ವಿವಿಗಳ ಡಾಕ್ಟರೆಟ್ ಮಾರಾಟಕ್ಕಿದೆ!

ಒಂದೇ ವರ್ಷದಲ್ಲಿ ಜಿಲ್ಲೆಯ ನೂರಾರು ಮಂದಿಗೆ ಗೌರವ ಡಾಕ್ಟರೆಟ್ ಪದವಿ

Team Udayavani, Aug 2, 2019, 12:19 PM IST

mandya-tdy-2

ಮಂಡ್ಯ: ಒಂದು ಕಾಲದಲ್ಲಿ ಗೌರವ-ಘನತೆ ಮತ್ತು ಸಾಧನೆಯ ಸಂಕೇತವಾಗಿದ್ದ ಡಾಕ್ಟರೆಟ್ ಪದವಿ ಇಂದು ಮಾರಾಟಕ್ಕಿಟ್ಟ ಸರಕಾಗಿದ್ದು, ಇಂತಹದೊಂದು ಡಾಕ್ಟರೆಟ್ ಪಿಡುಗಿಗೆ ಮಂಡ್ಯ ಕೂಡ ಹೊರತಾಗಿಲ್ಲ.

ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ ಅಪರೂಪದ ಸಾಧಕರು ಹಾಗೂ ಮೌಲ್ಯಯುತ ವ್ಯಕ್ತಿಗಳನ್ನು ಗುರುತಿಸಿ ಹಿಂದೆ ಡಾಕ್ಟರೆಟ್ ನೀಡಲಾಗುತ್ತಿತ್ತು. ಇಂದು ಸಮಾಜಸೇವೆಯ ಕನಿಷ್ಠ ಪರಿಚಯ ಪತ್ರಗಳನ್ನು ನೀಡಿದವರಿಗೂ ಡಾಕ್ಟರೆಟ್ ಪದವಿ ನೀಡಲಾಗುತ್ತಿದೆ. ಇದರ ಪರಿಣಾಮ ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ ಡಾಕ್ಟರೆಟ್ ಪಡೆದವರ ಸಂಖ್ಯೆ 200ಕ್ಕೂ ಹೆಚ್ಚಿದೆ. ಸ್ವಾಯತ್ತ ವಿಶ್ವವಿದ್ಯಾಲಯಗಳು ಅರ್ಹತೆ, ಸಾಧನೆಯನ್ನು ಗುರುತಿಸದೆ ಮನಸೋಇಚ್ಛೆ ಪದವಿ ಪ್ರದಾನ ಮಾಡುತ್ತಿರುವುದರಿಂದ ಡಾಕ್ಟರೆಟ್ ಈಗ ಮೌಲ್ಯವನ್ನೇ ಕಳೆದುಕೊಂಡಿದೆ.

ಹಣ ಕೊಟ್ಟರೆ ಸಿಗುವ ಡಾಕ್ಟರೆಟ್: ಸಮಾಜ ಸೇವೆ ಹೆಸರಿನಲ್ಲಿ ಮಳವಳ್ಳಿ ತಾಲೂಕಿನ 12 ಮಂದಿಗೆ ಒಂದು ವರ್ಷದ ಅವಧಿಯಲ್ಲಿ ಚೆನ್ನೈನ ಪ್ರತಿಷ್ಠಿತ ವಿಶ್ವವಿದ್ಯಾನಿಲಯವೊಂದು ಡಾಕ್ಟರೆಟ್ ಪದವಿ ನೀಡಿರುವುದು ಜನರ ಕುತೂಹಲಕ್ಕೂ ಕಾರಣವಾಗಿದೆ. ಈ ಡಾಕ್ಟರೆಟ್ ಪಡೆಯಲು ಯಾವುದೇ ಸಂಶೋಧನೆ ನಡೆಸಬೇಕಿಲ್ಲ, ಪ್ರಬಂಧ ಮಂಡಿಸಬೇಕಿಲ್ಲ.

ಕಷ್ಟಪಟ್ಟು ಸಾಧನೆಯನ್ನೂ ಮಾಡಬೇಕಿಲ್ಲ. ಹಣ ಕೊಟ್ಟರೆ ಸಿಗುವ ತರಕಾರಿಯಂತಾಗಿದೆ ಡಾಕ್ಟರೆಟ್. ಕೇವಲ 15 ಸಾವಿರ ರೂ. ನಿಂದ 20 ಸಾವಿರ ರೂ.ಗೆ ಡಾಕ್ಟರೆಟ್ ಸಿಗುತ್ತಿದೆ. ಅಲ್ಲದೆ, ಹತ್ತು ಡಾಕ್ಟರೆಟ್ ಕೊಡಿಸಿದ ಮಧ್ಯವರ್ತಿಗಳಿಗೆ ಒಂದು ಡಾಕ್ಟರೆಟ್ ಉಚಿತವಾಗಿ ನೀಡಲಾಗುತ್ತಿದೆ. ಇದೊಂದು ದೊಡ್ಡದಂಧೆಯಾಗಿ ಮಾರ್ಪಟ್ಟಿದ್ದು, ಡಾಕ್ಟರೆಟ್ ಬಯಸುವಂತಹವರನ್ನು ಬಂಡವಾಳ ಮಾಡಿಕೊಂಡು ದುಡ್ಡು ಮಾಡಿಕೊಳ್ಳುವ ದಂಧೆ ನಿರಂತರವಾಗಿ ಸಾಗಿದೆ.

ಡಾಕ್ಟರೆಟ್ ಕೊಡಿಸಲೂ ಮಧ್ಯವರ್ತಿಗಳು: ಡಾಕ್ಟರೆಟ್ ಕೊಡಿಸುವುದಕ್ಕೆಂದೇ ಜಿಲ್ಲೆಯೊಳಗೆ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಡಾಕ್ಟರೆಟ್ ಬಯಸುವವರಿಂದ ಸಾವಿರಾರು ರೂ. ಹಣ ಪಡೆದು ಬೇಡಿಕೆ ಇಡುತ್ತಾ ಹಣ ವಸೂಲಿ ಮಾಡುತ್ತಿದ್ದಾರೆ. ನಂತರ ಬೆಂಗಳೂರಿನಲ್ಲಿರುವ ಸಂಪರ್ಕ ಜಾಲ ಸಂಸ್ಥೆಗಳೊಡನೆ ವ್ಯವಹರಿಸಿ ವಿವಿಧ ವಿಶ್ವವಿದ್ಯಾಲಯಗಳಿಂದ ಡಾಕ್ಟರೆಟ್ ಕೊಡಿಸುತ್ತಿದ್ದಾರೆ. ಮಧ್ಯವರ್ತಿಗಳಾಗಿ ಕಮಿಷನ್‌ ಹಣವನ್ನು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಇದಕ್ಕೆ ಯಾವುದೇ ಕಡಿವಾಣ ಹಾಕದೆ ಮೌನ ವಹಿಸಿರುವುದು ದಂಧೆಕೋರರ ಹಣ ಲೂಟಿ ಮಾಡಲು ಎಡೆಮಾಡಿ ಕೊಟ್ಟಂತಾಗಿದೆ.

ಹಿಂದೆ ನಕಲಿ ಡಾಕ್ಟರ್‌ಗಳನ್ನು ತಡೆಯುವ ಸಲುವಾಗಿ ಆರೋಗ್ಯ ಇಲಾಖೆ ವಿಚಕ್ಷಣ ದಳದ ತಂಡವೊಂದನ್ನು ರಚನೆ ಮಾಡಿತ್ತು. ಅದೇ ಮಾದರಿಯಲ್ಲಿ ಡಾಕ್ಟರೆಟ್ ಪಡೆದವರ ಸಾಧನೆಯನ್ನು ಪತ್ತಹಚ್ಚಲು ಶಿಕ್ಷಣ ಇಲಾಖೆ ಹೊಸದೊಂದು ತಂಡ ರಚಿಸುವ ಅಗತ್ಯತೆ ಇದೆ ಎಂಬುದು ಎಲ್ಲರ ಒತ್ತಾಸೆಯಾಗಿದೆ.

•ಪದವಿ ಕೊಡಿಸಲು 15 ಸಾವಿರ ರೂ.ನಿಂದ 25 ಸಾವಿರ ರೂ. ವಸೂಲಿ

•ಜಿಲ್ಲೆಯಲ್ಲಿ 1 ವರ್ಷದಲ್ಲಿ ಡಾಕ್ಟರೆಟ್ ಪಡೆದವರ ಸಂಖ್ಯೆ 200ಕ್ಕೂ ಹೆಚ್ಚಿದೆ

•ಮಳವಳ್ಳಿ ತಾಲೂಕಿನ 12 ಮಂದಿಗೆ ಒಂದೇ ವರ್ಷದ ಚೆನ್ನೈನ ಪ್ರತಿಷ್ಠಿತ ವಿವಿಯಿಂದ ಡಾಕ್ಟರೆಟ್

•ಹತ್ತು ಡಾಕ್ಟರೆಟ್ ಕೊಡಿಸಿದ ಮಧ್ಯವರ್ತಿಗಳಿಗೆ ಒಂದು ಡಾಕ್ಟರೆಟ್ ಉಚಿತ

•ಬೆಂಗಳೂರಿನಲ್ಲಿರುವ ಸಂಪರ್ಕ ಜಾಲ ಸಂಸ್ಥೆಗಳೊಡನೆ ವ್ಯವಹರಿಸಿ ಡಾಕ್ಟರೆಟ್ ಕೊಡಿಸುವ ಮಧ್ಯವರ್ತಿಗಳು

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.