ಹಳ್ಳಕ್ಕೆ ಬಿದ್ದು ಇಬ್ಬರ ಸಾವು
Team Udayavani, Feb 25, 2021, 7:59 PM IST
ಕೆ.ಆರ್.ಪೇಟೆ: ಸಂತೇಬಾಚಹಳ್ಳಿ ಹೋಬಳಿಯ ಸೋಮೇನಹಳ್ಳಿ ಗ್ರಾಮದ ತಿರುವಿನಲ್ಲಿರುವ ಸೇತುವೆಗೆ ತಡೆಗೋಡೆ ಇಲ್ಲದ ಪರಿಣಾಮ ಸ್ಕೂಟರ್ ಹಳ್ಳಕ್ಕೆ ಬಿದ್ದು, ಸೋಮೇನಹಳ್ಳಿ ಗ್ರಾಮದ ನಿವಾಸಿ ಜವರೇಗೌಡ(70) ಹಾಗೂ ಶಿವೇಗೌಡ(70) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಘಟನೆ ವಿವರ: ಸಂತೇಬಾಚಹಳ್ಳಿಯಿಂದ ಸ್ಕೂಟರ್ನಲ್ಲಿ ಜವರೇಗೌಡ, ಶಿವೇಗೌಡ ಗ್ಯಾಸ್ ಸಿಲಿಂಡರ್ ತೆಗೆದುಕೊಂಡು ಬರುತ್ತಿದ್ದರು. ಸೋಮೇನಹಳ್ಳಿ ಗ್ರಾಮದ ಹಳ್ಳದ ಸೇತುವೆಗೆ ತಡೆ ಗೋಡೆ ಇಲ್ಲದೆ, ಗಿಡಗಂಟೆಗಳು ಬೆಳೆದುಕೊಂಡಿದ್ದರಿಂದ ಆಯತಪ್ಪಿ ಹಳ್ಳಕ್ಕೆ ಬಿದ್ದಿದೆ. ಇದರ ಪರಿಣಾಮ ಜವರೇಗೌಡ ಸ್ಥಳದಲ್ಲಿ ಮೃತಪಟ್ಟರೆ, ಶಿವೇಗೌಡ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕೆ. ಆರ್. ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಡೆ ಗೋಡೆ ನಿರ್ಮಾಣಕ್ಕೆ ಒತ್ತಾಯ: ಕಳೆದ ಎರಡು ವರ್ಷದಿಂದ ಅಪಘಾತಗಳು ಸಂಭವಿ ಸಿದ್ದು, ಗ್ರಾಮಸ್ಥರು ಸಂಬಂಧಪಟ್ಟ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತಡೆ ಗೋಡೆ ನಿರ್ಮಿಸುವಂತೆ ಒತ್ತಾಯಿಸಿದ್ದರು. ಆದರೂ, ಅಧಿಕಾರಿಗಳ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ, ಸೋಮೇನಹಳ್ಳಿ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಇಂಜಿನಿ ಯರ್ಗಳು ಬರಬೇಕು ಎಂದು ಪಟ್ಟು ಹಿಡಿದಿರು.
ಪಟ್ಟಣ ಠಾಣೆ ಎಸ್ಐ ಬ್ಯಾಟರಾಯಗೌಡ ಗ್ರಾಮಸ್ಥರ ಮನವೊಲಿಸಿ, ಶವವನ್ನು ಪಟ್ಟಣದ ಆಸ್ಪತ್ರೆಗೆ ಸಾಗಿಸಿದರು. ಘಟನಾ ಸ್ಥಳಕ್ಕೆ ನಾಗಮಂಗಲ ಡಿವೈಎಸ್ಪಿ ನವೀನ್ಕುಮಾರ್, ಕೆ.ಆರ್.ಪೇಟೆ ಠಾಣೆ ಇನ್ಸ್ಪೆಕ್ಟರ್ ದೀಪಕ್ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.