ಚಿತ್ರರಂಗ ಮಾತ್ರವಲ್ಲ ಎಲ್ಲಾ ಕಡೆ ಗಾಂಜಾ ಸಿಗುತ್ತಿದೆ: ಸಂಸದ ಪ್ರತಾಪ್ ಸಿಂಹ
Team Udayavani, Sep 2, 2020, 4:32 PM IST
ಮೈಸೂರು: ಡ್ರಗ್ಸ್ ದಂಧೆಯು ಭಯೋತ್ಪಾದನೆಯ ಒಂದು ಭಾಗ. ಈ ದಂಧೆಯು ಕೇವಲ ಸ್ಯಾಂಡಲ್ವುಡ್ -ಬಾಲಿವುಡ್ ಗೆ ಅಷ್ಟೇ ಸಿಮಿತವಾಗಿಲ್ಲ. ಎಲ್ಲಾ ಕಡೆ ಡ್ರಗ್ಸ್ ಹಾಗೂ ಗಾಂಜಾ ಸಿಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಘಟನೆಯನ್ನ ಪಾಠವಾಗಿ ಭಾವಿಸಿ ಡ್ರಗ್ಸ್ ನಿರ್ನಾಮ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಒಂದು ದೇಶವನ್ನು ಹಾಳು ಮಾಡಬೇಕಾದರೆ ಬಾಂಬ್ ಹಾಕಬೇಕಿಲ್ಲ. ಆ ದೇಶದ ಯುವಕರನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿದರೆ ಸಾಕು. ಅವರ ಮುಂದಿನ ಇಡೀ ಕುಟುಂಬವನ್ನು ಸರ್ವನಾಶವಾಗಿಸಿ ಬಿಡುತ್ತದೆ ಎಂದರು.
ಇದನ್ನೂ ಓದಿ: ಡ್ರಗ್ ಮಾಫಿಯಾದಲ್ಲಿ ಪೊಲೀಸರು ಮತ್ತು ರಾಜಕಾರಣಿಗಳು ಇದ್ದಾರೆ: ಪ್ರಮೋದ್ ಮುತಾಲಿಕ್
ಸದ್ಯದ ಪ್ರಕರಣದಲ್ಲಿ ಯಾವ ದೇಶದ ಯಾವ ಪ್ಲೇಡ್ಲರ್ ಇದ್ದಾರೆ. ಅವರೆಲ್ಲರನ್ನು ಬಂಧಿಸಬೇಕು. ಎಲ್ಲಾ ಕಡೆ ದಾಳಿಯಾಗಲಿ. ಗೃಹ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಶಿಘ್ರದಲ್ಲೆ ಇಡೀ ಪ್ರಕರಣದ ಬಗ್ಗೆ ತನಿಖೆಯಾಗಿ ಸತ್ಯ ಹೊರಬರಲಿ ಎಂದು ಪ್ರತಾಪ್ ಸಿಂಹ ಹೇಳಿದರು.