ಸಂದೀಪ್ ಉನ್ನಿಕೃಷ್ಣನ್ ಜನ್ಮ ದಿನಾಚರಣೆ
Team Udayavani, Mar 17, 2020, 3:00 AM IST
ಮೈಸೂರು: ಮೇಜರ್ ಸಂದೀಪ್ ಉನ್ನಿಕೃಷ್ಣನ್ ರವರ 43ನೇ ವರ್ಷದ ಜನ್ಮ ಜಯಂತಿಯನ್ನು ನಗರದ ಯುವಭಾರತ್ ಮತ್ತು ವೀರ ಸಾವರ್ಕರ್ ಯುವ ಬಳಗದ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರವರ ಭಾವಚಿತ್ರಗಳನ್ನು ಹಿಡಿದು ಮೇಣದ ಬತ್ತಿ ಬೆಳಗುವ ಮೂಲಕ ಆಚರಿಸಲಾಯಿತು.
ಮೇಜರ್ ಸಂದೀಪ್, ಭಾರತ ಮಾತೆಗೆ ಜಯಘೋಷ ಮೊಳಗಿಸಿ,ಅಮರ್ ರಹೇ ಅಮರ್ ರಹೇ ಸಂದೀಪ್ ಉನ್ನಿ ಕೃಷ್ಣನ್ ಅಮರ್ ರಹೇ…. ಭಾರತ್ ಮಾತೆಯ ಸುಪುತ್ರ ಉನ್ನಿ ಕೃಷ್ಣನ್ ಅಮರ್ ರಹೇ ಎಂಬ ಘೋಷಣೆ ಯನ್ನು ನೂರಾರು ಯುವ ದೇಶ ಪ್ರೇಮಿಗಳು ಕೂಗಿದರು.
ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಮಾತನಾಡಿ, ನಗರದ ವೃತ್ತವೊಂದಕ್ಕೆ ಈಗಾಗಲೇ ಸಂದೀಪ್ ಉನ್ನಿಕೃಷ್ಣನ್ ಅವರ ಹೆಸರನ್ನಿಟ್ಟು ಶಾಶ್ವತವಾಗಿ ಜನ ಅವರನ್ನು ನೆನೆಯುವಂತೆ ಮಾಡಲಾಗಿದೆ ಎಂದರು. ಬಿಜೆಪಿ ಮುಖಂಡ ಬಿ.ಎಂ.ರಘು ಮಾತನಾಡಿದರು.
ಯುವ ಭಾರತ್ ಸಂಘಟನೆಯ ಜೋಗಿ ಮಂಜು, ಯುವ ಮುಖಂಡರಾದ ವಿಕ್ರಮ್ ಐಯ್ಯಂಗಾರ್, ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಭಟ್, ಅಜಯ್, ಚಾಮರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸಚಿನ್, ನರಸಿಂಹರಾಜದ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್, ಅಪೂರ್ವ ಸುರೇಶ್, ಗುರುರಾಜ್ ಶೆಟ್ಟಿ, ಕೃಷ್ಣರಾಜ ಬ್ಯಾಂಕ್ ಉಪಾಧ್ಯಕ್ಷ ಬಸಪ್ಪ, ಸುಚೀಂದ್ರ, ಸ್ಮಾರ್ಟ್ ಮಂಜು, ಚಕ್ರಪಾಣಿ, ಅರುಣ್, ಸಂತೋಷ ಇತರರಿದ್ದರು.