ವಿಶೇಷ ಚೇತನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ
Team Udayavani, Jul 24, 2019, 3:00 AM IST
ಮೈಸೂರು: ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀ ದತ್ತ ವಿಜಯಾನಂದ ಅವರ ಚಾತುರ್ಮಾಸದ ಪ್ರಯುಕ್ತ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳ ನೃತ್ಯ, ಗಾಯನ ಮತ್ತು ಯೋಗ ಮನ ಸೊರೆಗೊಂಡವು.
ರಂಗರಾವ್ ಮೆಮೋರಿಯಲ್ ಸರ್ಕಾರಿ ಪಾಠಶಾಲೆ, ಕಿವುಡ ಮತ್ತು ಮೂಗರ ಸರ್ಕಾರಿ ಪಾಠಶಾಲೆ, ಸಾಯಿರಂಗ ರೆಸಿಡೆನ್ಶಿಯಲ್ ಕಿವುಡರ ವಿದ್ಯಾ ಸಂಸ್ಥೆ, ಪುಟ್ಟಿರಮ್ಮ ರೆಸೆಡೆಶ್ಶಿಯಲ್ ಕಿವುಡ ಹೆಣ್ಣು ಮಕ್ಕಳ ಪಾಠಶಾಲೆ, ರೋಟರಿ ವೆಸ್ಟ್ ಮತ್ತು ಪೆರೆಂಟ್ಸ್ ಅಸೋಸಿಯೇಷನ್ ಕಿವುಡ ಮಕ್ಕಳ ಟ್ರಸ್ಟ್ನ ಸೇರಿದಂತೆ ನಗರದ ನಾನಾ ಶಾಲೆಯ ವಿಶೇಷ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಕಾರ್ತ್ಯವೀರ್ಯಾರ್ಜುನ ನೃತ್ಯ ರೂಪಕ, ಭಜನೆ, ಗುರು ಮಹಿಮೆ ಗೀತ ಗಾಯನ, ಶ್ರೀಕೃಷ್ಣ ರಾಧಾ ನೃತ್ಯ, ದಶವಾತರ ನೃತ್ಯ, ರಾಮಾಯಣದ ನೃತ್ಯ ರೂಪಕ, ಗಣೇಶ ಗೀತೆ ಗಾಯನ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆಚ್ಚುಗಗೆ ಪಾತ್ರವಾದವು.
ಇದೇ ವೇಳೆ ಮಕ್ಕಳಿಗೆ ಆಶ್ರಮದ ವಿಶ್ವಂ ಮೂಸಿಯಂ, ಸುಖವನದ ಪಕ್ಷಿಗಳ ಪರಿಚಯ ಮಾಡಲಾಯಿತು. 527 ಮಕ್ಕಳಿಗೆ ನೃತ್ಯ, ಸಂಗೀತ, ಯೋಗಾಸನ ಹೇಳಿಕೊಡಲಾಯಿತು. ವಿಜಯಾನಂದ ದತ್ತ ತೀರ್ಥ ಸ್ವಾಮೀಜಿ ಅವರು ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸಿ ಆಶೀರ್ವಚನ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ