ಜಿಂಕೆ ಮಾಂಸ, ಕೊಂಬು ಹಾಗೂ ಜೀವಂತ ಕಾಡುತೂಸು ವಶ : ಆರೋಪಿಗಳು ಪರಾರಿ
Team Udayavani, Jun 18, 2021, 3:22 PM IST
ಹುಣಸೂರು : ನಾಗರಹೊಳೆ ಉದ್ಯಾನವನದಂಚಿನ ಮನೆಯೊಂದರಲ್ಲಿ ಜಿಂಕೆ ಮಾಂಸ, ಕೊಂಬು ಹಾಗೂ ಜೀವಂತ ಕಾಡುತೂಸುಗಳನ್ನು ಅರಣ್ಯ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದರೆ, ಆರೋಪಿಗಳು ಪರಾರಿಯಾಗಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ವನ್ಯಜೀವಿ ವಲಯದಂಚಿನ ಪಿರಿಯಾಪಟ್ಟಣ ತಾಲೂಕಿನ ಲಕ್ಷ್ಮಿಪುರ ಗ್ರಾಮದ ಲೇ.ಕೃಷ್ಣೇಗೌಡರ ಪುತ್ರ ಅನಿಲ್ಕುಮಾರ್, ಮೋಹನ ಅಲಿಯಾಸ್ ಮನುರವರ ಮನೆಯಲ್ಲಿ ಮಾಂಸ ಪತ್ತೆಯಾಗಿದ್ದು. ದಾಳಿಯ ಸುಳಿವರಿತ ಆರೋಪಿಗಳು ಪರಾರಿಯಾಗಿದ್ದಾರೆ.
ಇವರ ಮನೆಯಲ್ಲಿ ಜಿಂಕೆ ಮಾಂಸ ಇರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿ.ಸಿ.ಎಫ್.ಮಹೇಶ್ಕುಮಾರ್ರ ಮಾರ್ಗದರ್ಶನದಲ್ಲಿ ಆರ್.ಎಫ್.ಓ.ಗಳಾದ ಹನುಮಂತರಾಜು, ಅಮೃತೇಶ್, ಹುಲಿ ಸಂರಕ್ಷಣಾ ದಳದವರ ನೇತೃತ್ವದಲ್ಲಿ ಮನೆ ಮೇಲೆ ದಾಳಿ ನಡೆಸಿದ ವೇಳೆ ಪತ್ತೆಯಾದ ೬ ಕೆ.ಜಿ.ಯಷ್ಟು ಮಾಂಸ, ಜಿಂಕೆ ಕೊಂಬು, ಸಜೀವ ಹಾಗೂ ಖಾಲಿ ಕಾಡತೂಸು, ಕತ್ತಿ, ತೂಕದಯಂತ್ರ, ಸ್ಟೀಲ್ ಬಾಕ್ಸ್ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದ್ದು. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಡಿಸಿಎಫ್ ಡಿ.ಮಹೇಶ್ಕುಮಾರ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿ.ಆರ್.ಎಫ್.ಓ.ಎಂ.ಮನೋಹರ್, ಅರಣ್ಯ ರಕ್ಷಕರಾದ ದಿವಾಕರ್,ಸಂಜಯ್ ಕುಮಾರ್ ಹಾಗೂ ವಲಯ-ಎಸ್.ಟಿ.ಪಿ.ಎಫ್ ಹಾಗೂ ಸ್ಪೆಷಲ್ ಸ್ಟ್ರೈಕ್ ಫೋರ್ಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ