ಲಾಕ್ಡೌನ್ಗೆ ಸಕ್ಕರೆ ನಾಡು ಬೆಂಬಲ
Team Udayavani, Apr 29, 2021, 2:46 PM IST
ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆ ಸಕ್ಕರೆ ನಾಡು ಸರ್ಕಾರ ಘೋಷಿಸಿರುವ ಲಾಕ್ಡೌನ್ಗೆ ಸ್ತಬ್ಧಗೊಂಡಿದೆ.
ಬುಧವಾರ ಬೆಳಗ್ಗೆಯಿಂದಲೇ ಅಗತ್ಯ ಸೇವೆಹೊರತುಪಡಿಸಿ ಉಳಿದೆಲ್ಲ ವ್ಯಾಪಾರ-ವಹಿವಾಟುಸ್ಥಗಿತಗೊಂಡಿತ್ತು. ಅಂಗಡಿ ಮಾಲಿಕರು ಸ್ವಯಂಪ್ರೇರಿತರಾಗಿ ಬಾಗಿಲು ಮುಚ್ಚಿ ಕೊರೊನಾನಿಯಂತ್ರಣಕ್ಕೆ ಸಹಕರಿಸಿದರು.
ಮಂಡ್ಯ ನಗರ, ಮದ್ದೂರು, ಶ್ರೀರಂಗಪಟ್ಟಣ,ಮಳವಳ್ಳಿ, ನಾಗಮಂಗಲ, ಪಾಂಡವಪುರ ಹಾಗೂಕೆ.ಆರ್.ಪೇಟೆ ಪಟ್ಟಣಗಳಲ್ಲೂ ಲಾಕ್ಡೌನ್ಗೆಬೆಂಬಲ ವ್ಯಕ್ತವಾಯಿತು.ಬಂದ್: ನಗರದ ವಾಣಿಜ್ಯ ಕೇಂದ್ರಗಳಾದ ಪೇಟೆಬೀದಿ, ವಿವಿ ರಸ್ತೆ, ವಿನೋಬಾ ರಸ್ತೆ, ನೂರಡಿ ರಸ್ತೆ,ಆರ್.ಪಿ.ರಸ್ತೆ, ಗುತ್ತಲು ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ ಸೇರಿ ನಗರದ ಪ್ರಮುಖರಸ್ತೆಗಳ ಅಂಗಡಿಗಳು, ಷೋ ರೂಂ, ವಿವಿಧ ಎಲ್ಲರೀತಿಯ ಅಂಗಡಿಗಳು ಮುಚ್ಚಿದ್ದವು.
ರಸ್ತೆಗಿಳಿಯದ ವಾಹನ: ಸರಕು ಸಾಗಾಣೆ ವಾಹನಹೊರತುಪಡಿಸಿ ಬೇರೆ ಯಾವುದೇ ವಾಹನ ರಸ್ತೆಗಿಳಿಯಲಿಲ್ಲ. ಪ್ರಮುಖ ರಸ್ತೆ ಸೇರಿ ಬೆಂಗಳೂರು-ಮೈಸೂರು ಹೆದ್ದಾರಿ ಬಿಕೋ ಎನ್ನುತ್ತಿತ್ತು.ಸಾರಿಗೆ ಸ್ತಬ್ಧ: ಸಾರಿಗೆ ಸಂಚಾರವೂ ಬಂದ್ ಆಗಿದ್ದುಬಸ್ ನಿಲ್ದಾಣ ಖಾಲಿಯಾಗಿತ್ತು. ರೈಲು ಸಂಚಾರವಿದ್ದರೂ ಪ್ರಯಾಣಿಕರಿರಲಿಲ್ಲ. ಕೆಲವು ಆಟೋ,ಬೈಕ್ ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಿಯಮ ಉಲ್ಲಂಘನೆ: ಬೆಳಗ್ಗೆ 6ರಿಂದ 10ರವರೆಗೆಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿತ್ತು.ಈ ವೇಳೆ ಜನ ಸಾಮಾಜಿಕ ಅಂತರ ಕಾಪಾಡಲಿಲ್ಲ.ಮಾರುಕಟ್ಟೆ, ವಿವಿ ರಸ್ತೆ, ಹೊಸಹಳ್ಳಿ ಸರ್ಕಲ್ ಸೇರಿವಿವಿಧೆಡೆ ಅಂಗಡಿಗಳ ಮುಂದೆ ಗ್ರಾಹಕರುತುಂಬಿದ್ದರು. ತರಕಾರಿ, ಹಣ್ಣು, ದಿನಸಿ ಸಾಮಗ್ರಿ,ಮೀನು, ಮಾಂಸದ ಅಂಗಡಿಗಳ ಮುಂದೆಜನಜಂಗುಳಿ ಸೇರಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್