ರಸ್ತೆ ಬದಿ ಅಂಗಡಿಗಳ ತೆರವು: ವ್ಯಾಪಾರಸ್ಥರ ಅಳಲು
ಇಲ್ಲಿಂದ ಗುಳೆ ಎಬ್ಬಿಸಿದರೆ ನಾವು ಹೋಗುವುದೆಲ್ಲಿಗೆ? • ಪುರಸಭೆ ಅಧಿಕಾರಿಗಳಿಗೆ ಮಾನವೀಯತೆಯೇ ಇಲ್ಲ
Team Udayavani, May 20, 2019, 2:17 PM IST
ನಾಗಮಂಗಲದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಪ್ರಮುಖ ರಸ್ತೆಯಲ್ಲಿ ರಸ್ತೆ ಬದಿಯ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ತೆರವುಗೊಳಿಸುತ್ತಿರುವುದು.
ನಾಗಮಂಗಲ: ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆಯ ವತಿಯಿಂದ ನಿರ್ಮಾಣವಾಗಿರುವ ವಾಣಿಜ್ಯ ಸಂಕೀರ್ಣದ ಅಕ್ಕ ಪಕ್ಕದಲ್ಲಿ ಹಾಗು ಮುಂಭಾಗದಲ್ಲಿ ವ್ಯಾಪಾರ ಮಾಡುತ್ತಿದ್ದ ಸಣ್ಣಪುಟ್ಟ ಅಂಗಡಿ ಮುಂಗಟ್ಟುಗಳನ್ನು ಪುರಸಭೆಯ ಅಧಿಕಾರಿಗಳು ತೆರವುಗೊಳಿಸುವಂತೆ ಆದೇಶಿಸಿದರು.
ಕೆಲವು ಅಂಗಡಿಗಳನ್ನು ಸ್ಥಳದಲ್ಲಿಯೇ ನಿಂತು ತೆರವುಗೊಳಿಸಿದರು. ಕೆಲವು ಅಂಗಡಿಗಳನ್ನು ಡ್ರೈನೇಜ್ ಮೇಲೆ ಸ್ಥಳಾಂತರಿಸಿಕೊಳ್ಳಿ. ವಾಣಿಜ್ಯ ಸಂಕೀರ್ಣದ ಮುಂದೆ ಟೈಲ್ಸ್ ಕೆಲಸ ಮುಗಿಸಿದ ಬಳಿಕ ವಾಪಸ್ ಅಂಗಡಿಗಳನ್ನು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಅಂಗಡಿಯವರು ತಮ್ಮ ಅಳಲು ವ್ಯಕ್ತ ಪಡಿಸಿದರು.
ಮಾರುಕಟ್ಟೆ ವ್ಯವಸ್ಥೆ: ಕಳೆದ 40 ವರ್ಷಗಳಿಂದ ನಾವು ಇದೇ ಸ್ಥಳದಲ್ಲಿಯೇ ವ್ಯಾಪಾರ ನಡೆಸುತ್ತಿದ್ದೇವೆ. ನಾವು ಇಲ್ಲಿ ವ್ಯಾಪಾರ ಶುರು ಮಾಡಿದ ಮೇಲೆ ಇಲ್ಲೊಂದು ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗಿದೆ. 40 ವರ್ಷಗಳ ಹಿಂದೆ ಸರ್ಕಾರಿ ಆಸ್ಪತ್ರೆ ಇತ್ತು. ತದ ನಂತರ ಪೊಲೀಸ್ ಠಾಣೆಯಾಗಿ ಪರಿವರ್ತನೆಯಾಯಿತು. ಅದರ ಹಿಂದೆ ಟಿ.ಸಿಎಚ್ ಕಾಲೇಜು ಇತ್ತು. ಈಗ ವಾಣಿಜ್ಯ ಸಂಕೀರ್ಣವಾಗಿ ಪರಿವರ್ತನೆಯಾಗಿದೆ.
ಒಂದೇ ಕಡೆ ವ್ಯಾಪಾರ: ಹಳೆಯ ಪಟ್ಟಣ ಪೊಲೀಸ್ ಠಾಣೆ ಈಗ ಖಾಲಿ ಇದೆ. ಇಷ್ಟೆಲ್ಲಾ ಬದಲಾವಣೆ ಕಂಡಿದ್ದೇವೆ. ಇಲ್ಲಿ ಹೂ ಮಾರಾಟ ಮಾಡುವವರಿದ್ದಾರೆ. ಎಲೆ, ಅಡಕೆ, ತೆಂಗಿನಕಾಯಿ ಅಂಗಡಿ ಇದೆ, ಹಣ್ಣಿನ ಅಂಗಡಿ ಇದೆ, ತರಕಾರಿ ವ್ಯಾಪಾರ ಮಾಡುವ ಅಂಗಡಿಯವರು ಇದ್ದಾರೆ. ಇಷ್ಟೆಲ್ಲಾ ವ್ಯಾಪಾರಸ್ಥರು ಇಲ್ಲಿ ಒಂದು ಕಡೆ ಸೇರಿ ವ್ಯಾಪಾರ ಮಾಡಿಕೊಂಡು ಬಂದಿದ್ದರಿಂದ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗಿದೆ.
ಅಹವಾಲು ಸಲ್ಲಿಸಿದ್ದೆವು: ಕಳೆದ ಹಲವು ವರ್ಷಗಳಿಂದ ನಾವು ಪುರಸಭೆಗೆ ಅಹವಾಲು ಸಲ್ಲಿಸಿದ್ದೆವು. ನಮಗೆ ಅಂಗಡಿ ಮಳಿಗೆ ಕಟ್ಟಿಕೊಡಿ ಎಂದಾಗ ಸ್ಪಂದಿಸಲಿಲ್ಲ. ಈಗ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿದೆ. ನಮ್ಮನ್ನು ನಮ್ಮ ವ್ಯಾಪಾರದ ಜಾಗಗಳಿಂದ ಗುಳೇ ಎಬ್ಬಿಸುತ್ತಿದ್ದಾರೆ. ಈ ವ್ಯಾಪಾರದ ಜಾಗ ಬಿಟ್ಟು ನಾವು ಹೋಗುವುದಾದರು ಎಲ್ಲಿಗೆ ಎಂದು ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಂಡರು.
ಹರಾಜು ಪ್ರಕ್ರಿಯೆಯಲ್ಲಾದರೂ ಪ್ರಾತಿನಿಧ್ಯ ನೀಡಲಿ: ವಾಣಿಜ್ಯ ಸಂಕೀರ್ಣದ ಹರಾಜು ಪ್ರಕ್ರಿಯೆಯಲ್ಲಾದರು ಮಾನವೀಯತೆ ದೃಷ್ಟಿಯಿಂದ ಹಳಬರಿಗೆ ಮೊದಲ ಪ್ರಾತಿನಿಧ್ಯ ನೀಡಲಿ. ನಮಗೆ ಹರಾಜು ಪ್ರಕ್ರಿಯೆಯಲ್ಲಿ ರಿಯಾಯಿತಿ ದರದಲ್ಲಿ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪುರಸಭೆ ಅದಿಕಾರಿಗಳು, ಸದಸ್ಯರು ಶಾಸಕರು ಔದಾರ್ಯ ತೋರಲಿ ಎಂದು ಮನವಿ ಮಾಡಿಕೊಂಡರು.
ಕರೆ ಸ್ವೀಕರಿಸದ ಶಾಸಕರು, ಸ್ಪಂದಿಸದ ಸದಸ್ಯರು: ವ್ಯಾಪಾರಸ್ಥರು ಸಮಸ್ಯೆಯನ್ನು ಶಾಸಕ ಸುರೇಶ್ಗೌಡರಿಗೆ ತಿಳಿಸಲು ಅನೇಕ ಬಾರಿ ಕರೆ ಮಾಡಿದರು ಶಾಸಕ ಸುರೇಶ್ಗೌಡ ಕರೆ ಸ್ವೀಕರಿಸಲಿಲ್ಲ ಎಂದು ವ್ಯಾಪಾರಸ್ಥರು ದೂರಿದರು. ಯಾವುದೇ ಒಬ್ಬ ಪುರಸಭಾ ಸದಸ್ಯ ಕೂಡ ಸೂಕ್ತವಾಗಿ ಸ್ಪಂದಿಸಲೇ ಇಲ್ಲ ಎಂದು ತಮ್ಮ ಪರಿಸ್ಥಿತಿ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ