ಪಂಚತಂತ್ರ; ಗ್ರಾಪಂ ನೌಕರರು ಅತಂತ್ರ
5-6 ವರ್ಷದಿಂದ ಸೇವೆ ಸಲ್ಲಿಸಿದ ಗ್ರಾಪಂ ನೌಕರರಿಗೆ ಸರ್ಕಾರದ ನಿಧಿಯಿಂದ ವೇತನ ಪಾವತಿಗೆ ಆಗ್ರಹ
Team Udayavani, Jul 22, 2019, 12:47 PM IST
ಮುದಗಲ್ಲ: ಬನ್ನಿಗೋಳ ಗ್ರಾಪಂ ಕಾರ್ಯಾಲಯ
ಮುದಗಲ್ಲ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರದಲ್ಲಿ ಗ್ರಾಪಂ ನೌಕರರನ್ನು ನೋಂದಣಿ ಮಾಡಿದ್ದಲ್ಲಿ ಸರ್ಕಾರದ ನಿಧಿಯಿಂದ ಇಎಫ್ಎಂಎಸ್ ಮೂಲಕ ನೇರವಾಗಿ ಗ್ರಾಪಂ ನೌಕರರ ಖಾತೆಗೆ ವೇತನ ಪಾವತಿಸಲಾಗುತ್ತಿದೆ.
ಆದರೆ ಲಿಂಗಸುಗೂರ ತಾಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ 202 ಸಿಬ್ಬಂದಿಇದ್ದು, ಅದರಲ್ಲಿ ಸುಮಾರು 102 ಗ್ರಾಪಂ ನೌಕರರ ಮಾಹಿತಿಯನ್ನು ಆಯಾ ಪಿಡಿಒ ಹಂತದಲ್ಲಿ ಪಂಚತಂತ್ರದಲ್ಲಿ ಅಳವಡಿಸಲಾಗಿತ್ತು, ಅವುಗಳಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಈಗಾಗಲೇ ಸುಮಾರು 70 ಜನ ನೌಕರರ ದಾಖಲೆಗಳನ್ನು ಪರಿಶೀಲಿಸಿ ಕೇವಲ 18 ಜನ ನೌಕರರಿಗೆ ಮಾತ್ರ ಅನುಮೋದನೆ ನೀಡಿದ್ದಾರೆ. ಇನ್ನುಳಿದ 52ಜನ ನೌಕರರ ಮಾಹಿತಿಯನ್ನು ತಿರಸ್ಕರಿಸಿದ್ದಾರೆ. ಉಳಿದ 52 ಜನ ನೌಕರರ ಪರಿಸ್ಥಿತಿ ಅಯೋಮಯವಾಗಿದೆ. ಇವರಲ್ಲಿ ಬಹಳಷ್ಟು ನೌಕರರು ಸುಮಾರು 10-15 ವರ್ಷಗಳಿಂದ ಕನಿಷ್ಠ ವೇತನ ಇಲ್ಲದೇ ಸೇವೆ ಸಲ್ಲಿಸಿದ್ದಾರೆ. ಹೆಚ್ಚಿನವರು ಅನಕ್ಷರಸ್ಥರಿದ್ದಾರೆ. ಇವರ ಶೈಕ್ಷಣಿಕ ದಾಖಲೆಗಳಿಲ್ಲ. ಹೀಗಾಗಿ ಜಿಲ್ಲಾ ವೈದ್ಯಕಿಯ ಮಂಡಳಿಯಿಂದ ಪಡೆದ ವಯಸ್ಸಿನ ದೃಢೀಕರಣ ಪ್ರಮಾಣಪತ್ರದ ಆಧಾರದ ಮೇಲೆ ಅನುಮೋದಿಸಬೇಕೆಂದು ಗ್ರಾಪಂ ನೌಕರರ ಸಂಘಟನೆ ಆಗ್ರಹಿಸಿದೆ. 30-40 ತಿಂಗಳುಗಳಿಂದ ವೇತನವಿಲ್ಲದೇ ನೀರಗಂಟಿ ಕೆಲಸ, ಗ್ರಾಪಂ ಸಫಾಯಿ ಹಾಗೂ ಗ್ರಾಪಂ ಅಟೆಂಡರ್ ಕೆಲಸ ನಿರ್ವಹಿಸುತ್ತಿರವ ನೌಕರರ ಬದುಕು ತುಂಬಾ ಶೋಚನಿಯವಾಗಿದೆ. ಗ್ರಾಮ ಪಂಚಾಯಿತಿಗಳು ಕರ ವಸೂಲಾತಿ ಹಣದಲ್ಲಿ ಶೇ. 40ರಷ್ಟು ಸಿಬ್ಬಂದಿ ವೇತನ ನೀಡುತ್ತಿಲ್ಲ ಹಾಗೂ ವೇತನ ನೀಡುವ ಭರವಸೆ ಕೂಡಾ ಇರುವುದಿಲ್ಲ. ಕಾರಣ ತಾಲೂಕು ಪಂಚಾಯಿತಿ ಅಧಿಕಾರಿಗಳು ಈಗಾಗಲೇ ತಿರಸ್ಕರಿಸಿದ ನೌಕರರ ಮಾಹಿತಿಯನ್ನು ಪಿಡಿಒ ಲಾಗಿನ್ನಿಂದ ತಮ್ಮ ಲಾಗಿನ್ಗೆ ತರಿಸಿಕೊಂಡು ಸಾಧ್ಯವಾದಷ್ಟು 5-6 ವರ್ಷಕ್ಕೂ ಮೆಲ್ಪಟ್ಟು ಸೇವೆ ಸಲ್ಲಿಸಿದ ನೌಕರರಿಗೆ ಸರಕಾದ ನಿಧಿಯಿಂದ ವೇತನ ದೊರೆಯುವಂತೆ ಮಾಡಬೇಕೆಂದು ಗ್ರಾಪಂ ಸಿಬ್ಬಂದಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
MUST WATCH
ಹೊಸ ಸೇರ್ಪಡೆ
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ