ಹಸಿ ಗೇರು ಬೀಜ ಬೇಡಿಕೆಯಷ್ಟು ಪೂರೈಕೆ ಇಲ್ಲ


Team Udayavani, Apr 6, 2019, 10:08 AM IST

06-April-2

ಯುಗಾದಿ ಹಬ್ಬದ ಮುನ್ನಾ ದಿನವಾದ ಶುಕ್ರವಾರ ಖರೀದಿಯಲ್ಲಿ ತೊಡಗಿರುವ ಜನರು

ಮಹಾನಗರ : ಚಾಂದ್ರಮಾನ ಯುಗಾದಿ ಹಿನ್ನೆಲೆಯಲ್ಲಿ ನಗರದ
ಮಾರುಕಟ್ಟೆಯಲ್ಲಿ ಈ ಹಿಂದಿನಂತೆ ಹೆಚ್ಚಿನ ಲವ ಲವಿಕೆ ಕಂಡು ಬರುತ್ತಿಲ್ಲ. ಈ ವರ್ಷ ಮಾರುಕಟ್ಟೆಯಲ್ಲಿ ಹಸಿ ಗೇರು ಬೀಜದ ತೀವ್ರ ಅಭಾವ ಕಂಡು ಬಂದಿದೆ. ಇದರ ಬೆಲೆ ಕೆ.ಜಿ. ಗೆ 250 ರೂ. ಗಳಷ್ಟಿದೆ. ಬೇಡಿಕೆ ಜಾಸ್ತಿ ಇದ್ದು ಪೂರೈಕೆ ಕಡಿಮೆ ಇದೆ.

ಹಸಿ ಗೇರು ಬೀಜವನ್ನು ಮರದಿಂದ ಕೊಯ್ದು, ಅದನ್ನು ಕತ್ತರಿಸಿ ಬೀಜ ಮತ್ತು ಸಿಪ್ಪೆಯನ್ನು ಬೇರ್ಪಡಿಸುವ ಕೆಲಸ ಬಹಳಷ್ಟು ತ್ರಾಸದಾಯಕವಾಗಿದ್ದು, ಇಂತಹ ಕೆಲಸ ಮಾಡುವವರು ಈಗ ಕಡಿಮೆ; ಗೇರು ಮರ ಹೊಂದಿದವರು ಮಾಡುವುದಿಲ್ಲ; ಮಾಡಿಸಲು ಕೂಲಿ ಆಳುಗಳು ಸಿಗುವುದಿಲ್ಲ; ಹಾಗಾಗಿ ಮಾರುಕಟ್ಟೆಗೆ ಹಸಿ ಗೇರು ಬೀಜ ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಆಗಿಲ್ಲ ಎಂದು ವರ್ತಕರು ಹೇಳುತ್ತಾರೆ.

ಯುಗಾದಿ ಆಚರಣೆಯ ಭೋಜನದಲ್ಲಿ ತೊಂಡೆ ಕಾಯಿ ಮತ್ತು ಹಸಿ ಗೇರು ಬೀಜ ಪಲ್ಯಕ್ಕೆ ವಿಶಿಷ್ಟ ಸ್ಥಾನವಿದೆ. ಚಾಂದ್ರಮಾನ ಯುಗಾದಿ ಆಚರಿಸುವ ಬಹುತೇಕ ಮಂದಿ ಈ ಪಲ್ಯವನ್ನು ತಯಾರಿಸುತ್ತಾರೆ. ಈ ವರ್ಷ ಊರಿನ ತೊಂಡೆ ಕಾಯಿಗೆ ಕೊರತೆ ಇಲ್ಲ; ಅದು ಸಾಕಷ್ಟು ಲಭ್ಯದ್ದು, ಬೆಲೆ ಕೈಗೆಟಕುವ (ರೂ. 50) ದರದಲ್ಲಿದೆ. ಆದರೆ ಹಸಿ ಗೇರು ಬೀಜದ್ದೇ ಅಭಾವ ಎನ್ನುತ್ತಾರೆ ಮಂಗಳೂರಿನ ಸೆಂಟ್ರಲ್‌ ಮಾರ್ಕೆಟ್‌ನ ವ್ಯಾಪಾರಿ ಡೇವಿಡ್‌
ಡಿ’ಸೋಜಾ ವಾಮಂಜೂರು.

ದೀವಿ ಹಲಸು ಧಾರಾಳ
ಪೋಡಿ ತಯಾರಿಸಲು ಬೇಕಾದ ದೀವಿ ಹಲಸು ಧಾರಾಳವಾಗಿ ಪೂರೈಕೆ (ಬೆಲೆ 100 ರೂ.) ಆಗುತ್ತಿದೆ. ಅಲಸಂಡೆ ಕೂಡ ಸಾಕಷ್ಟಿದೆ. ಈಗ ಹಬ್ಬ ಆಚರಣೆಗೆ ಬೇಕಾದ ಇಂತಹ ತರಕಾರಿಗಳನ್ನು 2-
3 ದಿನ ಮುಂಚಿತವಾಗಿ ಖರೀದಿಸಿ ಕೊಂಡೊಯ್ಯುತ್ತಾರೆ. ಹಾಗಾಗಿ ಹಬ್ಬದ ಮುಂಚಿನ ದಿನ ಖರೀದಿಯ ಭರಾಟೆ ಕಂಡು ಬರುತ್ತಿಲ್ಲ ಎನ್ನುತ್ತಾರೆ ಅವರು. ಯುಗಾದಿ ಆಚರಣೆಯ ಇನ್ನೊಂದು ಸಿಹಿ ಖಾದ್ಯ ಕಡ್ಲೆ ಬೇಳೆ ಪಾಯಸ. ಇದರ ತಯಾರಿಗೆ ಬೇಕಾದ ವಸ್ತುಗಳೆಲ್ಲವೂ ಮಾರಕಟ್ಟೆಯಲ್ಲಿ ಲಭ್ಯವಿದ್ದು, ಯಾವುದೇ ಕೊರತೆ ಇಲ್ಲ.

ಕಾಟು ಮಾವು ದುಬಾರಿ
ಸಿಹಿ ಮಾವಿನ ಹಣ್ಣಿನ ಉಪ್ಪು ಕರಿ ಯುಗಾದಿ ಹಬ್ಬದ ವೈಶಿಷ್ಟ್ಯ . ಆದರೆ ಈ ವರ್ಷ ಅದಕ್ಕೆ ಬೇಕಾದ ಕಾಟು ಮಾವಿನ ಹಣ್ಣಿನ ಲಭ್ಯತೆ ಕಡಿಮೆಯಾಗಿದೆ. ಲಭ್ಯವಿದ್ದರೂ ಸ್ವಲ್ಪ ದುಬಾರಿಯಾಗಿದೆ. ಮಂಗಳೂರಿನ ಮಾರ್ಕೆಟ್‌ನಲ್ಲಿ ಅದರ ಬೆಲೆ 100ರಿಂದ 150 ರೂ. ನಷ್ಟಿದೆ. ಈಗ ಕಾಟು ಮಾವಿನ ಹಣ್ಣು ಸಾಕಷ್ಟು ಲಭ್ಯವಿಲ್ಲದ ಕಾರಣ ಇತರ ಮಾವಿನ ಹಣ್ಣುಗಳನ್ನು ಬಳಕೆ ಮಾಡುತ್ತಾರೆ. ಇತರ ಜಾತಿಯ ವಿವಿಧ ಮಾವಿನ ಹಣ್ಣುಗಳು ವಿಪುಲವಾಗಿ ಲಭ್ಯವಿವೆ.

ಟಾಪ್ ನ್ಯೂಸ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.