ಸಂತೇಬಾಚಹಳ್ಳಿಗೆ ಖಾಸಗಿ ಕೊಳವೆ ಬಾವಿಗಳೇ ಆಸರೆ
Team Udayavani, May 3, 2021, 3:38 PM IST
ಕೆ.ಆರ್.ಪೇಟೆ: ಸಂತೇಬಾಚಹಳ್ಳಿ ಹೋಬಳಿಯಲ್ಲಿನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು,ಖಾಸಗಿ ಕೊಳವೆ ಬಾವಿಗಳಿಂದ ನೀರುಹರಿಸಲಾಗುತ್ತಿದೆ.ಕಷ್ಟದ ಬದುಕು:ಸಂತೇಬಾಚಹಳ್ಳಿ ಹೋಬಳಿಯಾದ್ಯಂತಬಿಸಿಲ ತಾಪ ಹೆಚ್ಚಾಗಿದ್ದು, ಕುಡಿವ ನೀರಿನ ಕೊರತೆಯಿಂದ ಜನ, ಜಾನುವಾರು ತತ್ತರಿಸುತ್ತಿವೆ.
ಸಮೃದ್ಧವಾಗಿ ಮಳೆಯಾದರೆ ಮಾತ್ರ ಇಲ್ಲಿನ ಕೆರೆ ಕಟ್ಟೆಗಳುತುಂಬುತ್ತವೆ. ಇಲ್ಲವಾದರೆ ಬರದ ಛಾಯೆಯಲ್ಲಿಕಷ್ಟದ ಬದುಕು ನಡೆಸಬೇಕಾಗುತ್ತದೆ.ಬೇಸಿಗೆ ಆರಂಭದಲ್ಲಿಯೇ ಬಹುತೇಕ ಕೆರೆ ಕಟ್ಟೆಗಳುಒಣಗಿದ್ದು, ನೀರಿನ ಸಮಸ್ಯೆ ತೀವ್ರವಾಗಿದೆ. ಬಹುತೇಕಗ್ರಾಮಗಳು ಕುಡಿವ ನೀರಿಲ್ಲದೇ ಕಂಗಾಲಾಗಿವೆ.
ಕೆಲವು ಬಲಾಡ್ಯ ರೈತರು ತಮ್ಮ ಬಂಡತನದಿಂದಕೆರೆಕಟ್ಟೆಗಳಲ್ಲಿ ಇರುವ ನೀರನ್ನು ತಮ್ಮ ಜಮೀನಿಗೆರಾತ್ರಿಹೊತ್ತು ಅಕ್ರಮವಾಗಿ ಹೊಡೆದುಕೊಂಡು ಕೆರೆಕಟ್ಟೆಗಳು ಖಾಲಿಯಾಗಿ ಜಾನುವಾರುಗಳಿಗೆ ಕುಡಿಯಲುನೀರಿಲ್ಲದೆ ಒಣಗುತ್ತಿವೆ. ಜನರಿಗೆ ಕುಡಿಯಲುನೀರಿಲ್ಲದೇ ಪರದಾಡುತ್ತಿರುವ ಸಂದರ್ಭದಲ್ಲಿ ಜಾನುವಾರುಗಳಿಗೆ ನೀರು, ಮೇವಿನ ಕಥೆ ಹೇಳತೀರದು.
ಇದರಿಂದ ಜಾನುವಾರುಗಳನ್ನು ಕಡಿಮೆ ಬೆಲೆಗೆ ತಮ್ಮರಾಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ,ಗೋಹತ್ಯೆ ಕಾಯ್ದೆ ಜಾರಿಯಾದ ಮೇಲೆ ರೈತರರಾಸುಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದು,ಮೇವು ಇಲ್ಲ, ನೀರು ಇಲ್ಲ, ರಾಸುಗಳನ್ನು ಕೊಳ್ಳುವವರೂ ಇಲ್ಲ ಎಂದು ರೈತರು ಕಂಗಾಲಾಗಿದ್ದಾರೆ.
ಅಪ್ಪನಹಳ್ಳಿ ಗ್ರಾಮದಲ್ಲಿ ಕಳೆದ ಐದು ತಿಂಗಳಿನಿಂದಈಚೆಗೆ 2 ಕೊಳವೆ ಬಾವಿ ಕೊರೆಸಲಾಗಿದೆ. ಆದರೂಕೊಳವೆ ಬಾವಿಗಳಲ್ಲಿ ಕುಡಿಯಲು ನೀರಿನ ಸಮಸ್ಯೆಯಿಂದ ಅಪ್ಪನಹಳ್ಳಿ ಗ್ರಾಮಸ್ಥರು ಒದ್ದಾಡುತ್ತಿದ್ದಾರೆ.ರೈತರು ಕೊರೆಸಿರುವ ಕೊಳವೆ ಬಾವಿಗಳು ಗ್ರಾಮದಜನ, ಜಾನುವಾರುಗಳ ನೀರಿನ ದಾಹ ತಣಿಸುತ್ತಿವೆ.
ಅಂತರ್ಜಲ ಮಟ್ಟ ಕುಸಿತ: ಸಂತೇಬಾಚಹಳ್ಳಿಯಹೋಬಳಿ ಶೇ.80 ಗ್ರಾಮಗಳ ಜನ ಕುಡಿವ ನೀರಿಗಾಗಿಕೊಳವೆಬಾವಿ ಆಶ್ರಯಿಸಿದ್ದಾರೆ. ಶೇ.20 ಜನ ಕೆರೆನೀರನ್ನು ಅವಲಂಭಿಸಿದ್ದಾರೆ. ಬಿಸಿಲಿನ ತಾಪಹೆಚ್ಚುತ್ತಿದ್ದಂತೆ ಕೆರೆಗಳೂ ಖಾಲಿಯಾಗುತ್ತಿದ್ದು,ಅಂತರ್ಜಲ ಮಟ್ಟ ಕುಸಿಯುತ್ತಿದೆ. 400 ಅಡಿಗಳಿಗೆಸಿಗುತ್ತಿದ್ದ ನೀರು ಈಗ 700 ಅಡಿ ಕೊರೆಸಿದರೂಸಿಗುತ್ತಿಲ್ಲ.
ಹೀಗಾಗಿ ಕೊಳವೆ ಬಾವಿಗಳನ್ನೇಅವಲಂಭಿಸಿರುವ ಗ್ರಾಮಗಳ ಜನ ಮತ್ತಷ್ಟು ಸಂಕಷ್ಟಕ್ಕೆಸಿಲುಕುವ ಸಾಧ್ಯತೆ ಇದೆ.ಸಮರ್ಪಕಕುಡಿಯುವನೀರುಕಳೆದ ತಿಂಗಳು ಅಪ್ಪನಹಳ್ಳಿ ಗ್ರಾಮದ ಕುಡಿಯುವನೀರಿಗಾಗಿ ಒಂದು ಕೊಳವೆ ಬಾವಿಯನ್ನು ಕೊರೆಸಿದ್ದು,ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ.
ಕಳೆದ ವಾರಬಿದ್ದ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯವಾಗಿ ಕೊಳವೆಬಾವಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಲಾಕ್ಡೌನ್ ಪರಿಣಾಮ ಕೊಳವೆ ಬಾವಿ ರಿಪೇರಿಯ ನೌಕ ರರುಬಂದು ರೀಪೇರಿ ಮಾಡಲು ಸಾಧ್ಯವಾಗಿರಲಿಲ್ಲ. ಕುಡಿವನೀರಿನ ಸಮಸ್ಯೆ ಅರಿತು ತಕ್ಷಣದಲ್ಲೇ ರಿಪೇರಿ ಮಾಡಿಕುಡಿಯುವ ನೀರಿನ ವ್ಯವಸ್ಥೆà ಮಾಡಲಾಗಿದೆ ಎಂದುರಂಗನಾಥಪುರ ಕ್ರಾಸ್ ಪಿಡಿಒ ಕುಮಾರ್ ತಿಳಿಸಿದ್ದಾರೆ.
ಅಪ್ಪನಹಳ್ಳಿ ಅರುಣ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್