ಚಿರತೆ ದಾಳಿಗೆ ಜಿಂಕೆ ಬಲಿ
Team Udayavani, Feb 1, 2021, 11:11 AM IST
ನಂಜನಗೂಡು: ತಾಲೂಕಿನ ಕೊಣ ನೂರು ಬಳಿ ಚಿರತೆ ದಾಳಿಗೆ ಜಿಂಕೆ ಬಲಿಯಾಗಿದೆ. ಕೊಣನೂರು ಸುತ್ತ ಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು ಕೃಷಿಕರ ಸಾಕು ಪ್ರಾಣಿಗಳಾದ ಹಸು, ಕುರಿ, ನಾಯಿ ಕೋಳಿಗಳು ಒಂದೊಂದಾಗಿ ಚಿರತೆಗಳ ಪಾಲಾಗುತ್ತಿವೆ.
ಚಿರತೆ ಹಾವಳಿ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿ ದ್ದರು. ಗ್ರಾಮದ ಸುತ್ತ ಚಿರತೆ ಹಾವಳಿ ಹೆಚ್ಚಾಗಿದ್ದನ್ನು ಅರಿತ ಅರಣ್ಯ ಇಲಾಖೆ ಅಧಿಕಾರಿಗಳು, ಬೋನು ತಂದಿಟ್ಟಿದ್ದರು. ಆದರೆ ಚಾಣಾಕ್ಷ ಚಿರತೆ ಬೋನಿನತ್ತ ಸುಳಿಯದೇ ಅದರಪಕ್ಕದ ನಾಗೇಶ ಎಂಬವರ ಜಮೀನಿಗೆ ಆಗಮಿಸಿ ಅಲ್ಲೇ ಜಿಂಕೆ ಯೊಂದನ್ನು ತಿಂದಿದೆ.
ಇದನ್ನೂ ಓದಿ:ಜನ ಸುಮ್ಮನಿರುವುದರಿಂದಲೇ ದೇಶ ಹಾಳಾಗುತ್ತಿದೆ
ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದು ತಕ್ಷಣ ಚಿರತೆ ಹಾವಳಿ ತಡೆಗಟ್ಟಬೇಕೆಂದು ಅಧಿಕಾರಿ ಗಳನ್ನು ಆಗ್ರಹಿಸಿದ್ದಾರೆ.