ನಂದಿನಿ ಹಾಲಿನ ಪ್ಯಾಕೆಟ್ ಮತ್ತು ಸಿಪಿಪಿ ಬಾಟಲ್ಗಳ ಮರುಸಂಸ್ಕರಣೆಗೆ ಕ್ರಮ
Team Udayavani, Sep 27, 2019, 12:21 PM IST
ಮಂಗಳೂರು: ಸ್ಚಚ್ಛ ಭಾರತ ಕಾರ್ಯಕ್ರಮದಡಿ ಗೌರವಾನ್ವಿತ ಪ್ರಧಾನ ಮಂತ್ರಿಗಳು ಪ್ಲಾಸ್ಟಿಕ್ ತ್ಯಾಜ್ಯ ಜಾಗೃತಿ ಮತ್ತು ನಿರ್ವಹಣೆ ವಿಷಯದೊಂದಿಗೆ ಸ್ಚಚ್ಚತಾ ಹೀ ಸೇವಾ 2019 ಎಂಬ ಯೋಜನೆಯನ್ನು ಪ್ರಾರಂಭಿಸಿರುವ ಹಿನ್ನಲೆಯಲ್ಲಿ ಗ್ರಾಹಕರಿಗೆ ಹಾಗೂ ವಿತರಿಕರಿಗೆ ಜಾಗೃತಿ ಮೂಡಿಸಿ ನಂದಿನಿ ಹಾಲಿನ ಉಪಯೋಗಿಸಿದ ಪ್ಯಾಕೆಟ್ ಮತ್ತು ಸಿಪಿಪಿ ಬಾಟಲ್ಗಳನ್ನು ವಿತರಕರ ಮೂಲಕ ಹಿಂಪಡೆದು ಮರು ಸಂಸ್ಕರಿಸುವ ಯೋಜನೆಯನ್ನು ಅಕ್ಟೋಬರ್ 2 ರಿಂದ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಂಗಳೂರು ಮತ್ತು ಉಡುಪಿ ಜಿಲ್ಲೆಯ 1650 ಡೀಲರ್ಗಳಿಂದ 104 ಹಾಲು ವಿತರಣಾ ವಾಹನಗಳ ಮೂಲಕ ಪ್ರತಿನಿತ್ಯ ಬಳಕೆ ಮಾಡಿದ ಪ್ಲಾಸ್ಟಿಕ್ ಮತ್ತು ಸಿಪಿಪಿ ಬಾಟಲ್ಗಳನ್ನು ಒಕ್ಕೂಟವು ಸಂಗ್ರಹಿಸಿ ಮರುಸಂಸ್ಕರಣೆ ಮಾಡಲು ಮೆ| ನೇಚರ್ ಫ್ರೆಂಡ್ಲಿ ರೀಸೈಕಲ್ ಇಂಡಸ್ಟ್ರೀಸ್ ಆ್ಯಂಡ್ ಡ್ರೈ ವೇಸ್ಟೇಜ್ ಹ್ಯಾಂಡ್ಲಿಂಗ್ ಎಂಬ ಸಂಸ್ಥೆಯವರನ್ನು ಅಧಿಕೃತ ಏಜೆನ್ಸಿಯಾಗಿ ಗೊತ್ತು ಪಡಿಸಲಾಗಿದೆ. ಮಂಗಳೂರು ನಗರದ ವಿತರಕರು ಹಾಗೂ ಗ್ರಾಹಕರು ನೇರವಾಗಿ ಸಹ ಸದರಿ ಸಂಸ್ಥೆಗೆ ಬಳಸಿದ ನಂದಿನಿ ಪ್ಲಾಸ್ಟಿಕ್ ಮತ್ತು ಸಿಪಿಪಿ ಬಾಟಲ್ಗಳನ್ನು ಸಂಗ್ರಹಿಸಿಟ್ಟುಕೊಂಡು ನೀಡಬಹುದಾಗಿದೆ ಎಂದು ತಿಳಿಸಿರು.
ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ಜಿ.ವಿ.ಹೆಗ್ಡೆ, ದಿವಾಕರ ಶೆಟ್ಟಿ, ಜಗದೀಶ ಕಾರಂತ್, ಜಯದೇವ್, ಪ್ರಕಾಶ್ ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ