ಐಪಿಎಸ್ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಪೊಲೀಸರು
Team Udayavani, Mar 15, 2018, 6:30 AM IST
ಮಂಡ್ಯ: ರಾಜಕಾರಣಿಗಳ ಹಸ್ತಕ್ಷೇಪದ ವಿರುದ್ಧ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಕೇಂದ್ರೀಯ ಆಡಳಿತ ನ್ಯಾಯಮಂಡಳಿಗೆ ದೂರು ಕೊಟ್ಟಿದ್ದಾಯ್ತು.
ಈಗ ಪೊಲೀಸರ ಸರದಿ.ಐಪಿಎಸ್ ಅಧಿಕಾರಿಗಳ ಅನಿಷ್ಠ ಕಾರ್ಯವೈಖರಿ,ಪ್ರಾಮಾಣಿಕತೆ ಕೊರತೆ,ಜಾತಿ ಪದ್ಧತಿ, ಜೀತ ಪದ್ಧತಿ,ಅಧಿಕಾರ ದುರುಪಯೋಗ,ಇಲಾಖೆಯ ಘನತೆ ಕಾಪಾಡುವಲ್ಲಿ ವಿಫಲ ಸೇರಿ ಹಲವು ಅಂಶಗಳ ಕುರಿತಂತೆ
ಕರ್ನಾಟಕ ರಾಜ್ಯ ಸಶಸOಉ ಮೀಸಲು ಪಡೆಗಳ ಪೊಲೀಸ್ ಸಿಬ್ಬಂದಿ ಜಿಲ್ಲಾ ಸಂಘದ ಅಧ್ಯಕ್ಷರು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಐದು ಪುಟಗಳ ಪತ್ರ ಬರೆದಿದ್ದಾರೆ.
ದೂರುಗಳೇನು?
ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದು ಕಷ್ಟವಾಗುತ್ತಿದೆ.
– ಪೋಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಪದಟಛಿತಿ ನಿಷೇಧಿಸಿ ಭತ್ಯೆ ಜಾರಿಗೊಳಿಸಲಾಗಿದೆ. ಆದರೆ, ಈ ಬಗ್ಗೆ ಯಾವೊಂದು ಆದೇಶ, ಸುತ್ತೋಲೆ ಹೊರಬಿದ್ದಿಲ್ಲ. ಇದರ ಪರಿಣಾಮ ಐಪಿಎಸ್ ಅಧಿಕಾರಿಗಳು ಸೇವೆಗೆ ಸುಮಾರು 20ಕ್ಕಿಂತ ಹೆಚ್ಚು ಸಿಬ್ಬಂದಿಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಉಳಿಸಿಕೊಳ್ಳುತ್ತಿದ್ದಾರೆ.
– ಒಬ್ಬ ಪೊಲೀಸ್ ಅಧೀಕ್ಷಕ ಒಂದಕ್ಕಿಂತ ಹೆಚ್ಚು ಸರ್ಕಾರಿ ಕಾರು, ಜೀಪನ್ನು ಸ್ವಂತಕ್ಕೆ ಬಳಸುವಂತಿಲ್ಲ.ಆದರೆ, 2 ರಿಂದ 3 ವಾಹನಗಳನ್ನು ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಜಿಲ್ಲೆಯ ಎಲ್ಲಾ ವಿಭಾಗಗಳಲ್ಲಿ ನಡೆಯುತ್ತಿದೆ.
– ಊಟದ ಬಿಲ್, ವಿದ್ಯುತ್ ಬಿಲ್, ಮನೆಗೆ ದವಸ-ಧಾನ್ಯ ತರುವುದಕ್ಕೆಲ್ಲಾ ಸರ್ಕಾರಿ ಕಚೇರಿ,ಸ್ಟೋರ್ ಹಣ ಬಳಕೆ ಮಾಡಲಾಗುತ್ತಿದೆ. ಕಚೇರಿಗೆ ಸ್ಟೇಷನರಿ ಖರೀದಿ ಸೇರಿದಂತೆ ಇನ್ನಿತರ ಸಾಮಾನುಗಳ ಖರೀದಿಗಳಲ್ಲಿ ಲೋಪ ಮಾಡಿ ಆ ಹಣದಿಂದ ಎಸ್ಪಿಮನೆಗೆ ದಿನಸಿ ಸಾಮಾನು ಸರಬರಾಜು ಮಾಡಲಾಗುತ್ತಿದೆ.
– ಪೊಲೀಸ್ ವಸತಿ ಗೃಹ ದುರಸ್ತಿಯಲ್ಲಿ ಕಮಿಷನ್ ಪಡೆದು, ವಸತಿಗೃಹವನ್ನು ಸರಿಯಾಗಿ ದುರಸ್ತಿಪಡಿಸದೆ ಸಿಬ್ಬಂದಿಗೆ ಹಂಚಿಕೆ ಮಾಡಿ, ದುರಸ್ತಿಪಡಿಸಿಕೊಳ್ಳುವಂತೆ ಹೇಳುತ್ತಾರೆ.
– ವಾಹನ ವಿಭಾಗದಲ್ಲಿ ಪೆಟ್ರೋಲ್-ಡೀಸೆಲ್ ದುರ್ಬಳಕೆ, ರಿಪೇರಿಯಿಂದ ಕಮಿಷನ್ ಪಡೆಯುವುದು ಸಾಮಾನ್ಯವಾಗಿದೆ.
– ರಾಜಕಾರಣಿಗಳ ಬಲೆಗೆ ಬಿದ್ದು, ಕೆಟ್ಟದಾರಿಯಿಂದ ಹಣಗಳಿಸುವ ಸಲುವಾಗಿ ಪೊಲೀಸ್ ಸಲಹೆಗಾರರು ಹೇಳಿದಂತೆ ಐಪಿಎಸ್ ಅಧಿಕಾರಿಗಳು ಕೇಳುತ್ತಿದ್ದಾರೆ.
– ಒಂದೇ ವರ್ಗದ, ಜಾತಿಯ ಸಿಬ್ಬಂದಿಯನ್ನು ಪದೇಪದೆ ಶಿಕ್ಷಿಸುವುದು, ತೊಂದರೆ ಕೊಡುವುದು ನಿರಂತರವಾಗಿ ನಡೆಯುತ್ತಿದೆ.
– ತಮಗೆ ಅನುಕೂಲವಾಗುವಂತೆ ಯಾರು ಹಣ ತಂದುಕೊಡುವರೋ ಅವರು ಹೇಳಿದಂತೆ ಕೇಳು ವುದು, ಕರ್ತವ್ಯದಲ್ಲಿ ದಕ್ಷತೆಯಿಂದ ನಡೆದು ಕೊಳ್ಳದೆ ಸಾರ್ವಜನಿಕರಿಗೆ ಸಂದರ್ಶನ ನೀಡದಿರುವುದು, ಸಿಬ್ಬಂದಿ ತಮ್ಮ ಕುಂದುಕೊರತೆ ಹೇಳಿಕೊಳ್ಳಲು ಬಂದರೆ ಅನುಮತಿ ಪಡೆದು ಬಂದಿಲ್ಲವೆಂದು ಮೆಮೋ ಜಾರಿ ಮಾಡಿ ಅಮಾನತುಗೊ ಳಿಸುವುದು ನಡೆದುಕೊಂಡು ಬಂದಿದೆ.
– ಪೊಲೀಸ್ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿಯನ್ನು ಡಿಎಆರ್, ಸಿಎಆರ್, ಕೆಎಸ್ಆರ್ಪಿ ಸಿವಿಲ್ ಎಂದು ವಿಂಗಡಿಸಿರುವುದು,ಪೊಲೀಸ್ ಮ್ಯಾನ್ಯುವೆಲ್ 83, 84ನ್ನು ಜಾರಿಗೆ ತರದೆ ನೇಮಕಾತಿ ಬಡ್ತಿಯಲ್ಲೂ ನಿಯಮಾನುಸಾರ ನಡೆಯುತ್ತಿಲ್ಲ. ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಆತ್ಮಾವಲೋಕನ ಮಾಡಿಕೊಂಡು, ಬದಲಾವಣೆಗೆ
ತಿದ್ದಿಕೊಂಡರೆ ಪೊಲೀಸ್ ಇಲಾಖೆಯ ಘನತೆ ಗೌರವಗಳು ಉಳಿಯುತ್ತವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು