ಮೋಕ್ಷಕ್ಕಾಗಿ ನದಿಗೆ ಹಾರಿದ ವೃದ್ಧ ದಂಪತಿ : ಪತಿ ಸಾವು, ಪತ್ನಿ ರಕ್ಷಣೆ
Team Udayavani, Jul 24, 2018, 4:21 PM IST
ನಂಜನಗೂಡು : ಮೋಕ್ಷ ಪಡೆಯಲೆಂದು ವೃದ್ಧ ದಂಪತಿಗಳು ಕಪಿಲಾ ನದಿಗೆ ಹಾರಿದ ಘಟನೆ ಮಂಗಳವಾರ ನಡೆದಿದ್ದು, ಪತಿ ದಾರುಣವಾಗಿ ಸಾವನ್ನಪ್ಪಿದರೆ,ಪತ್ನಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಬೆಂಗಳೂರಿನ ಹೆಬ್ಬಾಳ ಮೂಲದ 70 ವರ್ಷದ ನಾಗರಾಜು ಅವರು ಸಾವನ್ನಪ್ಪಿದ್ದು, ರಕ್ಷಣೆಗೊಳಗಾಗಿರುವ ಪತ್ನಿ ಕಲಾವತಿ(60) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನದಿಗೆ ಹಾರಿದ ದಂಪತಿಗಳನ್ನು ಕಂಡ ಸ್ಥಳೀಯರು ರಕ್ಷಣೆ ಮಾಡಿದರಾದರೂ ಪತಿ ಬದುಕುಳಿಯಲಿಲ್ಲ.
ಆಸ್ಪತ್ರೆಯಲ್ಲಿರುವ ಕಲಾವತಿ ಅವರು ಮೋಕ್ಷ ಪಡೆಯಲೆಂದು ನದಿಗೆ ಹಾರಿರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.