ಭಾರತ್ ಬಂದ್ :ಹಸಿರು ಮಯವಾದ ನಂಜನಗೂಡಿನ ಬೀದಿಗಳು
Team Udayavani, Sep 27, 2021, 1:50 PM IST
ನಂಜನಗೂಡು:ಭಾರತ್ ಬಂದ್ ಬೆಂಬಲಿಸಿ ಹಸಿರು ಶಾಲು ಹೊದ್ದು ಬಿದಿಗಿಳಿದ ರೈತ ಸಂಘಟನೆಗಳು. ಅವರಿಗೆ ಸಾತ್ ನೀಡಿದ ದಲಿತ ಸಂಘಟನೆಗಳು. ರಸ್ತೆ ಬದಿವ್ಯಾಪಾರಿಗಳು.
ಮೈಸೂರು -ಊಟಿ ರಸ್ತೆಯ ನಗರದ ಹುಲ್ಲಹಳ್ಳಿ ವೃತ್ತದಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆಗಿಳಿದ ರೈತ ಸಂಘದ ಇಬ್ಬಣಗಳು, ಪ್ರತಿಭಟನಾಕಾರರಿಂದ ರೈತ ವಿರೋಧಿಯಾದ ಮೂರೂ ಕಾನೂನುಗಳನ್ನು ವಾಪಸ್ ಪಡೆಯಲು ಆಗ್ರಹಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸುತ್ತ ಪ್ರಮುಖ ಬೀದಿಗಳಲ್ಲಿ ಹೊರಾಟಗಾರರು ಮೆರವಣಿಗೆ ಮಾಡಿದರು.
ಇದನ್ನೂ ಓದಿ:ಸಂಕಷ್ಟದಲ್ಲಿರುವ ಸಮಾಜ ಬಾಂಧವರ ಕಣ್ಣೀರೊರೆಸುವ ಧ್ಯೇಯ: ಸುಕುಮಾರ್ ಎನ್. ಶೆಟ್ಟಿ
ರೈತ ಸಂಘದ ಜಿಲ್ಲಾದ್ಯಕ್ಷ, ಜಿಲ್ಲಾ ವಿದ್ಯಾಸಾಗರ್ ತಾಲೂಕು ಅದ್ಯಕ್ಷ ಸತೀಶರಾವ್, ಹಿಮ್ಮಾವು ರಘು , ದಲಿತ ಒಕ್ಕೂಟದ ನಾಯಕರುಗಳಾದ ಚುಂಚನಳ್ಳಿ ಮಲ್ಲೇಶ,ಮಲ್ಲಳ್ಳಿ ನಾರಾಯಣ, ಕಾರ್ಯ ಬಸವಣ್ಣ ಶಂಕರ ಪುರ ಸುರೇಶ.ನಗಲೆ ವಿಜಯ ಕುಮಾರ್, ನೆತ್ರತ್ವದ ಪ್ರತಿಭಟನಾಕಾರರು ಸುಮಾರು 30 ನಿಮಿಷಗಳ ಕಾಲ ರಸ್ತೆ ತಡೆದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ನಿರಂತರ ಘೋಷಣೆ ಕೂಗುತ್ತಾ.ರಸ್ತೆಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಮುನ್ನೆಚ್ಚರಿಕೆಯಾಗಿ ನೂರಾರು ಪೋಲೀಸರು ಭಿಗಿ ಭದ್ರತೆಯೊಂದಿಗೆ ಪ್ರತಿಭಟನಾಗಾರರ ಸುತ್ತಲೂ ಆವರಿಸಿದ್ದರು.
ಈ ಸಮಯದಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘದ ಅದ್ಯಕ್ಷ ವಿದ್ಯಾಸಾಗರ್ ಹಾಗೂ ಮಲ್ಲಳ್ಳಿ ನಾರಾಯಣ ಭೂ ಸುಧಾರಣೆ ಕಾಯ್ದೆ. ಎಪಿಎಂಸಿ ಕಾಯ್ದೆ. ಸೇರಿದಂತೆ ರೈತಾಪಿ ವರ್ಗಕ್ಕೆ ಮಾರಕವಾಗುವ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸಬೇಕು ಅಲ್ಲಿಯವರಿಗೂ ಹೋರಾಟ ಮುಂದುವರಿಯುವುದು ಎಂದರು.