ವರ್ಗಾವಣೆ ದಂಧೆ ಬಿಟ್ಟರೆ, ಆಡಳಿತದಲ್ಲಿ ಏನೂ ಕೆಲಸ ನಡೆಯುತ್ತಿಲ್ಲ: ಸಿದ್ಧರಾಮಯ್ಯ
Team Udayavani, Oct 18, 2019, 1:50 PM IST
ಮಂಗಳೂರು: ಮಹಾರಾಷ್ಟ್ರಕ್ಕೆ ನೀರು ಬಿಡೋದಾಗಿ ಸಿಎಂ ಯಡಿಯೂರಪ್ಪ ಹೇಳಿಕೆ ವಿಚಾರ ಎಲೆಕ್ಷನ್ ಮತ್ತು ಓಟಿಗೋಸ್ಕರ ಯಡಿಯೂರಪ್ಪ ಆ ರೀತಿ ಹೇಳಿರಬಹುದು ಆದರೆ ಎರಡು ರಾಜ್ಯಗಳ ಮಧ್ಯೆ ಮಾತುಕತೆ ಆಗದೇ ಏನೂ ಮಾಡಲು ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಅವರು ಶುಕ್ರವಾರದಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿದ್ದರಾಮಯ್ಯ ವಿರುದ್ಧ ಮಾತನಾಡಿದರೆ ಐಟಿ ದಾಳಿ ಅನ್ನೋ ಬಿ.ಸಿ.ಪಾಟೀಲ್ ಹೇಳಿಕೆ ವಿಚಾರವಾಗಿ ನರೇಂದ್ರ ಮೋದಿ, ಅಮಿತ್ ಶಾ ಎಲ್ಲಾ ನನ್ನ ಜೇಬಲ್ಲಿದ್ದಾರಾ? ಅವ್ರೆಲ್ಲಾ ನಾವು ಹೇಳಿದ ಹಾಗೆ ಕೇಳುತ್ತಾರಾ? ಇದು ಬಾಲಿಷ ಹೇಳಿಕೆ, ಫೂಲಿಷ್ ನೆಸ್ ಎಂದರು.
ನಳಿನ್ ಗೆ ರಾಜ್ಯವೇ ಗೊತ್ತಿಲ್ಲ, ಮತ್ತೆ ಅವರು ಇನ್ನೇನು ಹೇಳುತ್ತಾರೆ? ಅವರಿಗೆ ಪಾಪ ಮಂಗಳೂರು ಬಿಟ್ಟರೆ ಮತ್ತೇನೂ ಗೊತ್ತಿಲ್ಲ, ಅದರಿಂದ ಹಾಗೆ ಹೇಳಿದ್ದಾರೆ ಅವರ ಜ್ಞಾನ ಅಷ್ಟೇ ಇರುವಾಗ ಇನ್ನೇನು ಮಾಡಕ್ಕಾಗುತ್ತದೆ ಎಂದರು.
ಕಾವೇರಿ ಗೆಸ್ಟ್ ಹೌಸ್ ನನಗೆ ಬೇಕು ಅಂತ ಪತ್ರ ಬರೆದಿದ್ದೇನೆ ಸಮ್ಮಿಶ್ರ ಸರ್ಕಾರದಲ್ಲಿ ಜಾರ್ಜ್ ಗೆ ಅದು ಸಿಕ್ಕಿದ್ರೂ ಅವರು ನನಗೆ ಬಿಟ್ಟು ಕೊಟ್ಡಿದ್ರು ಈಗ ನನಗೊಂದು ನಿವಾಸ ಕೊಡಬೇಕಲ್ವಾ? ಅದಕ್ಕೆ ಅದನ್ನೇ ಕೊಡಿ ಅಂತ ಬರೆದಿದ್ದೇನೆ ಅದರಲ್ಲಿ ತಪ್ಪೇನು? ಕೊಡೋದು ಬಿಡೋದು ಸರ್ಕಾರಕ್ಕೆ ಸೇರಿದ್ದು. ವರ್ಗಾವಣೆ ದಂಧೆ ಬಿಟ್ಟರೆ, ಆಡಳಿತದಲ್ಲಿ ಏನೂ ಕೆಲಸ ನಡೆಯುತ್ತಿಲ್ಲ ಪ್ರವಾಹ ಬಂದಿದ್ರೂ ಪರಿಹಾರದ ಕೆಲಸ ನಡೆಯುತ್ತಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula: “ಫ್ಯಾನ್-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!
Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ
Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ
Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ
ಬಸ್ಗಳಿಗೆ ಬಾಗಿಲು ಅಳವಡಿಕೆ ; ಡಿಸಿ ಗಡುವು ಸಮೀಪಿಸಿದರೂ ಬಗೆಹರಿಯದ ಗೊಂದಲ!
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು