ಜಿಲ್ಲೆ ದೇಗುಲಗಳಿಗೆ ಲಗ್ಗೆ ಇಟ್ಟ ಭಕ್ತರು
Team Udayavani, Jan 2, 2021, 6:30 PM IST
ಮಂಡ್ಯ: ವರ್ಷಾರಂಭ ಹಿನ್ನೆಲೆಯಲ್ಲಿ ಜನರು ಹೊಸ ವರ್ಷದ ಮೊದಲ ದಿನದ ಅಂಗವಾಗಿ ಜಿಲ್ಲೆಯ ವಿವಿಧ ಪ್ರಸಿದ್ಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಕೋವಿಡ್ ಸೋಂಕು ಹರಡುವ ಹಿನ್ನೆಲೆಯಲ್ಲಿ ವರ್ಷಾಚರಣೆ ಪೊಲೀಸ್ ಇಲಾಖೆ ಕಡಿವಾಣ ಹಾಕಿತ್ತು. ಜಿಲ್ಲೆಯಲ್ಲಿಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಹೊಸವರ್ಷವನ್ನು ಜನರು ಮನೆಯಲ್ಲಿಯೇ ಆಚರಿಸಿದರು.
ದೇಗುಲಗಳಿಗೆ ಭೇಟಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಶುಭ ಶುಕ್ರವಾರವೇಬಂದಿದ್ದರಿಂದ ಮುಂಜಾನೆಯಿಂದಲೇದೇವಾಲಯಗಳಿಗೆ ತಂಡೋಪತಂಡವಾಗಿ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದುವರ್ಷವೆಲ್ಲ ಜೀವನ ಸುಖಕರವಾಗಿರಲಿ. ಕೋವಿಡ್ ದಂಥ ಸೋಂಕುಗಳು ನಿವಾರಣೆಯಾಗಿ ನಾಡು ಸುಭಿಕ್ಷವಾಗಲಿ ಎಂದು ಪ್ರಾರ್ಥಿಸಿದರು.
ಭಕ್ತರಿಂದ ತುಂಬಿದ ದೇಗುಲಗಳು: ಮಂಡ್ಯ ನಗರದ ಕಾಳಿಕಾಂಭ, ಕಲ್ಲಹಳ್ಳಿಆಂಜನೇಯಸ್ವಾಮಿ, ಹೊಸಹಳ್ಳಿಯ ಶನೇಶ್ವರಸ್ವಾಮಿ, ಪೇಟೆಬೀದಿಯಲಕ್ಷ್ಮೀಜನಾರ್ಧನ, ಬೋವಿ ಕಾಲೋನಿಯ ಶ್ರೀನಿವಾಸ, ಹೊಸಹಳ್ಳಿಯವೆಂಕಟೇಶ್ವರ ದೇವಾಲಯ, ಶ್ರೀರಂಗಪಟ್ಟಣ ಶ್ರೀರಂಗನಾಥ ಸ್ವಾಮಿ, ನಿಮಿಷಾಂಭ, ಮೇಲುಕೋಟೆಚಲುವನಾರಾಯಣ ಸ್ವಾಮಿ, ಮದ್ದೂರಿನಹೊಳೆ ಆಂಜನೇಯ ಸ್ವಾಮಿ, ವರದರಾಜ ಸ್ವಾಮಿ, ನಾಗಮಂಗಲದ ಚನ್ನಕೇಶವಸ್ವಾಮಿ, ಮಳವಳ್ಳಿ ಲಕ್ಷ್ಮೀನರಸಿಂಹ ಸ್ವಾಮಿ, ಕೆ.ಆರ್.ಪೇಟೆ ಗವಿಗಂಗಾಧರೇಶ್ವರ ಸ್ವಾಮಿ, ವೆಂಕಟೇಶ್ವರ ಹಾಗೂ ಕಿಕ್ಕೇರಿ ಸೇರಿದಂತೆ ಪ್ರಸಿದ್ಧ ದೇವಾಲಯಗಳಿಗೆ ಭಕ್ತರು ಶುಕ್ರವಾರಬೆಳಗ್ಗೆ ಹಾಗೂ ಸಂಜೆ ಭೇಟಿ ನೀಡಿ ದೇವರದರ್ಶನ ಪಡೆದು ಪುನೀತರಾದರು.
ಪೊಲೀಸ್ ಬಿಗಿ ಭದ್ರತೆ: ಮಂಡ್ಯ ನಗರದಲ್ಲಿ ಕೆಲವರು ಡಿ.31ರ ರಾತ್ರಿ ಬೀದಿಗಿಳಿದು ಪಟಾಕಿ ಹೊಡೆದು 2021ಹೊಸ ವರ್ಷವನ್ನು ಬರ ಮಾಡಿಕೊಂಡರು. ಮಂಡ್ಯ ನಗರಸೇರಿದಂತೆ ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಪಾಂಡವಪುರ, ನಾಗಮಂಗಲ ಹಾಗೂ ಕೆ.ಆರ್.ಪೇಟೆ ಪಟ್ಟಣಗಳ ಪ್ರಮುಖ ಬೀದಿ, ರಸ್ತೆಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ರಸ್ತೆಗಳು ಖಾಲಿ ಖಾಲಿ: ರಾತ್ರಿ 10 ಗಂಟೆಯಾಗುತ್ತಿದ್ದಂತೆ ಅಂಗಡಿ- ಮುಂಗಟ್ಟು, ವ್ಯಾಪಾರ, ಮದ್ಯದಂಗಡಿಗಳನ್ನು ಮುಚ್ಚಿಸಿದ ಪೊಲೀಸರು, ಪ್ರಮುಖ ವೃತ್ತ, ಜನ ಸೇರುವ ಕಡೆ ನಿಗಾವಹಿಸಿದರು. ಇದರಿಂದ ನಗರದರಸ್ತೆಗಳೆಲ್ಲ ಖಾಲಿ ಖಾಲಿಯಾಗಿದ್ದವು.
ಬೇಕರಿ ವರ್ತಕರಿಗೆ ತೊಂದರೆ: ಹೊಸ ವರ್ಷ ಹಿನ್ನೆಲೆಯಲ್ಲಿ ನಗರದ ಬೇಕರಿ ಅಂಗಡಿಗಳು ವಿಶೇಷ ಮಾದರಿಯ ಕೇಕ್ ಗಳನ್ನು ತಯಾರಿಸಿ ಮಾರಾಟಕ್ಕಿಟ್ಟಿದ್ದರು.ಆದರೆ, ರಾತ್ರಿ 10 ಗಂಟೆಗೆ ಎಲ್ಲಅಂಗಡಿಗಳನ್ನು ಪೊಲೀಸರು ಬಾಗಿಲುಮುಚ್ಚಿಸಿದ್ದರಿಂದ ವ್ಯಾಪಾರಕ್ಕೆ ತೊಂದರೆಯಾಯಿತು. ಬೆಳಗ್ಗೆಯಿಂದಲೂ ಉತ್ತಮವಾಗಿ ವ್ಯಾಪಾರವಾಗಿತ್ತು. ಆದರೂ,ರಾತ್ರಿಯಾದರೂ ಸಾಕಷ್ಟು ಸಂಖ್ಯೆಯಲ್ಲಿಗ್ರಾಹಕರು ಕೇಕ್ಗಳ ಖರೀದಿಗೆ ಮುಗಿ ಬಿದ್ದಿದ್ದ ದೃಶ್ಯಗಳು ಕಂಡು ಬಂದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ