ವಿಜೃಂಭಣೆಯ ಸಿಡಿ ಉತ್ಸವ
ನುಂಕೇಮಲೆ ಸಿದ್ದೇಶ್ವರಸ್ವಾಮಿ ಜಾತ್ರೆಗೆ ರಾಜ್ಯ-ಹೊರ ರಾಜ್ಯದಿಂದ ಭಕ್ತರ ಆಗಮನ
Team Udayavani, May 16, 2019, 3:54 PM IST
ನುಂಕೇಮಲೆ ಸಿದ್ದೇಶ್ವರಸ್ವಾಮಿ ಜಾತ್ರೆಗೆ ರಾಜ್ಯ-ಹೊರ ರಾಜ್ಯದಿಂದ ಭಕ್ತರ ಆಗಮನ
ಮೊಳಕಾಲ್ಮೂರು: ತಾಲೂಕಿನ ಜನರ ಆರಾಧ್ಯ ದೈವವಾಗಿರುವ ನುಂಕೇಮಲೆ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಿಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ನುಂಕೇಮಲೆ ಸಿದ್ದೇಶ್ವರಸ್ವಾಮಿ ದೇವಸ್ಥಾನ, ತುಪ್ಪದಮ್ಮ ದೇವಿ, ಹರಳಯ್ಯ, ಮಲ್ಲಿಕಾರ್ಜುನಸ್ವಾಮಿ, ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮೊಳಕಾಲ್ಮೂರು ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿನ ಸ್ವಾಮಿಯ ನೂರಾರು ಭಕ್ತರು ಬಾಯಿಗೆ ಬೀಗ ಹಾಕಿಕೊಂಡು ನುಂಕೇಮಲೆ ಬೆಟ್ಟದ ಕೆಳಗಿರುವ ಹರಳಯ್ಯಸ್ವಾಮಿ ದೇವಸ್ಥಾನದ ಬಳಿ ಇರುವ ತುಪ್ಪದಮ್ಮ ದೇವಿ ಪಾದಗಟ್ಟೆಗೆ ಆಗಮಿಸಿದರು. ಅಲ್ಲಿ ಬಾಯಿ ಬೀಗವನ್ನು ತೆಗೆದು ಹರಕೆ ಸಮರ್ಪಿಸಿದರು. ಹಲವಾರು ಭಕ್ತರು ತುಪ್ಪದಮ್ಮ ದೇವಿಗೆ ಬೇವಿನ ಉಡುಗೆ ಹರಕೆ ತೀರಿಸಿದರು.
ಸಂಜೆ ಸುಮಾರು 5 ಗಂಟೆ ವೇಳೆಗೆ ಸಿದ್ದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಿಡಿ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಯಿತು. ಇದಕ್ಕೂ ಮುನ್ನ ಸಿಡಿ ಉತ್ಸವ ತಿರುಗುವ ಮದು ಮಗನು ಒಂಭತ್ತು ದಿನಗಳವರೆಗೆ ವ್ರತ ಪೂರೈಸಿ ಸಿಡಿ ಉತ್ಸವದಂದು ವಾದ್ಯಮೇಳಗಳೊಂದಿಗೆ
ತುಪ್ಪದಮ್ಮ ದೇವಿ ದೇವಸ್ಥಾನಕ್ಕೆ ತೆರಳಿದ. ಇದಾದ ಬಳಿಕ ಸಿದ್ದೇಶ್ವರಸ್ವಾಮಿ ದೇವಸ್ಥಾನದವರೆಗೂ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಸಿ ಪಾದಗಟ್ಟೆಗೆ ಆಗಮಿಸಿದ. ಅಲ್ಲಿ ಸಿಡಿ ಉತ್ಸವ ಕೈಗೊಳ್ಳುವ ಮದುಮಗನ ಬೆನ್ನಿಗೆ ಕೊಂಡಿಯನ್ನು ಹಾಕಲಾಯಿತು. ವಾದ್ಯ ಮೇಳಗಳೊಂದಿಗೆ ಸಿಡಿ ಕಂಬದ ಬಳಿ ಬಂದು ಬೆಟ್ಟದ ಮೇಲಿರುವ ದೀಪಸ್ತಂಭಕ್ಕೆ ಹಚ್ಚಿರುವ ಜ್ಯೋತಿಯ ದರ್ಶನ ಮಾಡಲಾಯಿತು. ನಂತರ ಅಲಂಕೃತ ಸಿಡಿ ಕಂಬಕ್ಕೆ ಕಟ್ಟಿ ಸಿಡಿ ಉತ್ಸವನ್ನು ಆಚರಿಸಲಾಯಿತು.
ತಾಲೂಕಿನ 33 ಗ್ರಾಮಗಳ ಭಕ್ತರು ಹಾಗೂ ದಾವಣಗೆರೆ, ಬಳ್ಳಾರಿ, ಶಿವಮೊಗ್ಗ ಹಾಗೂ ವಿವಿಧ ಜಿಲ್ಲೆ ಮತ್ತು ನೆರೆಯ ಆಂಧ್ರಪ್ರದೇಶದ ರಾಯದುರ್ಗ, ಅನಂತಪುರ, ಕಲ್ಯಾಣದುರ್ಗಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಸಿಡಿ ಉತ್ಸವಕ್ಕೆ ಆಗಮಿಸಿದ್ದರು. ಸಿಡಿ ಕಂಬಕ್ಕೆ ಬಾಳೆಹಣ್ಣು ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ಸಿಡಿ ತಿರುಗುವ ಮದುಮಗನಿಗೆ ಕೊಂಡಿ ಹಾಕಿದ ನಂತರ ಬೆಟ್ಟದಲ್ಲಿರುವ ಹರಳಯ್ಯನ ವಾರಸುದಾರರು ಕೊಂಡಿ ಕಾಣಿಕೆಯನ್ನು ಪಡೆದರು. ಭಕ್ತರು ನುಂಕಪ್ಪ, ಸಿದ್ದೇಶ್ವರ, ತುಪ್ಪದಮ್ಮ ಹಾಗೂ ಹರಳಯ್ಯಸ್ವಾಮಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.
ಸಿಡಿ ಉತ್ಸವದಲ್ಲಿ ಮಂಗಲ್ನಾಥ್ ಸ್ವಾಮೀಜಿ, ಶಾಸಕ ಬಿ. ಶ್ರೀರಾಮುಲು, ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ತಾಪಂ ಸದಸ್ಯ ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷ ಶಿವಣ್ಣ, ಗ್ರಾಪಂ ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ಲೋಟನಾಥ್, ಅಂಜನೇಯ, ಶಂಕರ್, ಪಿಡಿಒ ಕರಿಬಸಪ್ಪ, ಮುಖಂಡರಾದ ಚಂದ್ರಶೇಖರ ಗೌಡ, ತಿಪ್ಪಯ್ಯ, ಜಯಪಾಲ್, ಮೀಸೆ ಬೋರಯ್ಯ, ವಿ. ಮಾರನಾಯಕ, ಸೂರಯ್ಯ, ಪರಮೇಶ್ವರಪ್ಪ, ಎಸ್.ಒ.ಪಾಲಯ್ಯ, ದೇವರತ್ನ , ಟಿ.ಟಿ. ರವಿಕುಮಾರ್, ಎಲ್ಐಸಿ ನಾಗರಾಜ್, ಡಿ.ಜಿ. ಮಂಜುನಾಥ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ