- Friday 13 Dec 2019
ನಕಲಿ ಕ್ಲಿನಿಕ್ಗಳ ಮೇಲೆ ದಾಳಿ: ನೋಟಿಸ್
Team Udayavani, May 15, 2019, 3:00 AM IST
ಹುಣಸೂರು: ನಗರದಲ್ಲಿ ಪೈಲ್ಸ್ ಕಾಯಿಲೆಗೆ ನೀಡುತ್ತಿದ್ದ ನಕಲಿ ವೈದ್ಯರಿಗೆ ನೋಟಿಸ್ ನೀಡಿದ್ದಲ್ಲದೇ ಕ್ಲಿನಿಕ್ಗೆ ಬೀಗ ಜಡಿದಿರುವ ಘಟನೆ ಜರುಗಿದೆ.
ನಗರದ ಜನನಿಬಿಡ ಪ್ರದೇಶವಾದ ಗೋಕುಲ ರಸ್ತೆಯಲ್ಲಿ ಅನನ್ಯ ಎಂಬ ಹೆಸರಿನಲ್ಲಿ ಖಾಸಗಿ ಕ್ಲಿನಿಕ್ ತೆರೆದು ವಂಚಿಸುತ್ತಿದ್ದರೆನ್ನಲಾಗಿರುವ ವೈದ್ಯ ಡಾ.ಎನ್.ಸಿ.ರಾಯ್ ಚಿಕಿತ್ಸೆ ನೀಡುತ್ತಿರುವುದನ್ನು ದಾಳಿ ವೇಳೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ನೇತೃತ್ವದ ತಂಡವು ಪತ್ತೆ ಹಚ್ಚಿದ್ದು, ಇದೀಗ ಬಾಗಿಲು ಮುಚ್ಚಿಸಿದೆ.
ಖಾಸಗಿ ವೈದ್ಯರೊಬ್ಬರು ಗೋಕುಲ ರಸ್ತೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಬಳಿ ಯಾವುದೇ ದಾಖಲೆ ಇಲ್ಲವೆಂದು ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಮಂಗಳವಾರ ದಿಢೀರ್ ದಾಳಿ ನಡೆಸಿದ್ದಾರೆ.
ಡಾ.ರಾಯ್ ನಡೆಸುತ್ತಿರುವ ಅನನ್ಯ ಕ್ಲಿನಿಕ್ನಲ್ಲಿ ಕೆಪಿಎಂಎ ಕಾಯ್ದೆಯಡಿ ದಾಖಲಾತಿಗಳು, ವಿದ್ಯಾರ್ಹತೆ ದಾಖಲಾತಿ ಇನ್ನಾವುದೂ ಇರಲಿಲ್ಲ. ಕ್ಲಿನಿಕ್ನಿಂದ ಜೈವಿಕ ತ್ಯಾಜ್ಯಗಳ ಸಂಗ್ರಹಣೆ ಮತ್ತು ವಿತರಣೆ ಕೂಡ ಸಮರ್ಪಕವಾಗಿರದಿದ್ದರಿಂದ ಬೀಗ ಹಾಕಿಸಿದ್ದಾರೆ. 24 ಗಂಟೆಯಲ್ಲಿ ಸೂಕ್ತ ದಾಖಲಾತಿಗಳನ್ನು ಒದಗಿಸುವಂತೆ ಟಿಎಚ್ಒ ಡಾ.ಕೀರ್ತಿಕುಮಾರ್ ನೋಟಿಸ್ ನೀಡಿದ್ದಾರೆ.
ಅವಧಿ ಮುಗಿದ ಔಷಧ ಪತ್ತೆ: ಗೋಕುಲ ರಸ್ತೆಯ ಬಾಲಾಜಿ ಕ್ಲಿನಿಕ್ ಹಾಗೂ ಐಕೆ ಕಲ್ಯಾಣ ಮಂಟಪ ರಸ್ತೆಯ ಹೋಲಿ ಕ್ಲಿನಿಕ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಕ್ಲಿನಿಕ್ನಿಂದ ಜೈವಿಕ ತ್ಯಾಜ್ಯಗಳ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆ ಇಲ್ಲವಿದ್ದು, ಆಲೋಪತಿ ವೈದ್ಯರಲ್ಲದಿದ್ದರೂ ಆಲೋಪತಿ ಚಿಕಿತ್ಸೆ ನೀಡುತ್ತಿರುವುದು ಹಾಗೂ ಅವಧಿ ಮುಗಿದ ಔಷಧ ದಾಸ್ತಾನು ಇದ್ದುದನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ನಿಯಂತ್ರಣಕ್ಕಾಗಿ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳ ಆದೇಶದನ್ವಯ ಇಂತಹ ದಿಢೀರ್ ಭೇಟಿ ಮತ್ತು ಪರಿಶೀಲನೆಗಳನ್ನು ನಡೆಸುತ್ತೇವೆ. ನಿಯಮಗಳನ್ನು ಉಲ್ಲಂಘಿಸಿ ವೈದ್ಯ ವೃತ್ತಿ ನಡೆಸುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಅಮಾಯಕರ ಪ್ರಾಣದ ಜೊತೆ ಚೆಲ್ಲಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ದಾಳಿ ವೇಳೆ ಹಿರಿಯ ಆರೋಗ್ಯ ಸಹಾಯಕ ಶಿವನಂಜು ಇದ್ದರು.
ಈ ವಿಭಾಗದಿಂದ ಇನ್ನಷ್ಟು
-
ಮೈಸೂರು: "ನಾನು ಜೆಡಿಎಸ್ ಶಾಸಕನಾಗಿಯೇ ಮುಂದುವರಿಯುತ್ತೇನೆ. ಕಾಂಗ್ರೆಸ್ ಅಥವಾ ಬಿಜೆಪಿ ಸೇರುವ ವಿಚಾರವಿಲ್ಲ' ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ...
-
ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಶಾಸಕ ಎಚ್.ಪಿ.ಮಂಜುನಾಥ್, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರಿಗೆ...
-
ಮೈಸೂರು: ಮೈಸೂರು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಮತ್ತು ಜಮೀನು ಮಂಜೂರಾದರೂ ಅಭಿವೃದ್ಧಿಗೊಳ್ಳದ ಸ್ಮಶಾನಗಳ ಅಭಿವೃದ್ಧಿ ಮತ್ತು ಹದ್ದುಬಸ್ತುನಲ್ಲಿಡುವ...
-
ಪಿರಿಯಾಪಟ್ಟಣ: ಪುರಸಭೆ ಸಿಬ್ಬಂದಿ ಕೊರತೆ, ಆಡಳಿತ ಮಂಡಳಿ ರಚನೆಯಾಗದಿರುವುದು ಹಾಗೂ ಲಂಚದ ಹಾವಳಿಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗಿ ಪ್ರತಿದಿನ...
-
ತಿ.ನರಸೀಪುರ: ಶಿಕ್ಷಣದಿಂದ ಸಾಮಾಜಿಕ ಅಭಿವೃದ್ಧಿ ಹೊಂದಲು ಸಾಧ್ಯವಿರುವುದರಿಂದ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ...
ಹೊಸ ಸೇರ್ಪಡೆ
-
ಹೊಸದಿಲ್ಲಿ: 'ಸಾಮಾಜಿಕ ಭದ್ರತೆ -2019' ಮಸೂದೆದಡಿ ಉದ್ಯೋಗಿಗಳ ಗ್ರಾಚ್ಯುಟಿ ಯೋಜನೆಗೆ ಅಗತ್ಯವಾಗಿರುವ ನಿರಂತರ ಸೇವಾವಧಿಯನ್ನು 5 ವರ್ಷಕ್ಕೆ ಇಳಿಸಿರುವ ಕೇಂದ್ರ ಸರಕಾರ,...
-
ಮಂಗಳೂರು: ಬಹಳ ವರ್ಷಗಳ ಅನಂತರ ರಾಜ್ಯದ ಬಹುತೇಕ ಕಡೆ ಹೆಚ್ಚಿನ ಸರಕಾರಿ ಉದ್ಯೋಗಿಗಳಿಗೆ ವೇತನವು ವಿಳಂಬವಾಗಿ ಪಾವತಿಯಾಗಿದೆ. ಅಲ್ಲದೆ ಕಾಲೇಜು ಉಪನ್ಯಾಸಕರು ಸೇರಿದಂತೆ...
-
ಬೆಂಗಳೂರು: ರಾಜ್ಯದ ಐತಿಹಾಸಿಕ ಪ್ರವಾಸೋದ್ಯಮ ತಾಣವಾಗಿರುವ ಪಟ್ಟದಕಲ್ಲನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ...
-
ಅಂತೂ ಇಂತೂ ಇನ್ನು ಎರಡು ವಾರ ಕಳೆದರೆ 2019 ಪೂರ್ಣಗೊಳ್ಳಲಿದೆ. ಚಿತ್ರರಂಗ ಕೂಡ ಎಂದಿಗಿಂತ ಗರಿಗೆದರಿ ನಿಂತಿದೆ. ಈ ವರ್ಷ ಇಟ್ಟುಕೊಂಡ ಕೆಲವು ನಿರೀಕ್ಷೆ ಸುಳ್ಳಾದರೆ,...
-
ತಿದ್ದುಪಡಿ ಮಸೂದೆಯನ್ನು ಮಂಡಿಸುವ ವೇಳೆ ಕೇಂದ್ರದ ಕಾನೂನು ಸಚಿವ ರವಿಶಂಕರ್ಪ್ರಸಾದ್ ಪ್ರತಿಪಾದಿಸಿದ ಅಂಶವನ್ನು ಇಲ್ಲಿ ಅಗತ್ಯವಾಗಿ ಗಮನಿಸಬೇಕು. ಇಡೀ ದೇಶದಲ್ಲಿರುವ...