ರಮ್ಯಾ ಕ್ಯಾಂಟೀನ್ಗೆ ಮಂಡ್ಯದಲ್ಲಿ ಚಾಲನೆ
Team Udayavani, Dec 4, 2017, 9:56 AM IST
ಮಂಡ್ಯ: ಅಪ್ಪಾಜಿ ಆಯ್ತು, ಜನಸ್ನೇಹಿ ಆಯ್ತು, ಈಗ ರಮ್ಯಾ ಕ್ಯಾಂಟೀನ್ ನಗರದಲ್ಲಿ ಭಾನುವಾರದಿಂದ ಶುರುವಾಗಿದೆ. ಈ ಕ್ಯಾಂಟೀನ್ ಕೂಡ ಬಡವರು, ಕೂಲಿ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಲಾಗಿದೆ ಎನ್ನುವುದು ಮಾಲೀಕರು ಹೇಳುವ ಮಾತು. ರಮ್ಯಾ ಅಭಿಮಾನಿ ರಘು ಹೋಟೆಲ್ ಮಾಲೀಕರಾಗಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆ ರಸ್ತೆಯಲ್ಲಿಯೇ ಕ್ಯಾಂಟೀನ್ಗೆ
ಚಾಲನೆ ನೀಡಲಾಗಿದೆ. ಆರಂಭದ ದಿನದಂದು ಸಾರ್ವಜನಿಕರಿಗೆ ಉಚಿತ ಉಪಾಹಾರ ವಿತರಣೆ ಮಾಡಲಾಯಿತು.
ಇಂದಿರಾ, ಅಪ್ಪಾಜಿ ಕ್ಯಾಂಟೀನ್ ಗಿಂತಲೂ ರಮ್ಯಾ ಕ್ಯಾಂಟೀನ್ ಭಿನ್ನವಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ಪಾರ್ಸಲ್ಗೂ 10 ರೂ. ಮಾತ್ರ ನಿಗದಿಪಡಿಸಲಾಗಿದೆ. ಕುಡಿಯುವ ಬಿಸಿನೀರಿನ ವ್ಯವಸ್ಥೆ ಮಾಡಲಾಗಿದೆ. ವಿವಿಧ ಬಗೆಯ ದೋಸೆ, ರವೆ ಇಡ್ಲಿ,
ಚಪಾತಿ, ಮುದ್ದೆ, ಉದ್ದಿನವಡೆ, ಮಸಾಲೆ ವಡೆ,ಅನ್ನ-ಸಾಂಬಾರ್ ಅನ್ನು ನೀಡಲಾಗುತ್ತಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಉದ್ಘಾಟಿಸಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶುಭದಾಯಿನಿ, ಜಿಲ್ಲಾ ಮಹಿಳಾಧ್ಯಕ್ಷೆ ಅಂಜನಾ, ನಗರಸಭೆ ಮಾಜಿ ಅಧ್ಯಕ್ಷೆ ನಾಗಮಣಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ