ಮುಖಂಡರ ಬಳಿಗೆ ಆಕಾಂಕ್ಷಿಗಳ ನಿಯೋಗ


Team Udayavani, May 5, 2019, 3:00 AM IST

mukhandara

ನಂಜನಗೂಡು: ನಗರಸಭೆಯ ಚುನಾವಣೆ ಮೇ 29 ರಂದು ನಡೆಯಲಿದೆ ಎಂದು ಪ್ರಕಟವಾಗಿದ್ದೇ ತಡ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಆಕಾಂಕ್ಷಿಗಳು ಶುಕ್ರವಾರ ಮುಂಜಾನೆಯೆ ಸಂಸದ ಆರ್‌ ಧ್ರುವನಾರಾಯಣ ಹಾಗೂ ಮಾಜಿ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್‌ ನಿವಾಸಗಳತ್ತ ತಮ್ಮ ಬೆಂಬಲಿಗರ ದಂಡಿನೊಂದಿಗೆ ದೌಡಾಯಿಸಿ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದಾರೆ.

ಕಳೆದ ಬಾರಿ ಪುರಸಭೆಯಾಗಿದ್ದ ನಂಜನಗೂಡು ಎರಡು ವರ್ಷಗಳ ಹಿಂದೆ ನಗರಸಭೆಯಾಗಿ ಭಡ್ತಿ ಹೊಂದಿದ್ದು, ಇದೇ ನಗರಸಭೆಯ ಪ್ರಥಮ ಚುನಾವಣೆಯಾಗಿದೆ. ಅಂದು 28 ಸ್ಥಾನಗಳಿದ್ದು, ಈಗ ಮೂರು ಸ್ಥಾನಗಳ ಹೆಚ್ಚಳದೊಂದಿಗೆ 31 ಜನ ಪ್ರತಿನಿಧಿಗಳಾಗಲು ಅವಕಾಶ ಲಭ್ಯವಾಗಿದೆ.

ಅತಂತ್ರ ಪುರಸಭೆ: ಕಳೆದ ಬಾರಿಯ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್‌ ನೇತಾರರಾಗಿದ್ದ ಶ್ರೀನಿವಾಸ್‌ ಪ್ರಸಾದ ಹಾಗೂ ಸಂಸದ ಆರ್‌ ಧ್ರುವನಾರಾಯಣ ನೇತ್ರತ್ವದ ಕೈ ಪಕ್ಷ ಕೇವಲ 10 ಸ್ಥಾನ ಗಳಿಸಲು ಸಾಧ್ಯವಾಗಿದ್ದರೆ, ಕಳಲೆ ಕೇಶವ ಮೂರ್ತಿ ನೇತ್ರತ್ವದ ಜಾತ್ಯತೀತ ಜನತಾದಳ 9 ಸ್ಥಾನಗಳನ್ನು ಗಳಿಸಿತ್ತು. ಅಂದು ದಾಯಾದಿಗಳಾಗಿ ವಿಭಜನೆಯಾಗಿದ್ದ ಬಿಜೆಪಿ ನಾಲ್ಕು ಹಾಗೂ ಕೆಜೆಪಿ ಮೂರು ಸ್ಥಾನ ಪಡೆದಿದ್ದು ಓರ್ವರು ಪಕ್ಷೇತರರಾಗಿ ಪುರಸಭೆಯನ್ನು ಪ್ರವೇಶಿಸುವದರೊಂದಿಗೆ ಅತಂತ್ರ ಪುರಸಭೆ ಸೃಷ್ಟಿಯಾಗಿತ್ತು.

ಪಕ್ಷ ರಹಿತ ಆಡಳಿತ: ಅತಂತ್ರ ಪುರಸಭೆ ಸೃಷ್ಟಿಯಾಗಿದ್ದರೂ ಆಡಳಿತದ ಚುಕ್ಕಾಣಿ ಹಿಡಿಯಲು ಇಲ್ಲಿನ ಪಕ್ಷಗಳಲ್ಲಿ ಒಮ್ಮತ ಏರ್ಪಟ್ಟಿದ್ದರ ಫ‌ಲವಾಗಿ ಮೂರು ಪಕ್ಷಗಳ ಸಹಭಾಗಿತ್ವದಲ್ಲಿ ಅಧಿಕಾರ ಹಾಗೂ ಲಾಭಗಳನ್ನು ಹಂಚಿಕೊಂಡು ಚುನಾವಣೆಗೆ ಮಾತ್ರ ನಾವು ಪಕ್ಷ ನಂತರ ಪಕ್ಷಾತೀತ ಎಂದು ಮತದಾರರ ಮುಂದೆ ಬಹಿರಂಗಗೊಳಿಸಿದ್ದು,

ಅಂದು ಪಕ್ಷ ಇಂದು ವಿಪಕ್ಷ ಅಂದು ಪುರಸಭೆ ಚುನಾವಣೆಯಲ್ಲಿ ಅಂದಿನ ಶಾಸಕ ಹಾಗೂ ಸಚಿವ ಶ್ರೀನಿವಾಸ ಪ್ರಸಾದ್‌ ಮತ್ತೂ ಸಂಸದ ಆರ್‌ ಧ್ರುವನಾರಾಯಣ ಒಂದೆ ಪಕ್ಷದಲ್ಲಿದ್ದು ಚುನಾವಣೆ ನಡೆಸಿದ್ದರೆ ರಾಜಕೀಯದ ಏರು ಪೇರಿನಿಂದಾಗಿ ಈಗ ಪರಸ್ಪರ ವಿರೋಧ ಪಕ್ಷವಾಗಿ ಚುನಾವಣೆ ನಡೆಸಬೇಕಾಗಿದೆ.

ಅಂದು ಕಾಂಗ್ರೆಸ್‌ ಹಾಗೂ ಬಿಜೆಪಿ ಗೆ ವಿರುದ್ಧವಾಗಿ ಜೆಡಿಎಸ್‌ ಪಕ್ಷವನ್ನು ಮುನ್ನಡೆಸಿದ್ದ ಕಳಲೆಕೇಶವಮೂರ್ತಿ ಬದಲಾದ ರಾಜಕೀಯದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಸೇರಿ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ನಂತರ ಸೋತು ಮಾಜಿ ಶಾಸಕರಾಗಿ ಈಗ ಸಂಸದ ಆರ್‌ ಧ್ರುವನಾರಾಯಣರೊಂದಿಗೆ ಕೈ ಪಕ್ಷವನ್ನು ಸಂಘಟಿಸುವ ಸಿದ್ಧತೆಯಲ್ಲಿದ್ದಾರೆ.

ಅಂದು ಕೈ ಪಕ್ಷದ ಸವೊìಚ್ಚ ನಾಯಕರಂತಿದ್ದ ಶ್ರೀನಿವಾಸ್‌ ಪ್ರಸಾದ ಇಂದು ಬಿಜೆಪಿಯನ್ನು ಗೆಲ್ಲಿಸಿಕೊಳ್ಳುವ ತವಕದಲ್ಲಿದ್ದು ಜೆಡಿಎಸ್‌ ಮಾತ್ರ ಜಿಲ್ಲಾದ್ಯಕ್ಷ ಎನ್‌ ನರಸಿಂಹಸ್ವಾಮಿಯವರ ಮನೆ ಬಾಗಿಲಿನಲ್ಲಿ ನಿಂತು ಹೋರಾಡುವ ಸ್ಥಿತಿಗೆ ತಲುಪಿದೆ.

ಕರಿ ನೆರಳಿನಲ್ಲಿ ಚುನಾವಣೆ: ನಂಜನಗೂಡು ನಗರಸಭೆಯ ಪ್ರಥಮ ಚುನಾವಣೆಯು ಲೋಕಸಭಾ ಚುನಾವಣೆಯ ಕರಿ ನೆರಳಿನಲ್ಲಿ ನಡೆಯುವಂತಾಗಿದೆ. ಈ ಭಾಗದ ಟಿಕೆಟ್‌ ಹಂಚಿಕೆಯ ಹೊಣೆಗಾರಿಕೆ ಇರುವ ಮಾಜಿ ಸಚಿವ ಶ್ರೀನಿವಾಸ್‌ ಪ್ರಸಾದ್‌ ಹಾಗೂ ಹಾಲಿ ಸಂಸದ ಆರ್‌. ಧ್ರುವನಾರಾಯಣರಿಬ್ಬರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ, ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ನಡೆಸಿದ್ದು ಯಾರಿಗೆ ನಂಜುಂಡೇಶ್ವರನ ಪ್ರಸಾದ ಎಂಬ ಮತದಾರರ ಗುಟ್ಟು ರಟ್ಟಾಗುವ ಮುಂಚೆಯೇ ನಗರಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದು

ಫ‌ಲಿತಾಂಶದ ಕರಿ ನೆರಳು ಈ ಚುನಾವಣೆಯ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ ಎನ್ನಲಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲು ಸಾಕಷ್ಟು ಬಿರುಸಿನ ಸ್ಪರ್ಧೆ ನಡೆದರೆ ಜೆಡಿಎಸ್‌ ಮಾತ್ರ ಹಲವಡೆ ಏರಡೂ ಪಕ್ಷಗಳ ಅತೃಪ್ತರಿಗಾಗಿ ಕಾಯುವಂತಾಗಿದೆ.

ಶ್ರೀನಿವಾಸ ಪ್ರಸಾದ್‌ ಮತ್ತೂ ಧ್ರುವನಾರಾಯಣರ ಕ್ರಪೆ ಇದ್ದವರಿಗೆ ಆಯಾ ಪಕ್ಷದ ಬಿ ಫಾರಂ ಖಂಡಿತವಾಗಲಿದ್ದು ಅದಕ್ಕಾಗಿ ಆಕಾಂಕ್ಷಿಗಳು ಇಂದಿನಿಂದಲೇ ಅವರಿಬ್ಬರ ನಿವಾಸದತ್ತ ತೆರಳಿದ್ದಾರೆ.

ಟಾಪ್ ನ್ಯೂಸ್

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.