ಪೂಜಾ ಫ‌ಲ: ಭಕ್ತರಿಗೆ ಪಂಗನಾಮ ಹಾಕಿದ್ದ ಅರ್ಚಕನ ಬಂಧನ

ಭಕ್ತರನ್ನು ನಂಬಿಸಿ 21 ಲಕ್ಷರೂ ಬಂಗಾರ ಕಳ್ಳತನ ಮಾಡಿದ್ದ ಅರ್ಚಕನ ಬಂಧನ

Team Udayavani, Nov 2, 2020, 8:15 PM IST

ಪೂಜಾ ಫ‌ಲ: ಭಕ್ತರಿಗೆ ಪಂಗನಾಮ ಹಾಕಿದ್ದ ಅರ್ಚಕನ ಬಂಧನ

ಹುಣಸೂರು: ಕಷ್ಟ ಪರಿಹಾರಕ್ಕೆ ಚೌಡೇಶ್ವರಿ ದೇವರನ್ನು ಪೂಜಿಸುವಂತೆ ಭಕ್ತರನ್ನು ನಂಬಿಸಿ, 456 ಗ್ರಾಂ ಚಿನ್ನಾಭರಣ ಲಪಟಾಯಿಸಿದ್ದ ನಯ ವಂಚಕ ಅರ್ಚಕನನ್ನು ಬಿಳಿಕೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾತಿ ಗ್ರಾಮದ ಚೌಡೇಶ್ವರಿ ದೇವಾಲಯದ ಅರ್ಚಕ ಮನು ಎಂಬಾತನೇ ಬಂಧನಕ್ಕೊಳಗಾದಾತ.

ಘಟನೆ ವಿವರ:
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಉಯಿಗೌಡನಹಳ್ಳಿಯ ನಿಂಗಪ್ಪ ತಮ್ಮ ಆರಾಧ್ಯ ದೈವ ಕೆ.ಆರ್‌.ನಗರ ತಾಲೂಕಿನ ಸಾತಿ ಗ್ರಾಮದ ಚೌಡೇಶ್ವರಿ ದೇವಾಲಯಕ್ಕೆ ಆಗಾಗ್ಗೆ ಹೋಗಿ ಬರುತ್ತಿದ್ದರು, ಇದನ್ನೇ ಬಂಡವಾಳವಾಗಿಸಿಕೊಂಡ ಅರ್ಚಕ ಮನು ನಿಮ್ಮ ಮನೆಯಲ್ಲಿ ಚೌಡೇಶ್ವರಿ ದೇವರನ್ನು ಪ್ರತಿಷ್ಟಾಪಿಸಿ, ಪೂಜೆ ಮಾಡಿಸಿದರೆ ಕಷ್ಟ ಪರಿಹಾರವಾಗುವುದೆಂದು ನಂಬಿಸಿದ್ದ,

ಕಷ್ಟ ಪರಿಹಾರಕ್ಕೆ ಇಷ್ಟ ದೇವರ ಪೂಜೆ:
ಪೂಜೆ ಮಾಡಿಸಲು ಸಿದ್ದರಾದ ನಿಂಗಪ್ಪರ ಮನೆಯಲ್ಲಿ 2020ರ ಜೂನ್‌ ಮೊದಲ ವಾರದಲ್ಲಿ ಚೌಡೇಶ್ವರಿ ದೇವರನ್ನು ಪ್ರತಿಷ್ಟಾಪಿಸಿ, ಮನೆಯಲ್ಲಿದ್ದ ಬಂಗಾರದ ಒಡವೆಗಳನ್ನು ದೇವರಿಗೆ ಧರಿಸಿದ್ದಲ್ಲದೆ, ನಿಂಗಪ್ಪರ ಮನೆಗೆ ಬಂದಿದ್ದ ಬಸಪ್ಪ, ಶಿವಲಿಂಗಪ್ಪ, ಪುಟ್ಟಪ್ಪ, ಭಾರತಿ, ಶೀಲಾ, ದೀಪ ಹಾಗೂ ಹುಣಸೂರಿನ ಸಂತೋಷ್‌ರಿಗೂ ನಿಮ್ಮ ಮನೆಯಲ್ಲಿರುವ ಎಲ್ಲ ಚಿನ್ನಾಭರಣಗಳನ್ನು ಪೂಜಾಕಾರ್ಯಕ್ಕೆ ತರುವಂತೆ ತಿಳಿಸಿದ್ದ, ಒಟ್ಟು 456 ಗ್ರಾಂ.ನಷ್ಟು ಚಿನ್ನಾಭರಣ ದೇವರಿಗೆ ಹಾಕಿದ್ದರು. ಪೂಜೆ ನಡೆಸಿದ ನಂತರ ಚಿನ್ನಾಭರಣವನ್ನು ನಿಂಗಪ್ಪರ ಮನೆಯ ಬೀರುವಿನಲ್ಲಿರಿಸಿ ಆಯುಧ ಪೂಜೆವರೆಗೆ ಹೊರಗೆ ತೆಗೆಯಬೇಡಿ, ವಿಜಯ ದಶಮಿಯಂದು ಒಡವೆಗಳನ್ನು ಹೊರತೆಗೆದು ಧರಿಸಿದರೆ ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆಂದು ನಂಬಿಸಿದ್ದ.

ಬಂಗಾರ ಎಗರಿಸಿದ್ದ ಪರಾರಿ:
ನಂತರ ಎಲ್ಲರೊಂದಿಗೆ ಊಟ ಮಾಡಿದ ಪೂಜಾರಿ ಮನು ರಾತ್ರಿ 8.30ರ ವೇಳೆಯಲ್ಲಿ ಬಟ್ಟೆ ಬದಲಾಯಿಸುವ ನೆಪದಲ್ಲಿ ಚಿನ್ನಾಭರಣವಿರಿಸಿದ್ದ ಕೊಠಡಿಗೆ ತೆರಳಿ ಬೀರುವಿನಲ್ಲಿದ್ದ ಚಿನ್ನಾಭರಣವನ್ನು ಕದ್ದು, ತನ್ನ ಬ್ಯಾಗಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದ, ಈ ಸಂಬಂಧ ಬಿಳಿಕೆರೆ ಠಾಣೆಗೆ ನಿಂಗಪ್ಪ ದೂರು ನೀಡಿದ್ದರು.

ಕದ್ದ ಚಿನ್ನ ಅಡವಿಟ್ಟಿದ್ದ ಆರೋಪಿ ಮನು:
ಎಸ್‌.ಪಿ.ರಿಷ್ಯಂತ್‌, ಅಡಿಷನಲ್‌ ಎಸ್‌.ಪಿ.ಶಿವಕುಮಾರ್‌, ಡಿವೈ.ಎಸ್‌.ಪಿ. ಸುಂದರರಾಜ್‌ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ವೃತ್ತ ನಿರೀಕ್ಷಕರಾದ ಕೆ.ಸಿ.ಪೂವಯ್ಯ ಹಾಗೂ ರವಿಕುಮಾರ್‌ ನೇತೃತ್ವದಲ್ಲಿ ಎಸ್‌.ಐ. ಜಯಪ್ರಕಾಶ್‌ ಹಾಗೂ ಸಿಬ್ಬಂದಿಗಳು ಆರೋಪಿಯಾದ ಅರ್ಚಕ ಮನುವನ್ನು ಆಕ್ಟೋಬರ್‌ 20 ರಂದು ಮುಂಜಾನೆ 6 ಗಂಟೆ ವೇಳೆಯಲ್ಲಿ ಕೆ.ಆರ್‌.ನಗರ ಬಸ್‌ ನಿಲ್ದಾಣದಲ್ಲಿ ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದ ವೇಳೆ ಚಿನ್ನಾಭರಣವನ್ನು ವಿವಿಧೆಡೆ ಗಿರವಿ ಇಟ್ಟಿರುವುದಾಗಿ ಬಾಯಿ ಬಿಟ್ಟಿದ್ದ, ಆರೋಪಿ ನೀಡಿದ ಮಾಹಿತಿಯನ್ನಾಧರಿಸಿ ಹುಣಸೂರಿನ ಮುತ್ತೋಟ್‌ ಫೈನಾನ್ಸ್‌, ಮಣಪ್ಪುರಂ ಗೋಲ್ಡ್‌, ಕೆ.ಆರ್‌.ನಗರದ ಖಾಸಗಿ ಗಿರವಿ ಅಂಗಡಿಗಳಲ್ಲಿ ಅಡವಿಟ್ಟಿದ್ದ ಒಟ್ಟು 21 ಲಕ್ಷರೂ ಬೆಲೆ ಬಾಳುವ 456 ಗ್ರಾಂ. ಚಿನ್ನಾಭರಣಗಳನ್ನು ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿ$ಸಲಾಗಿದ್ದು, ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಎಸ್‌.ಪಿ.ರಿಷ್ಯಂತ್‌ ಶ್ಲಾ ಸಿದ್ದಾರೆಂದು ಅಡಿಷನಲ್‌ ಎಸ್‌.ಪಿ.ಶಿವಕುಮಾರ್‌ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಎ.ಎಸ್‌.ಐ.ಸ್ವಾಮಿನಾಯ್ಕ, ತಮ್ಮಣ್ಣ ಸಿಬ್ಬಂದಿಗಳಾದ ಪ್ರಸಾದ್‌, ಪ್ರಸನ್ನಕುಮಾರ್‌, ಅರುಣ,ಸತೀಶ್‌, ರವಿ, ಮಹದೇವ ಚಾಲಕರಾದ ಗೋವಿಂದ,ಚಿಕ್ಕಲಿಂಗು ಭಾಗವಹಿಸಿದ್ದರೆಂದು ವೃತ್ತ ನಿರೀಕ್ಷಕ ಪೂವಯ್ಯ ತಿಳಿಸಿದರು.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.