ಹೆರಿಗೆ ಆಸ್ಪತ್ರೇಲಿ ಸಂಸದರಿಗೆ ಇಲ್ಲಗಳ ದರ್ಶನ: ಅಧಿಕಾರಿಗಳಿಗೆ ತರಾಟೆ
Team Udayavani, Aug 22, 2017, 12:44 PM IST
ನಂಜನಗೂಡು: ರಾಜ್ಯದ ಆರೋಗ್ಯ ಸಚಿವ ರಮೇಶಕುಮಾರ್ರಿಂದ ಚಾಲನೆಗೊಂಡು 7 ತಿಂಗಳಾದರೂ ಕಂದನ ಸೊಲ್ಲೇ ಕೇಳದ ನಂಜನಗೂಡಿನ ಹೆರಿಗೆ ಆಸ್ಪತ್ರೆಗೆ ಸಂಸದ ಧ್ರುವನಾರಾಯಣ್ ಸೋಮವಾರ ಭೇಟಿ ನೀಡಿ ತ್ವರಿತವಾಗಿ ಹೆರಿಗೆ ಪ್ರಕ್ರಿಯೆ ಪ್ರಾರಂಭಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಂಜನಗೂಡಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಸುಮಾರು 7 ಕೋಟಿ ರೂ., ವೆಚ್ಚದಲ್ಲಿ ನಿರ್ಮಿತವಾದ ಅತ್ಯಾಧುನಿಕ ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು, ಕಟ್ಟಡದ ಉದ್ಘಾಟನೆಯಾಗಿ ನವಮಾಸ ತುಂಬುವ ವೇಳೆಗಾದರೂ ಹೆರಿಗೆ ಆರಂಭಿಸಿ ಎಂದರು.
ಸಂಸದರ ಸೂಚನೆಗೆ ಪ್ರತಿಕ್ರಿಯಿಸಿದ ನಂಜನಗೂಡು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪದ್ಮರಾಜು, ತಾಲೂಕು ವೈದ್ಯಾಧಿಕಾರಿ ಕಲಾವತಿ , ಮಹಿಳಾ ವೈದ್ಯೆ ಪುಟ್ಟತಾಯಮ್ಮ, ಹೆರಿಗೆ ಮಾಡಿಸಲು ಮಹಿಳಾ ವೈದ್ಯರಾದ ನಾವಿದ್ದೇವೆ. ಅನಸ್ತೇಷಿಯಾಕ್ಕೂ ವೈದ್ಯರು ಬಂದಿದ್ದಾರೆ. ಆದರೆ ಮಕ್ಕಳ ವೈದ್ಯರೇ ಇನ್ನೂ ಬಂದಿಲ್ಲ ಎಂದರು.
ಪ್ರಾರಂಭದಲ್ಲಿ ವೈದ್ಯರನ್ನು ನೇಮಿಸದೆ ಆಪರೇಷನ್ ವಿಭಾಗ ಸಿದ್ಧಪಡಿಸಲಾಗಿತ್ತು. ಈಗ ಮತ್ತೆ ಅದನ್ನು ಸುಸ್ಥಿತಿಗೆ ತರಲು ತಿಂಗಳಾದರೂ ಬೇಕು. ಹೀಗಾಗಿ ಸುಲಭ ಹೆರಿಗೆಯಾದರೆ ಮಾತ್ರ ಕಂದನ ಸೊಲ್ಲು ಕೇಳಿಸಬಹುದು ಎಂದರು.
ಮುಖ್ಯಮಂತ್ರಿಗಳಿಗೆ ದೂರು: ಸಾರ್ವಜನಿಕ ಆಸ್ಪತ್ರೆ ರಕ್ತ ಪರೀûಾ ಯಂತ್ರವನ್ನು 15 ದಿನದಲ್ಲಿ ದುರಸ್ತಿ ಪಡಿಸದಿದ್ದರೆ ತಾವು ಮುಖ್ಯಮಂತ್ರಿಗಳಿಗೆ ದೂರು ನೀಡುವುದಾಗಿ ಸಂಸದ ಆರ್.ಧ್ರುವನಾರಾಯಣ್ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಡಿಎಚ್ಒ ರನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಈ ಕುರಿತು ನಿಮಗೆಲ್ಲ ಆದೇಶಿಸಿ ತಿಂಗಳ ಮೇಲಾದರೂ ಅದು ದುರಸ್ತಿಯಾಗಿಲ್ಲ. ಮುಖ್ಯಮಂತ್ರಿಗಳೂ ಸೇರಿದಂತೆ ಜನಪ್ರತಿನಿಧಿಗಳಾದ ನಮಗೆಲ್ಲಾ ಅಧಿಕಾರಿ ಮಾಡುತ್ತಿರುವ ಅಪಮಾನ. ಈ ಕುರಿತು ತಾವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೂರು ಸಲ್ಲಿಸುವುದಾಗಿ ಗುಡುಗಿದರು.
ರಸ್ತೆ ಅವ್ಯವಸ್ಥೆ ಸಚಿವರ ಗಮನಕ್ಕೆ ನೀವೇ ತನ್ನಿ: ನಂಜನಗೂಡು ಪಟ್ಟಣದ ರಸ್ತೆ ಅವ್ಯವಸ್ಥೆ ಕುರಿತು ಸುದ್ದಿಗಾರರು ಸಂಸದರ ಗಮನ ಸೆಳೆದಾಗ ಕಾಮಗಾರಿ ಲೋಕೋಪಯೋಗಿ ಇಲಾಖೆ ನೇರ ಉಸ್ತುವಾರಿಯಲ್ಲಿ ನಡೆಯುತ್ತಿರುವುದರಿಂದ ನಿಮ್ಮವರೇ ಆಗಿರುವ ಡಾ.ಎಚ್.ಸಿ.ಮಹದೇವಪ್ಪ ಅವರ ಗಮನಕ್ಕೆ ತನ್ನಿ ಎಂದು ಸಂಸದರು ಜಾರಕೆ ಉತ್ತರ ನೀಡಿದರು. ಶಾಸಕ ಕಳಲೆ ಕೇಶವಮೂರ್ತಿ, ಮುಖಂಡರಾದ ಗುಂಡ್ಲುಪೇಟೆ ನಂಜಪ್ಪ, ಪುರಸಭಾ ಮಾಜಿ ಅಧ್ಯಕ್ಷ ಶ್ರೀಧರ್, ಗಂಗಾಧರ್ ಮತ್ತಿತರರಿದ್ದರು.
* ಕಟ್ಟಡ ಉದ್ಘಾಟನೆಯಾಗಿ 7 ತಿಂಗಳಾದರೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂದು ಸಂಸದರ ಗಮನಕ್ಕೆ ಬಂದಾಗ, ತಕ್ಷಣ ನಗರಸಭೆ ಆಯುಕ್ತ ವಿಜಯರನ್ನು ಸ್ಥಳಕ್ಕೆ ಕರೆಸಿಕೊಂಡ ಅವರು ತಕ್ಷಣ ಆಸ್ಪತ್ರೆಗೆ ನೀರಿನ ಸಂಪರ್ಕ ಒದಗಿಸುವಂತೆ ಸೂಚಿಸಿದರು.
ಸಚಿವರೊಂದಿಗೆ ಚರ್ಚಿಸುವೆ
ಲಾಂಡ್ರಿ ಸೌಲಭ್ಯವೂ ಇಲ್ಲ, ಹೆರಿಗೆ ಪ್ರಾರಂಭವಾದರೆ ಬಟ್ಟೆ ಒಗೆದು ಸ್ವತ್ಛ ಮಾಡುವ ಸೌಲಭ್ಯಬೇಕು ಎಂದು ಸಿಬ್ಬಂದಿ ಅಲವತ್ತುಕೊಂಡರು. ಹೀಗಾಗಿ ಸದ್ಯ ಹೊರರೋಗಿಗಳ ವಿಭಾಗ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲಾ ಸೌಲಭ್ಯ ಕಲ್ಪಿಸಿದ ನಂತರವೇ ಹೆರಿಗೆ ಎಂಬ ಅಭಿಪ್ರಾಯ ಕೇಳಿಬಂತು.
ಅಲ್ಲಿಯವರಿಗೆ ತಾಯಿ ಮಕ್ಕಳ ಆಸ್ಪತ್ರೆ ಗರ್ಭಿಣಿಯರು, ಬಾಣಂತಿಯರ ಆಸ್ಪತ್ರೆಯಾಗಿ ಮಾತ್ರ ಕಾರ್ಯ ನಿರ್ವಹಿಸಬಹುದು ಎಂಬುದನ್ನು ವೈದ್ಯರು ಸ್ಪಷ್ಟಪಡಿಸಿದರು. ನಂತರ ಮಾತನಾಡಿದ ಸಂಸದರು, ತಾವು ಕೊರತೆಗಳ ಕುರಿತು ಆರೋಗ್ಯ ಇಲಾಖೆ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು