ಗುಪ್ತಗಾಮಿನಿಯಂತಿರುವ ಮಹಿಳಾ ಓಟುಗಳು!


Team Udayavani, Apr 21, 2019, 8:52 PM IST

guptagamini

ಮಂಡ್ಯ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ದಾಖಲೆಯ ಮತದಾನ ನಡೆದಿದೆ. ಇದರಲ್ಲಿ ಯುವ ಮತದಾರರು ಹಾಗೂ ಮಹಿಳಾ ಓಟುಗಳು ಯಾರ ಪರವಾಗಿ ಅಧಿಕ
ಸಂಖ್ಯೆಯಲ್ಲಿ ಹರಿದಿರುವುದೋ ಅವರಿಗೆ ವಿಜಯಮಾಲೆ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.71.47ರಷ್ಟು ಮತದಾನ ನಡೆದಿತ್ತು. ಅಂದು 16,69,262 ಮತದಾ ರರಲ್ಲಿ 6,04,491 ಪುರುಷರು, 5,87,306 ಮಹಿಳೆಯರು, 8 ಇತರೆ ಮತದಾರರು ಸೇರಿ ಒಟ್ಟು 11,91,805 ಮತ ಚಲಾವಣೆಗೊಂಡಿದ್ದವು.
2018ರ ಚುನಾವಣೆಯಲ್ಲಿ 6,93,262 ಪುರುಷರು ಹಾಗೂ 6,79,620 ಮಹಿಳೆಯರು ಹಾಗೂ ಇತರೆ 26 ಮತದಾರರು ಸೇರಿ 13,72,908 ಮತಗಳು ಚಲಾವಣೆ ಯಾಗಿವೆ. 2014ರಲ್ಲಿ ಪುರುಷರ
ಮತದಾರರಿಗೆ ಹೋಲಿಸಿದರೆ ಮಹಿಳಾ ಓಟುಗಳ ಅಂತರ 17,185 ಮತಗಳಾಗಿದ್ದರೆ, 2018ರಲ್ಲಿ ಅದರ ಅಂತರ 13,642 ಇದೆ.

ಸ್ವಯಂಪ್ರೇರಿತರಾಗಿ ಬಂದು ಮತ ಚಲಾವಣೆ: ಪ್ರತಿ
ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಅಭ್ಯರ್ಥಿಗಳ ಬೆಂಬಲಿಗರು ಆಟೋ, ಅಫೆ ಆಟೋ,
ಟೆಂಪೋಗಳಲ್ಲಿ ಮತದಾರರನ್ನು ಮತಗಟ್ಟೆಗೆ ಕರೆತಂದು ಮತ ಚಲಾಯಿಸಲು ನೆರವಾಗುತ್ತಿದ್ದರು.

ಇದರ ನಡುವೆಯೂ ಫ‌ಲಿತಾಂಶ ಶೇ.70ರ ಗಡಿ ಮುಟ್ಟುವುದೇ ಹೆಚ್ಚು ಎನ್ನುವಂತಿತ್ತು. ಆದರೆ, ಈ ಲೋಕಸಭಾ ಚುನಾವಣೆಯಲ್ಲಿ ಅಂತಹ ದೃಶ್ಯಗಳು ಯಾವುದೇ ಕ್ಷೇತ್ರದ ಮತಗಟ್ಟೆಗಳ ಬಳಿ ಕಂಡುಬರಲೇ
ಇಲ್ಲ. ಆದರೂ, ಮತದಾನದ ಪ್ರಮಾಣ ಶೇ.80ರ ಗಡಿ ತಲುಪಿದೆ. ಇದನ್ನು ಗಮನಿಸಿದರೆ ಮತದಾರರು ಸ್ವಯಂಪ್ರೇರಿತರಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಿರುವುದು ಕಂಡು ಬರುತ್ತಿದೆ.

ಈ ಲೋಕಸಭಾ ಚುನಾವಣೆಯಲ್ಲಿ 18 ವರ್ಷದಿಂದ 25 ವರ್ಷದೊಳಗಿನ ಯುವ ಮತದಾರರು ಚುನಾವಣೆಯ ಬಗ್ಗೆ ಆಸಕ್ತಿ ವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತ
ಚಲಾಯಿಸಿದ್ದಾರೆ. ಮಂಡ್ಯ ನಗರ ಪ್ರದೇಶದ ಮತದಾನದ ಪ್ರಮಾಣ ಶೇ.60ರಿಂದ 65ರ ಗಡಿ ಮುಟ್ಟುವುದೇ ಹೆಚ್ಚು ಎನ್ನುವಂತಿತ್ತು. ಅದೀಗ
ಶೇ.74ರ ಗಡಿ ತಲುಪಿದೆ. ನಗರ ಪ್ರದೇಶದ ನಾಗರಿಕರು
ಮತದಾನಕ್ಕೆ ಪ್ರಥಮ ಬಾರಿಗೆ ಹೆಚ್ಚಿನ ಒಲವು ತೋರಿದ್ದಾರೆ. ಇದೆಲ್ಲವೂ ಫ‌ಲಿತಾಂಶದ ಕೌತುಕವನ್ನು ಹೆಚ್ಚಿಸುವಂತೆ ಮಾಡಿದೆ.

ಲೆಕ್ಕಕ್ಕೆ ಸಿಗುತ್ತಿಲ್ಲ: ಈ ಗುಪ್ತಗಾಮಿನಿಯಂತೆ ಹರಿದಾಡಿರುವ ಮತಗಳು ಅಷ್ಟು ಸುಲಭವಾಗಿ ಯಾರ ಲೆಕ್ಕಕ್ಕೂ ಸಿಗುತ್ತಿಲ್ಲ. ಹಾಗಾಗಿ ಸುಮಲತಾ ಹಾಗೂ ಕೆ.ನಿಖೀಲ್‌ ಗೆಲುವನ್ನು ಸುಲಭವಾಗಿ ಗ್ರಹಿಸಲು ಆಗುತ್ತಿಲ್ಲ. ಗೆಲುವು ಯಾರಿಗೂ ಸುಲಭವಲ್ಲ ಎಂಬ ಮಾತುಗಳು ಅಲ್ಲಲ್ಲಿ
ಕೇಳಿಬರುತ್ತಿವೆ. ಇದು ಚುನಾವಣಾ ತಜ್ಞರ ನಿರೀಕ್ಷೆ, ಆಲೋಚನೆಗಳನ್ನು ಮೀರಿ ನಿಂತಿರುವ ಮಹತ್ವದ ಚುನಾವಣೆ ಎನಿಸಿಕೊಂಡಿದೆ.

ಜೆಡಿಎಸ್‌ ಹಾಗು ಸುಮಲತಾ ಬೆಂಬಲಿಗರು ಜಾತಿ ಲೆಕ್ಕಾಚಾರದ ಮೇಲೆ ಮತಗಳನ್ನು ಮುಂದಿಟ್ಟುಕೊಂಡು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಗುಪ್ತಗಾಮಿನಿಯಂತಿರುವ ಮಹಿಳಾ ಹಾಗೂ ಯುವ ಮತದಾರರ ಬಗ್ಗೆ ಅವರು ಮಾತನಾಡುತ್ತಿಲ್ಲ. ಆ ಮತಗಳ ಹರಿದಾಟದ ಬಗ್ಗೆ ಅವರಿಗೂ ಅನುಮಾನಗಳು ಕಾಡುತ್ತಿವೆ. ಜೆಡಿಎಸ್‌ ಪರವಾಗಿಯೇ ಆ ಮತಗಳು ಹರಿದುಬಂದಿವೆ ಎಂದು ನಿಶ್ಚಿತವಾಗಿ ಅವರು ಹೇಳುತ್ತಿಲ್ಲ.

ಮೋದಿ ಪ್ರಭಾವ: ಪ್ರಧಾನಿ ನರೇಂದ್ರ ಮೋದಿ ಪ್ರಭಾವವೂ ಯುವ ಮತದಾರರ ಮೇಲೆ ಪರಿಣಾಮ ಬೀರಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸರ್ಜಿಕಲ್‌ ಸ್ಟ್ರೈಕ್‌ ಹಾಗೂ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ನಡೆಸಿದ ಏರ್‌ ಸ್ಟ್ರೈಕ್‌ನಿಂದ ಆಕರ್ಷಿತರಾಗಿರುವ
ಯುವ ಮತದಾರರು ಚುನಾವಣೆಯ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿ ಕೊಂಡು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿ ರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇವರ ಮತಗಳೂ ಸರಿಯಾದ ರೀತಿಯಲ್ಲಿ ಪರಿಗಣನೆಗೆ ಸಿಗುತ್ತಿಲ್ಲ.

ಈ ಹಿಂದಿನ ಚುನಾವಣಾ ಲೆಕ್ಕಾಚಾರಗಳನ್ನು ತಾಳೆಯೇ ಆಗದ ರೀತಿಯಲ್ಲಿ ಚುನಾವಣಾ ಫ‌ಲಿತಾಂಶ ತೀವ್ರ ಕುತೂಹಲವನ್ನಂತೂ
ಕೆರಳಿಸಿರುವುದು ಸತ್ಯವಾಗಿದೆ.

ಜಾತಿ ಲೆಕ್ಕಾಚಾರ: ಇಬ್ಬರೂ ಪ್ರಬಲ ಒಕ್ಕಲಿಗ ಅಭ್ಯರ್ಥಿಗಳು ಕಣದಲ್ಲಿದ್ದ ಕಾರಣದಿಂದ ಒಕ್ಕಲಿಗ ಓಟುಗಳು ಹರಿದು ಹಂಚಿಹೋಗಿರುವುದು ಸತ್ಯಸಂಗತಿ. ಇನ್ನು ಸುಮಲತಾ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂಬ ಕಾರಣಕ್ಕೆ ಕೆಲವು ಕ್ಷೇತ್ರಗಳಲ್ಲಿ
ಅಲ್ಪಸಂಖ್ಯಾತರು ಅವರ ಕೈ ಹಿಡಿದಿಲ್ಲ ಎಂಬ ಮಾತುಗಳು ಕ್ಷೇತ್ರದೊಳಗೆ ಕೇಳಿಬರುತ್ತಿವೆ. ಇದೇ ವೇಳೆಗೆ ಬಿಜೆಪಿ, ಕಾಂಗ್ರೆಸ್‌ ಹಾಗೂ ರೈತಸಂಘದ ಮತಗಳಲ್ಲಿ ಬಹುಪಾಲು ಸುಮಲತಾ ಕೈ ಹಿಡಿದಿವೆ.

ಕುರುಬರು ಸುಮಲತಾ ಪರವಾಗಿದ್ದಾರೆಂದು ಹೇಳಲಾಗುತ್ತಿದ್ದರೆ, ದಲಿತ ಓಟುಗಳು ಜೆಡಿಎಸ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಹರಿದುಬಂದಿವೆ
ಎನ್ನಲಾಗುತ್ತಿದೆ. ಇನ್ನು ಉಪ್ಪಾರ, ಮಡಿವಾಳ, ಕುಂಬಾರ, ಸವಿತಾ, ಗಾಣಿಗ, ಬೆಸ್ತ ಸೇರಿದಂತೆ ಫ‌ಲಿತಾಂಶದ ನಿರ್ಣಾಯಕ ಶಕ್ತಿಗಳಾಗಿರುವ ಈ ಮತದಾರರು ಯಾರ ಕೈ ಹಿಡಿದಿದ್ದಾರೆ ಎನ್ನುವುದು ಯಾರಿಗೂ ಗೊತ್ತಾಗುತ್ತಿಲ್ಲ.

ಮೈತ್ರಿ ಧರ್ಮವಿಲ್ಲ: ಜೆಡಿಎಸ್‌ನವರು ಚುನಾವಣಾ ಸಂಪನ್ಮೂಲ ಹಂಚುವ ಸಮಯದಲ್ಲೂ ಕಾಂಗ್ರೆಸ್‌ ಕಾರ್ಯಕರ್ತರನ್ನು ಕಡೆಗಣಿಸಿ ಪ್ರತ್ಯೇಕವಾಗಿ ಹಣ ಹಂಚಿಕೆ ಮಾಡಿದ್ದಾರೆ. ಇಲ್ಲಿ ಮೈತ್ರಿಧರ್ಮ ಪಾಲಿಸಿಲ್ಲ.

ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಅಪಸ್ವರಗಳು ಅಲ್ಲಲ್ಲಿ
ಕೇಳಿಬರುತ್ತಿವೆ. ಇದರಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್ಸಿಗರು ಮೈತ್ರಿ ಅಭ್ಯರ್ಥಿ ವಿರುದ್ಧವಾಗಿ ಚುನಾವಣೆ ನಡೆಸಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

ಒಟ್ಟಾರೆ ಮಹಿಳಾ ಹಾಗೂ ಯುವ ಮತದಾರರು ಯಾರ ಪರವಾಗಿ ಆಕರ್ಷಿತರಾಗಿದ್ದಾರೋ ಅವರಿಗೆ ಗೆಲುವು ಸುಲಭವಾಗಿ ದಕ್ಕಲಿದೆ. ಅದೇ ರೀತಿ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಲ್ಲಿದ್ದ ಮಂಡ್ಯ ಮೂಲದ ಮತದಾರರು ಲೋಕಸಭಾ ಚುನಾವಣೆಗೆ ಬಂದು ಮತ ಚಲಾಯಿಸಿರುವುದು ಒಂದು ವಿಶೇಷ ಹಾಗೂ ಮತದಾನ ಹೆಚ್ಚಳಕ್ಕೂ
ಕಾರಣವಾಗಿದೆ ಎನ್ನಲಾಗಿದೆ.

  • ಮಂಡ್ಯ ಮಂಜುನಾಥ್‌

ಟಾಪ್ ನ್ಯೂಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.