ಫ್ಲಡ್ ಫ್ಲೋ ಯೋಜನೆ ಕೈಬಿಡಿ
ನಾಗಲಾಪುರ ಹಳ್ಳದ ನೀರು ಕನಕನಾಲೆಗೆ ಹರಿಸಲು ವಿರೋಧ •ಮಸ್ಕಿ ಜಲಾಶಯ ಅಭಿವೃದ್ಧಿ ಮಾಡಿ
Team Udayavani, Aug 30, 2019, 11:31 AM IST
ಮಸ್ಕಿ: ನಾಗಲಾಪುರ ಹಳ್ಳದ ನೀರನ್ನು ಕನಕನಾಲೆಗೆ ತಿರುಗಿಸುವ ಯೋಜನೆ ಕೈಬಿಡಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.
ಮಸ್ಕಿ: ನಾಗಲಾಪುರ ಹಳ್ಳದ ನೀರನ್ನು ಕನಕನಾಲೆಗೆ ತಿರುಗಿಸುವ ಯೋಜನೆ ಕೈಬಿಡಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಮಸ್ಕಿ ನಾಲಾ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ರೈತರು ಪಟ್ಟಣದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರ ಬಳಿಯಿಂದ ದಲಿತ ಸಂಘರ್ಷ ಸಮಿತಿ ಸದಸ್ಯರು, ಮಸ್ಕಿ ನಾಲಾ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನಾ ರ್ಯಾಲಿ ಆರಂಭಿಸಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡಾ| ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಹನುಮಂತ ವೆಂಕಟಾಪುರ ಮಾತನಾಡಿ, ಮಸ್ಕಿ ಜಲಾಶಯ ನೀರಿನಿಂದ ಈ ಭಾಗದ ನೂರಾರು ರೈತರ ಬದುಕು ಹಸನಾಗಿದೆ. ಈ ಜಲಾಶಯದ ನೀರು ಅವಲಂಬಿಸಿ ರೈತರು ವಿವಿಧ ಬೆಳೆ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ಏಕಾಏಕಿ ಈ ಜಲಾಶಯಕ್ಕೆ ನೀರು ತಂದು ಕೊಡುವ ನಾಗಲಾಪುರ ಹಳ್ಳದ ನೀರನ್ನು ಕನಕನಾಲೆ ಕಡೆಗೆ ತಿರುಗಿಸಿದರೆ ಮಸ್ಕಿ ಜಲಾಶಯ ನೀರಿನ ಕೊರತೆ ಎದುರಿಸಬೇಕಾಗುತ್ತದೆ. ಈ ಭಾಗದ ರೈತರಿಗೆ ತೊಂದರೆ ಆಗಲಿದೆ. ಈ ಕೂಡಲೇ ಫ್ಲಡ್ ಫ್ಲೋ ಯೋಜನೆ ಕೈಬಿಡಬೇಕೆಂದು ಆಗ್ರಹಿಸಿದರು.
ಮಲ್ಲಪ್ಪ ಅಂಕುಶದೊಡ್ಡಿ ಮಾತನಾಡಿ, ಕೃಷ್ಣ ನದಿಯಿಂದ ಕಸಬಾಲಿಂಗಸುಗೂರು ಹತ್ತಿರ ಹರಿಯುತ್ತಿರುವ ಕಾಲುವೆ ಮೂಲಕ ಮಸ್ಕಿ ಜಲಾಶಯಕ್ಕೆ ಶಾಶ್ವತ ಲಿಂಕ್ ಕಾಲುವೆ ನಿರ್ಮಿಸಬೇಕು. ಮಸ್ಕಿ ಜಲಾಶಯ ಅಭಿವೃದ್ಧಿಗೆ ಹಾಗೂ ಕೆನಾಲ್ ಆಧುನೀಕರಣಕ್ಕೆ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಮುಖಂಡ ಶೇಖರಗೌಡ ಪಾಟೀಲ, ಶರಣಪ್ಪ ಕಾಟಗಲ್ಲ, ಮೌನೇಶ ನಾಯಕ, ವೆಂಕೋಬ ದಿನ್ನೆಭಾವಿ, ಶಿವಪುತ್ರಪ್ಪ ಮಾರಲದಿನ್ನಿ, ದಲಿತ ಸಂಘರ್ಷ ಸಮಿತಿ ಮುಖಂಡ ನಾಗಪ್ಪ ತತ್ತಿ, ಮಹಾದೇವಪ್ಪ ಪರಾಂಪುರ, ಮೌನೇಶ ಸುಲ್ತಾನಪುರ, ನಾಗರಾಜ ಕುಣಿಕೆಲ್ಲೂರ, ಸಂಪತ್ರಾಜ ನಂಜಲದಿನ್ನಿ, ನಾಗರಾಜ ಗುಡಗಲದಿನ್ನಿ, ತುರುಮುಂಡೆಪ್ಪ ಕಟ್ಟಿಮನಿ ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ