ಎರಡು ತಿಂಗಳ ಪಡಿತರ ವಿತರಣೆ
Team Udayavani, Apr 2, 2020, 2:45 PM IST
ಮೈಸೂರು: ಕೋವಿಡ್ 19 ತಡೆಯುವ ನಿಟ್ಟಿನಲ್ಲಿ ಲಾಕ್ಡೌನ್ ಮಾಡಿರುವುದ ರಿಂದ ಎರಡು ತಿಂಗಳ ಪಡಿತರ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜ ಇಲಾಖೆ ತೀರ್ಮಾನಿಸಿದೆ.
ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ಗಳಿಗೆ ಪಡಿತರ ವಿತರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 6,69,300 ಬಿಪಿಎಲ್, 50,194 ಅಂತ್ಯೋದಯ ಹಾಗೂ 88 ಸಾರ ಎಪಿಎಲ್ ಕುಟುಂಬಗಳಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡರಿಂದ ಪಡಿತರ ವಿತರಣೆ ನಡೆಯುತ್ತಿದೆ. ಮೊದಲ ಹಂತದಲ್ಲಿ ರಾಜ್ಯ ಸರ್ಕಾರದಿಂದ ಪಡಿತರ ಹಂಚಿಕೆ ಮಾಡಲಾಗುತ್ತಿದ್ದು, ಈ ಬಾರಿ ಒಟಿಪಿ ವ್ಯವಸ್ಥೆ ಮಾತ್ರ ಇರುತ್ತದೆ.
ಅಂತ್ಯೋದಯ ಕಾರ್ಡ್ಗಳಿಗೆ 2 ತಿಂಗಳಿಗೆ ಒಟ್ಟು 70 ಕೆ.ಜಿ. ಅಕ್ಕಿ ಲಭ್ಯವಾಗಲಿದೆ. ಎಪಿಎಲ್ ಕಾರ್ಡುದಾರರಿಗೆ ತಲ 5 ಕೆ.ಜಿ. ಹೆಚ್ಚಿದ್ದರೆ ಪ್ರತಿ ಕಾರ್ಡ್ಗೆ 15 ರೂ. ನಂತೆ 10 ಕೆ.ಜಿ. ಅಕ್ಕಿ, ಬಿಪಿಎಲ್ ಕಾರ್ಡ್ದಾರರಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ಕಾರ್ಡ್ ಒಂದಕ್ಕೆ 4 ಕೆ.ಜಿ. ಗೋಧಿ ವಿತರಿಸಲಾಗುತ್ತದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಇಂದಿನಿಂದಲೇ ಅಕ್ಕಿ, ಗೋಧಿ ವಿತರಣೆ ಆರಂಭವಾಗಲಿದ್ದು, ರಾಜ್ಯ ಸರ್ಕಾರ ಪ್ರತಿ ಯೂನಿಟ್ಗೆ 5 ಕೆ.ಜಿ. ವಿತರಿಸುತ್ತಿದ್ದು, ಈಗ ಪ್ರತಿ ಯೂನಿಟ್ಗೆ 10 ಕೆ.ಜಿ. ವಿತರಿಸಲಾಗುವುದು. ಉದಾಹರಣೆಗೆ ಮನೆಯಲ್ಲಿ 4 ಮಂದಿ ಇದ್ದರೆ 40 ಕೆ.ಜಿ. ಅಕ್ಕಿ ಸಿಗುತ್ತದೆ. ಜತೆಗೆ ಪ್ರತಿ ಯೂನಿಟ್ಗೆ 2 ಕೆ.ಜಿ. ಗೋಧಿ ಲಭ್ಯ. ಪ್ರತಿ ತಿಂಗಳಿಗೆ 1.32 ಲಕ್ಷ ಕ್ವಿಂಟಲ್ ವಿತರಣೆ ಆಗುತ್ತಿತ್ತು.ಈಗ ನಮ್ಮಲ್ಲಿ 4.64 ಲಕ್ಷ ಕ್ವಿಂಟಲ್ ಅಕ್ಕಿ ದಾಸ್ತಾನು ಇದೆ ಎಂದು ಇಲಾಖೆ ಉಪ ನಿರ್ದೇಶಕ ಪಿ. ಶಿವಣ್ಣ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ