ಇಂದಿನಿಂದ ರಂಗಾಯಣದಲ್ಲಿ ಚಿಣ್ಣರ ನಾಟಕೋತ್ಸವ


Team Udayavani, May 5, 2018, 12:31 PM IST

m6-indininda.jpg

ಮೈಸೂರು: ರಂಗಾಯಣದ ಜನಪ್ರಿಯ ಕಾರ್ಯಕ್ರಮ, ಚಿಣ್ಣರಮೇಳ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮೇ 5ರಿಂದ 9 ರವರೆಗೆ ಚಿಣ್ಣರ ನಾಟಕೋತ್ಸವ ಏರ್ಪಡಿಸಲಾಗಿದ್ದು, ಪ್ರತಿ ದಿನ ಸಂಜೆ 7 ಗಂಟೆಗೆ ರಂಗಾಯಣದ ವನರಂಗದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ರಂಗಾಯಣ ನಿರ್ದೇಶಕ‌ ಭಾಗೀರಥಿ ಬಾಯಿ ಕದಂ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಎಸ್‌. ಕಾರ್ತೀಕ್‌ ನಿರ್ದೇಶನದಲ್ಲಿ ಅರಳಿ ಮರ ತಂಡ ಹುಲಿಯಜ್ಜ ನಾಟಕ ಪ್ರದರ್ಶಿಸಲಿದೆ. ಮಧು ಗರಿಕೆ ನಿರ್ದೇಶನದಲ್ಲಿ ಹಾಡಿ ತಂಡ ಅಜ್ಜಿ ಹೇಳಿದ ಕಥೆ, ರಿಯಾಜ್‌ ಸಿಹಿಮೊಗೆ ನಿರ್ದೇಶನದಲ್ಲಿ ತೇಗದಮರ ತಂಡ ಮೌನದ ಮಾತು ನಾಟಕ ಪ್ರದರ್ಶಿಸಲಿದೆ.

6ರಂದು ವಿ.ರಂಗನಾಥ್‌ ನಿರ್ದೇಶನದಲ್ಲಿ ಮಾವಿನ ಮರ ತಂಡ ಕೆರೆಯಲಿ ಚಿನ್ನ ಕೆರೆಯೇ ಚಿನ್ನ, ಶ್ರೀಕಾಂತ್‌ ನಿರ್ದೇಶನದಲ್ಲಿ ಗಾವಡಗೆರೆ ತಂಡ-1 ನೆಲೆ ಕಾಣದ ಜೀವ ನಾಟಕ ಪ್ರದರ್ಶಿಸಲಿದೆ. 7ರಂದು ನೂರ್‌ ಅಹಮದ್‌ ಶೇಖ್‌ ನಿರ್ದೇಶನದಲ್ಲಿ ಹಿಪ್ಪೆಮರ ತಂಡ ಮ್ಯಾನ್‌ ವರ್ಸಸ್‌ ಮ್ಯಾನ್‌, ಶರತ್‌ ಬೋಪಣ್ಣ ನಿರ್ದೇಶನದಲ್ಲಿ ನೇರಳೆ ಮರ ತಂಡ ರಕ್ಷಿಸುವ ಹೊಣೆಗಾರಿಕೆ ನೀವೆ ಹೇಳಿ ಯಾರದು?, ಮತ್ತಿಮರ ತಂಡದ ಮಕ್ಕಳು ಎ.ಎಸ್‌.ಶೃತಿ ನಿರ್ದೇಶನದಲ್ಲಿ ಶಿಸ್ತಿನ ಪ್ರಾಣಿಗಳು ನಾಟಕ ಪ್ರದರ್ಶಿಸಲಿದ್ದಾರೆ.

8ರಂದು ಗಿರಿಜಾ ಅರುಣ್‌ ನಿರ್ದೇಶನದಲ್ಲಿ ಮತ್ತಿಮರ ತಂಡದ ಮಕ್ಕಳು ಕಾಡಿನ ಕುಡಿಗಳು, ಪಿ.ರಾಕೇಶ್‌ ನಿರ್ದೇಶನದಲ್ಲಿ ಗಾವಡಗೆರೆ ತಂಡ-2 ಹಟ್ಟಿಪದ, ದಿಬೋಸ್‌ ಜ್ಯೋತಿ ನಿರ್ದೇಶನದಲ್ಲಿ ಹೊನ್ನೆಮರ ತಂಡ ದನದ ಕೊಟ್ಟಿಗೆಯ ದೂರದರ್ಶನ ಹಾಗೂ ಲೈಟ್‌ ಸೌಂಡ್‌ ಕ್ಯಾಮರಾ ಆಕ್ಷನ್‌ ನಾಟಕ ಪ್ರದರ್ಶಿಸಲಿದ್ದಾರೆ.

9ರಂದು ಬಿ.ಬಿ.ಅಶ್ವಿ‌ನಿ ನಿರ್ದೇಶನದಲ್ಲಿ ಜಾಲಿಮರ ತಂಡ ಚುಕ್ಕಿಗಳೆಷ್ಟು?, ಗಂಧದ ಮರ ತಂಡ ಪ್ರವೀಣ್‌ ಬೆಳ್ಳಿ ನಿರ್ದೇಶನದಲ್ಲಿ ಗ್ರಂಥಾಯಣ ಹಾಗೂ ಬೇವಿನ ಮರ ತಂಡ ವಿನೋದ ರಂಗ ನಿರ್ದೇಶನದಲ್ಲಿ ಸೃಷ್ಟಿ ನಾಟಕ ಪ್ರದರ್ಶನ ನೀಡಲಿದ್ದಾರೆ.

ರಂಗಾಯಣದಲ್ಲಲ್ಲದೆ ಗಾವಡಗೆರೆಯಲ್ಲೂ ನಾಟಕ ಪ್ರದರ್ಶನವಿದ್ದು, ಮೇ 9ರಂದು ಗಾವಡಗೆರೆ ತಂಡ-1 ಮಕ್ಕಳು ಶ್ರೀಕಾಂತ್‌ ನಿರ್ದೇಶನದ ನೆಲೆ ಕಾಣದ ಜೀವ ಹಾಗೂ ತಂಡ-2 ಮಕ್ಕಳು ರಾಕೇಶ್‌ ಪಿ.ಯಾದವ್‌ ನಿರ್ದೇಶನದ ಹಟ್ಟಿಪದ ನಾಟಕ ಪ್ರದರ್ಶಿಸಲಿದ್ದಾರೆ. ಮೇ 10ರಂದು ರಂಗಾಯಣದಲ್ಲಿ ಚಿಣ್ಣರ ಸಂತೆ, ಮಧ್ಯಾಹ್ನ ಓಕುಳಿಯಾಟ ನಡೆಯಲಿದೆ ಎಂದರು.

ರಂಗಾಯಣ ಜಂಟಿ ನಿರ್ದೇಶಕ ವಿ.ಮಲ್ಲಿಕಾರ್ಜುನ ಸ್ವಾಮಿ, ಚಿಣ್ಣರ ಮೇಳದ ನಿರ್ದೇಶಕ ಎಂ.ಸಿ.ಕೃಷ್ಣಪ್ರಸಾದ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಬಾಕ್ಸ್‌ ಚಿಣ್ಣರಿಗೆ ಕೈತುತ್ತು: ಸಾವಿರಾರು ಅನಾಥ ಮಕ್ಕಳಿಗೆ ಆಸರೆ ನೀಡಿ ಮಹಾ ತಾಯಿ ಎನಿಸಿರುವ ಸಿಂಧೂತಾಯಿ ಸಪಲ್‌ ಅವರು ಶನಿವಾರ ಸಂಜೆ 6ಗಂಟೆಗೆ ಚಿಣ್ಣರ ನಾಟಕೋತ್ಸವ ಉದ್ಘಾಟಿಸಲಿದ್ದಾರೆ. ಬೆಳಗ್ಗೆ ಚಿಣ್ಣರೊಂದಿಗೆ ಸಿಂಧೂತಾಯಿ ಮುಖಾಮುಖೀ ಸಂವಾದ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 12.30ಕ್ಕೆ ಚಿಣ್ಣರ ಮೇಳದಲ್ಲಿರುವ ಎಲ್ಲಾ ಮಕ್ಕಳ ತಾಯಂದಿರುವ ಸಿಂಧೂತಾಯಿ ಅವರೊಂದಿಗೆ ಸೇರಿ ಮೇಳದಲ್ಲಿರುವ ಎಲ್ಲಾ ಮಕ್ಕಳಿಗೆ ತಾವು ತಯಾರಿಸಿ ತಂದ ಊಟ, ತಿನಿಸುಗಳ ಕೈ ತುತ್ತು ನೀಡಲಿದ್ದಾರೆ ಎಂದು ತಿಳಿಸಿದರು.

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.