ಕ್ರಮ ಕೈಗೊಳ್ಳದ ಜಿಲ್ಲಾಡಳಿತ: ಎಂದಿನಂತೆ ಜನರ ಓಡಾಟ
Team Udayavani, May 2, 2021, 6:52 PM IST
ಮಂಡ್ಯ: ಕೊರೊನಾ ನಿಯಂತ್ರಿಸಲು ರಾಜ್ಯಸರ್ಕಾರ ಘೋಷಿಸಿರುವ ಜನತಾ ಕರ್ಫ್ಯೂಮಂಡ್ಯದಲ್ಲಿ ಪಾಲನೆಯಾಗುತ್ತಿಲ್ಲ. 4ನೇ ದಿನವಾದಶನಿವಾರವೂ ಬೈಕ್, ಕಾರು, ಆಟೋಗಳಲ್ಲಿಎಂದಿನಂತೆ ಸಂಚಾರ ಮುಂದುವರಿದಿತ್ತು.ಕಳೆದ ವಾರ ವಾರಾಂತ್ಯ ಲಾಕ್ಡೌನ್ಗೆ ಸಿಕ್ಕಬೆಂಬಲ ಮಂಡ್ಯ ನಗರ ನಂತರ ಸರ್ಕಾರಘೋಷಿಸಿದ ಲಾಕ್ಡೌನ್ಗೆ ಸಿಗುತ್ತಿಲ್ಲ.ಅನಗತ್ಯವಾಗಿ ಎಂದಿನಂತೆ ಬೈಕ್, ಆಟೋ, ಕಾರುಸಂಚರಿಸುತ್ತಿವೆ.
ಒನ್ ವೇ ರಸ್ತೆ: ನಗರದಲ್ಲಿ ಜನರ ಸಂಚಾರತಡೆಗಟ್ಟಲು ಹಾಗೂ ವಾಹನ ತಪಾಸಣೆ ಮಾಡಲುಪೊಲೀಸರು ಪ್ರಮುಖ ರಸ್ತೆಗಳನ್ನು ಒನ್ ವೇಮಾಡಿದ್ದಾರೆ. ಆದರೆ, ಅಲ್ಲಿಯೂ ಸರಿಯಾಗಿತಪಾಸಣೆ ನಡೆಯುತ್ತಿಲ್ಲ. ಅನಗತ್ಯವಾಗಿಓಡಾಡುತ್ತಿದ್ದರೂ ಸುಮ್ಮನಿರುತ್ತಾರೆ. ಹೆದ್ದಾರಿಗಳಲ್ಲಿತಪಾಸಣೆ ಬಿಟ್ಟರೆ ಉಳಿದ ರಸ್ತೆಗಳಲ್ಲಿ ತಪಾಸಣೆಇಲ್ಲದಂತಾಗಿದೆ.
ಎಂದಿನಂತೆ ಅಂಗಡಿ ಬಂದ್: ಎಂದಿನಿಂದ ಬೆಳಗ್ಗೆ10 ಗಂಟೆ ನಂತರ ಅಂಗಡಿ, ವಾಣಿಜ್ಯ ಮಳಿಗೆಬಂದ್ ಆಗುತ್ತಿವೆ. ಮಾಲೀಕರೂ ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಸಹಕರಿಸುತ್ತಿದ್ದಾರೆ.ನಗರದ ಪ್ರಮುಖ ವ್ಯಾಪಾರ ವಹಿವಾಟುಸ್ತಬ್ಧಗೊಂಡಿದೆ. ಕೊರೊನಾದಿಂದ ಲಾಕ್ಡೌನ್ಆಗಿರುವ ಹಿನ್ನೆಲೆ ವ್ಯಾಪಾರ-ವಹಿವಾಟು ಇಲ್ಲದೆಪ್ರತಿನಿತ್ಯ ಕೋಟ್ಯಂತರ ರೂ. ನಷ್ಟವಾಗುತ್ತಿದೆ.ಇದರಿಂದ ಮಂಡ್ಯ ಜಿಲ್ಲೆಯ ಆರ್ಥಿಕತೆ ಮೇಲೆಹೊಡೆತ ಬಿದ್ದಿದೆ ಎಂದು ಅಂಗಡಿ ಮಾಲೀಕರೊಬ್ಬರುತಿಳಿಸಿದರು.
ಸಂತೆಯಂತಾದ ಮಾರುಕಟ್ಟೆ: ಪ್ರತಿನಿತ್ಯ ಬೆಳಗ್ಗೆ6ರಿಂದ 10ರವರೆಗೆ ಅಗತ್ಯ ವಸ್ತು ಖರೀದಿಗೆಅವಕಾಶ ನೀಡಲಾಗಿದೆ. ಆದರೆ ಈ ಸಂದರ್ಭದಲ್ಲಿಮಾರುಕಟ್ಟೆಗಳು ಸಂತೆಯಂತಾಗುತ್ತಿವೆ. ಸಾಮಾಜಿಕಅಂತರ ಕಾಪಾಡುತ್ತಿಲ್ಲ. ಕೆಲವರು ಮಾಸ್ಕ್ ಧರಿಸದೆಖರೀದಿಗೆ ಮುಂದಾಗಿದ್ದರು. ಅಂಗಡಿಗಳ ಮುಂದೆಸಾಮಾಜಿಕ ಅಂತರವಿಲ್ಲದೆ, ಕೊರೊನಾ ಸೋಂಕಿನಭಯವೂ ಇಲ್ಲದಂತೆ ಸಾರ್ವಜನಿಕರುವರ್ತಿಸುತ್ತಿದ್ದಾರೆ. ವಾರಾಂತ್ಯ ಶನಿವಾರ ಹಾಗೂಭಾನುವಾರ ನಿಗದಿ ಮಾಡಿರುವ ಮಾರುಕಟ್ಟೆಗಳುಜನರಿಂದ ತುಂಬಿ ಹೋಗುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
ಮಗನಿಗೆ ಮದ್ವೆ ಮಾಡಲು ಹೋಗಿ ಅಪ್ಪನೇ ಮದ್ವೆ ಆದಂತಿದೆ: ಸಚಿವ
Mandya; ಕಾವೇರಿ ನದಿಯಲ್ಲಿ ಈಜಲು ಹೋದ ಮೈಸೂರಿನ ನಾಲ್ವರು ನೀರುಪಾಲು
Congress ಅಭ್ಯರ್ಥಿಗೆ ಸುಮಲತಾ ಬೆಂಬಲ ಕೊಟ್ಟರೆ ಸ್ವಾಗತ: ಸಚಿವ ಚಲವರಾಯಸ್ವಾಮಿ
MUST WATCH
ಹೊಸ ಸೇರ್ಪಡೆ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!