ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ಆಗ್ರಹ
Team Udayavani, Jun 17, 2020, 5:30 AM IST
ಮಂಡ್ಯ: ಬೆಲೆ ಕುಸಿತದಿಂದ ಕಂಗೆಟ್ಟಿರುವ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರದ ನಿಲುವನ್ನು ವಿರೋಧಿಸಿ, ರೇಷ್ಮೆ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ದ ಒಕ್ಕೂಟದ ಸದಸ್ಯರು ರಾಜ್ಯಸರ್ಕಾರದ ವಿರುದಟಛಿ ಘೋಷಣೆ ಕೂಗಿದರು. ಸರ್ಕಾರದ ಲಾಕ್ಡೌನ್ ನಿರ್ಧಾರಕ್ಕೆ ಬೆಳೆಗಾರರು ಸ್ಪಂದಿಸಿ ದ್ದರೂ ಲಾಕ್ಡೌನ್ ನಂತರ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಧಾವಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಎರಡು ವರ್ಷದಿಂದ ಬೆಲೆ ಕುಸಿತ: ಒಕ್ಕೂಟದ ಅಧ್ಯಕ್ಷ ಶಿವಲಿಂಗಯ್ಯ ಮಾತನಾಡಿ, 2015-16ನೇ ಸಾಲಿನಲ್ಲಿ ಬಸವರಾಜು ಆಯೋಗ ಸಮಿತಿ ವರದಿಯಂತೆ ರೇಷ್ಮೆ ಗೂಡಿನ ದರ ಕನಿಷ್ಠ ಮಿಶ್ರತಳಿ ಗೂಡಿಗೆ 280 ರೂ. ಹಾಗೂ ದ್ವಿತಳಿ ಗೂಡಿಗೆ 350 ರೂ. ನೀಡುವಂತೆ ಸರ್ಕಾರದ ಆದೇಶವಾಗಿದೆ. ಆದರೂ ಕಳೆದೆರಡು ವರ್ಷಗಳಿಂದ ರೇಷ್ಮೆ ದರ ಕುಸಿತವಾಗಿದ್ದರೂ ಆದೇಶದಂತೆ ದರ ನೀಡಿಲ್ಲ ಎಂದು ಆರೋಪಿಸಿದರು.
ಲಾಕ್ಡೌನ್ನಿಂದ ರೇಷ್ಮೆ ಗೂಡಿನ ದರ ತೀವ್ರ ಕುಸಿತ ಕಂಡಿದೆ. ಪ್ರತಿ ಕೆ.ಜಿ. ರೇಷ್ಮೆ ಗೂಡು 120 ರೂ.ನಿಂದ 150 ರೂ.ವರೆಗೆ ಮಾರಾಟವಾ ಗುತ್ತಿದೆ. ಒಂದು ಕೆಜಿ ಗೂಡು ಬೆಳೆಯಲು ರೈತರಿಗೆ 280 ರೂ. ಖರ್ಚಾಗುತ್ತಿದೆ. ಇದರಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದು, ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎಂದು ಅಳಲು ವ್ಯಕ್ತ ಪಡಿಸಿದರು.
ಪ್ರೋತ್ಸಾಹಧನ ಬಿಡುಗಡೆ ಮಾಡಿ: ರೇಷ್ಮೆ ಮನೆ ನಿರ್ಮಿಸಲು ಸರ್ಕಾರ ಸಬ್ಸಿಡಿ ಹಣ ನೀಡುತ್ತಿದೆ. ಸುಮಾರು ಎರಡು ವರ್ಷದಿಂದ ಹೊಸದಾಗಿ ಮನೆ ನಿರ್ಮಾಣ ಮಾಡಿದ ರೈತರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ರೇಷ್ಮೆ ಬೆಳೆಗಾರರು ಸುಣ್ಣ ಹಾಗೂ ಕೆಮಿಕಲ್ ಔಷಧವನ್ನು ತೋಟಕ್ಕೆ ಹಾಗೂ ಸಾಕಾಣಿಕೆ ಮನೆಗೆ ಸಿಂಪರಣೆ ಮಾಡುವುದರಿಂದ ರೈತರು ರೋಗಕ್ಕೆ ತುತ್ತಾಗುತ್ತಿದ್ದಾರೆ. ರೇಷ್ಮೆ ಬೆಳೆಗಾರರಿಗೆ ಪ್ರತ್ಯೇಕ ಆರೋಗ್ಯ ವಿಮೆ ಮಾಡಿಸಿಕೊಡ ಬೇಕು. ಹಿಂದಿನ ಸರ್ಕಾರದಲ್ಲಿದ್ದ ಆರೋಗ್ಯವಿಮೆ ಸ್ಥಗಿತಗೊಂಡಿರುವುದಾಗಿ ಹೇಳಿದರು.
ಬೆಲೆ ನಿಗದಿಪಡಿಸಿ: ಚಾಕಿ ಸಾಕಾಣಿಕೆದಾರರ ಗೂಡಿನ ದರ ಕಡಿಮೆ ಇದ್ದರೂ ಸಹ 100 ಮೊಟ್ಟೆ ರೇಷ್ಮೆ ಮರಿಗಳಿಗೆ 3400 ರೂ.ನಿಂದ 3900 ರೂ.ವರೆಗೆ ರೇಷ್ಮೆ ಬೆಳೆಗಾರರ ಬಳಿ ಹಣ ತೆಗೆದುಕೊಳ್ಳುತ್ತಿದ್ದಾರೆ. ಈ ಚಾಕಿ ಸಾಕಾಣಿಕೆದಾರ ರಿಗೆ ನಿಗದಿತ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕೆ.ಬಿ. ಶಿವಕುಮಾರ, ಜೋಗಿಗೌಡ, ಕೆ.ಸಿ.ಬೋರೇ ಗೌಡ, ಮಹದೇವು, ಬಿ.ಪಿ.ಅಪ್ಪಾಜಿ, ರಾಮಚಂ ದ್ರು, ಕೆ.ಸಿ.ಚನ್ನಪ್ಪ, ಕೆ.ಸಿ.ಸೋಮಶೇಖರ್, ಬಿ.ಪ್ರಕಾಶ, ಮರಿಸ್ವಾಮಯ್ಯ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು