2023ರೊಳಗೆ ಪ್ರತಿ ಮನೆಗೂ ನಲ್ಲಿ ಸಂಪರ್ಕ
Team Udayavani, Jan 31, 2021, 5:50 PM IST
ಹುಣಸೂರು: ತಾಲೂಕಿನ ಗುರುಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಜಿ ಗುರುಪುರದಲ್ಲಿ ಭಗೀರಥ ಸಂಸ್ಥೆಯ ಸಹಯೋಗದೊಂದಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿವ ನೀರು ಹಾಗೂ ನೈರ್ಮಲ್ಯ ಕುರಿತು ಜಾಗೃತಿ ಜಾಥಾ ನಡೆಸಲಾಯಿತು.
ಈ ವೇಳೆ ಮಾತನಾಡಿದ ಭಗೀರಥ ಸಂಸ್ಥೆಯ ಚೇತನ್ ಆರ್. ಹೊನ್ನಡಿಕೆ, ಈ ಯೋಜನೆಯಡಿ ಗುರುಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ 2023ರೊಳಗೆ ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದರು.
ಇದನ್ನೂ ಓದಿ:ಪೌರಕಾರ್ಮಿಕರಿಗೆ ಊಟ ಬಡಿಸಿದ ಸದಸ್ಯರು
ಭಗೀರಥ ಸಂಸ್ಥೆಯ ಸೋಮುನಾಯ್ಕ, ಪಂಚಾಯ್ತಿ ಕಾರ್ಯದರ್ಶಿ ಚೆಲುವರಾಜು, ಕರವಸೂಲಿಗಾರ ಮಣಿ, ನಿರುಗಂಟಿ ಅಮೀರ್ಅಹಮದ್ ಖಾನ್, ಅಂಗನವಾಡಿಕಾರ್ಯಕರ್ತೆ ವನಿತಾ, ಶ್ರೀಮಾರುತಿ ಸ್ವಸಹಾಯ ಸಂಘದ ಪ್ರತಿನಿಧಿಗಳಾದ ಯಶೋಧಾ, ಮಂಜುಳಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.