೆ, ಮಂಡ್ಯ ಹೊರವಲಯದ ಶ್ರೀನಿವಾಸಪುರ ಗೇಟ್‌ ಬಳಿ 41.06 ಎಕರೆ, ಮಂಡ್ಯ ಗುತ್ತಲು ರಸ್ತೆಯಲ್ಲಿ 0.17 ಎಕರೆ, ನಗರದಕಾಳಿಕಾಂಬ ದೇವಾಲಯ ಮುಂಭಾಗ1.20 ಎಕರೆ ಸೇರಿದಂತೆ ಒಟ್ಟು202.53 ಎಕರೆ ಇದ್ದು, ಇದರ ಅಂದಾಜು ಮೌಲ್ಯ 280 ಕೋಟಿ ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾವಿರಾರು ಕೋಟಿ ಮೌಲ್ಯದ ಆಸ್ತಿ: ರೈತ ಮುಖಂಡರು ಹೊರ ತಂದಿರುವ ಮೈಷುಗರ್‌ ಕಾರ್ಖಾನೆಯ ಅಧ್ಯಯನ ವರದಿಯಲ್ಲಿ 235 ಎಕರೆ ಎಂದು ನಮೂದಿಸಿದ್ದಾರೆ. ಕಂಪನಿಯ ಕಲ್ಯಾಣಮಂಟಪ 3 ಎಕರೆ, ಶ್ರೀರಂಗಪಟ್ಟಣದ ಬಳಿ 2.4 ಎಕರೆ, ಮೈಷುಗರ್‌ ಪ್ರೌಢಶಾಲೆ ಹಾಗೂ ಐಟಿಐ ಕಾಲೇಜು 14.18 ಎಕರೆ, ಜೈಭಾರತ ಶಾಲೆಗೆ 7.10 ಎಕರೆ, ಕಬ್ಬಿನ ತಳಿ ವ್ಯವಸಾಯಕ್ಕಾಗಿ ಸಾತನೂರು ಬಳಿ 50 ಎಕರೆ, ಪಕ್ಕದಲ್ಲಿಯೇ ಫಾರಂ, ವಸತಿ ಗೃಹಗಳು, ಕಚೇರಿಯ 6.18 ಎಕರೆ, ಎಚ್‌.ಕೋಡಿಹಳ್ಳಿ ಬಳಿ 0.24 ಗುಂಟೆ, ಹನಕೆರೆ ಬಳಿ ಕಬ್ಬುವಿಭಾಗದ ಸೂಪರ್‌ವೈಸರ್‌ಕಚೇರಿ 15 ಗುಂಟೆ, ಕೆರಗೋಡು ಗ್ರಾಮದ ಬಳಿ ಕಲ್ಯಾಣ ಮಂಟಪ 1.15 ಎಕರೆ, ಕಬ್ಬಿನ ಗಾಡಿಗಳ ಸಂಚಾರಕ್ಕೆ ರಸ್ತೆ 23 ಗುಂಟೆ ಜಮೀನುಗಳನ್ನು ಅಧಿಕಾರಿಗಳು ವರದಿಯಲ್ಲಿ ನಮೂದಿಸಿಲ್ಲ. ಆದರೆ, ಇನ್ನೂ ಹೆಚ್ಚಿನ ಆಸ್ತಿ ಇದ್ದು, ಸಾವಿರಾರು ಕೋಟಿ ರೂ. ಮೌಲ್ಯವಿದೆ ಎನ್ನಲಾಗುತ್ತಿದೆ.

ಕೋಟ್ಯಂತರ ರೂ. ಮೌಲ್ಯದ ಯಂತ್ರಗಳು: ಕಾರ್ಖಾನೆಗೆ ಅಳವಡಿಸಿರುವ ಯಂತ್ರಗಳು ಕೋಟ್ಯಂತರ ರೂ. ಮೌಲ್ಯ ಹೊಂದಿವೆ. ಎಲ್ಲ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಜೊತೆಗೆ 30 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನಾ ಘಟಕವನ್ನು 30 ಲಕ್ಷ ರೂ. ವೆಚ್ಚದಲ್ಲಿಸ್ಥಾಪಿಸಲಾಗಿದ್ದು, ಸ್ಥಗಿತಗೊಂಡಿದೆ.

ಅನುಪಯುಕ್ತ ವಸ್ತುಗಳ ಮೌಲ್ಯವೇ 23 ಕೋಟಿ ರೂ.: ಕಾರ್ಖಾನೆಯಲ್ಲಿ ಅನುಪಯುಕ್ತ ವಸ್ತುಗಳ ಮೌಲ್ಯವೇ 23ಕೋಟಿ ರೂ. ಇದೆ. ಎಂ.ಎಸ್‌.ಸ್ಕ್ರಾಪ್ ಗಳು‌, ಅಲ್ಯೂಮಿನಿಯಮ್‌, ಹಳೇ ಮಿಲ್‌, ಬಾಯ್ಲಿಂಗ್‌ಹೌಸ್‌ ಸ್ಕ್ರಾಪ್ ಗಳು ಸೇರಿವೆ. ಇವುಗಳ ಮಾರಾಟಕ್ಕೆ 2019ರಲ್ಲಿಯೇ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ.

ನಾವು ಎಲ್ಲ ರೀತಿಯಿಂದಲೂ ಕಾರ್ಖಾನೆ ಆಸ್ತಿಯ ಬಗ್ಗೆ ಶೋಧಿಸಿ, ಹಿಂದೆ ಇದ್ದ ಅಧಿಕಾರಿಗಳ ಬಳಿ ಮಾಹಿತಿ ತೆಗೆದುಕೊಂಡು ಅಧ್ಯಯನ ವರದಿಯ ಪುಸ್ತಕ ಪ್ರಕಟಿಸಿದ್ದೇವೆ. ಅಧಿಕಾರಿಗಳು ನೀಡಿರುವ ವರದಿಯಲ್ಲಿ ಸಾಕಷ್ಟು ಆಸ್ತಿಗಳನ್ನು ಸೇರಿಸದೆಕೈಬಿಟ್ಟಿದ್ದಾರೆ.ಯಾಕೆ ಕೈಬಿಟ್ಟಿದ್ದಾರೆ ಎಂಬುದನ್ನು ಅಧಿಕಾರಿಗಳೇ ಉತ್ತರಕೊಡಬೇಕು. ಸುನಂದ ಜಯರಾಂ, ರೈತ ನಾಯಕಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.