ಬುದ್ಧ, ಬಸವ, ಅಶೋಕ ಮತಾಂಧರೇ?


Team Udayavani, Nov 12, 2017, 4:51 PM IST

mys.jpg

ಮೈಸೂರು: ಜನರನ್ನು ಇಸ್ಲಾಂ ಧರ್ಮಕ್ಕೆ ಕರೆತಂದ ಟಿಪ್ಪು ಮತಾಂಧನಾದರೆ, ಬುದ್ಧ, ಬಸವ, ಅಶೋಕ ತಮ್ಮ ಧರ್ಮಕ್ಕೆ ಅನೇಕ ಮಂದಿಯನ್ನು ಕರೆತಂದಿದ್ದು ಅವರು ಮತಾಂಧರೇ ಎಂದು ಇತಿಹಾಸ ತಜ್ಞ ಪ್ರೋ.ನಂಜರಾಜ ಅರಸ್‌ ಪ್ರಶ್ನಿಸಿದರು. ಮೈಸೂರಿನ ಕರ್ನಾಟಕ ದಲಿತ ವೆಲ್‌ಫೇರ್‌ ಟ್ರಸ್ಟ್‌, ರೆಸ್ಪಾನ್ಸಿಬಲ್‌ ಸಿಟಿಜನ್‌ ಫೋರಂ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಟಿಪ್ಪು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

 ಜನರನ್ನು ಅವರಿಗೆ ಅನುಕೂಲವಾಗುವ ಧರ್ಮಕ್ಕೆ ಪರಿವರ್ತಿಸುವುದು ನಿಜವಾದ ರಾಜಧರ್ಮ. ಈ ನಿಟ್ಟಿನಲ್ಲಿ ಅಶೋಕ, ಬುದ್ಧ, ಬಸವರಂತೆ ಟಿಪ್ಪು ಸಹ ಅನೇಕ ಮಂದಿಯನ್ನು ಇಸ್ಲಾಂ ಧರ್ಮಕ್ಕೆ ಕರೆ ತಂದಿದ್ದಾನೆ. ಆದರೆ, ಟಿಪ್ಪು$ ಎಂದಿಗೂ ತನ್ನ ರಾಜ್ಯದ ಹಿಂದೂಗಳ ಮತ ಪರಿವರ್ತಿಸಿಲ್ಲ. ಬದಲಿಗೆ ನೆರೆಯ ರಾಜ್ಯದಲ್ಲಿ ರಾಜಾಳ್ವಿಕೆಯಲ್ಲಿದ್ದ ಜನರನ್ನು ಮತಾಂತರಗೊಳಿಸಲು ಮುಂದಾದನೇ ಹೊರತು, ಆತ ಎಂದಿಗೂ ಯಾರನ್ನೂ ಇಸ್ಲಾಂ ಧರ್ಮಕ್ಕೆ ಬರುವಂತೆ ಹೇಳಿಲ್ಲ ಎಂದು ಹೇಳಿದರು.

ಟಿಪ್ಪುವನ್ನು ವಿರೋಧಿಸುವ ಬಿಜೆಪಿ ಅವರು ಈ ಹಿಂದೆ ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ, ಪೊ›.ಶೇಕ್‌ಆಲಿ ಅವರು ಟಿಪ್ಪು ಕುರಿತ ಪುಸ್ತಕ ಬರೆದಾಗ ಅಂದು ಮುಖ್ಯಮಂತ್ರಿಯಾಗಿದ್ದ ಜಗದೀಶ್‌ ಶೆಟ್ಟರ್‌ ಅದಕ್ಕೆ ಮುನ್ನುಡಿ ಬರೆಯುತ್ತಾರೆ. 

ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾದ ಬಳಿಕವೂ ಅದೇ ಮುನ್ನುಡಿ ಯಲ್ಲಿ ಪುಸ್ತಕ ಲೋಕಾರ್ಪಣೆಯಾಗುತ್ತದೆ. ಇದರ ಪರಿವಿಲ್ಲದ ಜಗದೀಶ್‌ ಶೆಟ್ಟರ್‌ ಇಂದು ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಹೀಗೆ ಅಧಿಕಾರದಲ್ಲಿದ್ದಾಗ ಟಿಪ್ಪುವನ್ನು ಹೊಗಳುವ, ನಂತರ ಟೀಕಿಸುವ ಪ್ರವೃತ್ತಿ ಬಿಜೆಪಿಯಲ್ಲಿದೆ ಎಂದು ದೂರಿದರು.

ಬಿಜೆಪಿಯವರು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದು, ವಾಜಪೇಯಿ ಅವರೇ ಎಂದು ಒಪ್ಪಿಕೊಳ್ಳಲಿ. ಆ ನಂತರ ಟಿಪ್ಪುವಿನ ಆಡಳಿತಾ ವಧಿಯಲ್ಲಿ ನಡೆದ ಅನಾಹುತಗಳಿಗೆ ಟಿಪ್ಪುವನ್ನು ಹೊಣೆ ಮಾಡಲಿ ಎಂದು ತಿಳಿಸಿದರು.

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪೊ›.ಮಹೇಶ್‌ ಚಂದ್ರಗುರು, ಭಾರತಾಂಭೆ ಮಾನವನ್ನು ಕಾಪಾಡಲು ಪ್ರಾಣವನ್ನೇ ಒತ್ತೆಯಾಗಿಟ್ಟ ಟಿಪ್ಪು ಸುಲ್ತಾನ್‌ ಎಂದಿಗೂ ಮತಾಂಧನಾಗುವುದಿಲ್ಲ. ಬದಲಿಗೆ ಪರಕೀಯರಿಗೆ ದೇಶವನ್ನು ಲೂಟಿ ಮಾಡಲು ಅವಕಾಶ ನೀಡಿದ ವೈದಿಕರು ನಿಜವಾದ ಮತಾಂಧರು ಎಂದು ಕುಟುಕಿದರು.

ಮಹಮ್ಮದ್‌ ಖೀಲ್ಜಿ ಸೇರಿದಂತೆ ಅನೇಕ ಪರಕೀಯರು ಹಲವು ಬಾರಿ ನಮ್ಮ ದೇಶದ ದೇವಾಲಯಗಳನ್ನು ನಾಶಪಡಿಸಿದರು. ಆದರೆ ಟಿಪ್ಪು ಸುಲ್ತಾನ್‌ ಶೃಂಗೇರಿ ದೇವಸ್ಥಾನವನ್ನು ರಕ್ಷಿಸಿದ. ಸಮಾಜದಲ್ಲಿ ಬ್ರಾಹ್ಮಣಿಕೆ ನೆಪದಲ್ಲಿದ್ದ ಅಸ್ಪೃಶ್ಯತೆ ಹೋಗಲಾಡಿಸಿ ಮುಕ್ತಿಗೆ ಮುಂದಾದ ಟಿಪ್ಪು ಸಾಮಾಜಿಕ ಹರಿಕಾರ ಎಂದು ಬಣ್ಣಿಸಿದರು. 

ವಿಚಾರವಾದಿ ಪ್ರೊ. ಕೆ.ಎಸ್‌. ಭಗವಾನ್‌, ಮನುಸ್ಮತಿಯಲ್ಲಿ ಶೂದ್ರರೂ ಬ್ರಾಹ್ಮಣರ ಗುಲಾಮರು ಎಂದು ನಮೂದಿಸಿದ್ದಾರೆ. ಅಲ್ಲದೆ ಬ್ರಾಹ್ಮರ ಮಹಿಳೆಯರನ್ನು ಹೊರತುಪಡಿಸಿ, ಉಳಿದವರೆಲ್ಲಾ ಉಪ ಪತ್ನಿಯರು ಎಂದು ನಮೂದಿಸಿದ್ದಾರೆ. ಇಂತಹ ಮನುಸ್ಮತಿಯಿಂದ ನಾವು ಹಿಂದೂತ್ವವನ್ನು ಅರಿಯುತ್ತಿದ್ದು, ಈ ಬಗ್ಗೆ ಈಗಲಾದರೂ ಸಾಮಾಜಿಕ ಕ್ರಾಂತಿಗೆ ಮುಂದಾಗಬೇಕಿದೆ ಎಂದು ಹೇಳಿದರು.

 ಟಿಪ್ಪುವಿನ ಆಸ್ಥಾನದಲ್ಲಿ 13 ಮಂದಿ ಬ್ರಾಹ್ಮರಿದ್ದು, ಎಂದಿಗೂ ಆತ ಹಿಂದೂ ವಿರೋಧಿ ಎಂದು ಹೇಳಿಲ್ಲ. ಅಲ್ಲದೆ ಆತನ ಆಳ್ವಿಕೆಯ ಯಾರೊಬ್ಬರೂ ಆತನನ್ನು ಮತಾಂಧ ಎಂದು ದೂಷಿಸಿರಲಿಲ್ಲ. ಕೆಲವು ಮನುವಾದಿಗಳ ಗುಂಪಿನಿಂದ ಇಂತಹ ಅಪಪ್ರಚಾರ ನಡೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ರಾಷ್ಟ್ರವಾದಿಯಾಗಿ ಟಿಪ್ಪು, ಅಭಿವೃದ್ಧಿ ಶಿಲ್ಪಿಯಾಗಿ ಟಿಪ್ಪು, ಸಮಾನತೆ ಮುತ್ಸದ್ಧಿಯಾಗಿ ಟಿಪ್ಪು, ಸಾಮಾಜಿಕ ನ್ಯಾಯದ ಹರಿಕಾರನಾಗಿ ಟಿಪ್ಪು ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿಗಳು ನಡೆದವು.

 ಪ್ರೋ.ಶಬ್ಬೀರ್‌ ಮಸ್ತಾಫ‌, ಅಲಲ್ಹಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮೌಲಾನಾ ಅಯ್ಯೂಬ್‌ ಅನ್ಸಾರಿ, ದಲಿತ ವೆಲ್‌ಫೇರ್‌ ಟ್ರಸ್ಟ್‌ ಅಧ್ಯಕ್ಷ ಕಾಂತರಾಜು, ಉದ್ಯಮಿ ಎಂ.ಎಫ್.ಕಲೀಂ, ರೇವಣ್ಣ, ಮಹದೇವಮೂರ್ತಿ ಮತ್ತಿತರರಿದ್ದರು.

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.