ಎಲ್‌ಇಡಿಯ ಬೆಳ್ಳಿ ಬೆಳಕು ಬೇಡ, ಸ್ವರ್ಣ ಬೆಳಕಿಗಾಗಿ ಹುಡುಕಾಟ!


Team Udayavani, Sep 24, 2017, 6:00 AM IST

Ban24091703Medn.jpg

ಮೈಸೂರು: ಕಣ್ಣಿಗೆ ಆನಂದ ನೀಡುವ ಮೈಸೂರು ಅರಮನೆಯ ಜಗಮಗ ದೀಪಗಳಿಗೆ ಈಗ ಬದಲಾವಣೆಯ ಸಮಯ. ಕರೆಂಟ್‌ ಉಳಿತಾಯಕ್ಕಾಗಿ ದೇಶಾದ್ಯಂತ ಎಲ್‌ಇಡಿ ಬಲ್ಬ್ಗಳಿಗೆ ಮೊರೆ ಹೋಗಿರುವುದರಿಂದ ಮೈಸೂರಿನಲ್ಲೂ ಇವೇ ದೀಪಗಳನ್ನು ಬೆಳಗಿಸುವ ಬಗ್ಗೆ ಪ್ರಯೋಗಾತ್ಮಕವಾಗಿ ಪರೀಕ್ಷೆ ನಡೆಸಿ, ಕಡೆಗೆ ಕೈಬಿಡಲಾಗಿದೆ.

ಸದ್ಯ ಅರಮನೆಯ ಈ ದೀಪಾಲಂಕಾರಕ್ಕೆ 75 ವರ್ಷಗಳ ಸಂಭ್ರಮ. ಈ ಹೊತ್ತಲ್ಲೇ ಸದ್ಯ ಇರುವ ಇನ್‌ಕ್ಯಾಂಡಿಸೆಂಟ್‌ ಬಲ್ಬ್ಗಳನ್ನು ಬದಲಿಸಿ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲು ಮುಂದಾಗಿದೆ. ಆದರೆ ಮೂರು ವರ್ಷಗಳ ಹಿಂದೆ ಬದಲಿಸಲು ಹೋಗಿ, ಬೆಳ್ಳಿವರ್ಣದ ಆತಂಕದಿಂದ ಸುಮ್ಮನಾಗಿತ್ತು.

ಎಲ್‌ಇಡಿ ಬಲ್ಬ್ ಸಿಕ್ತಿಲ್ಲ: ಈಗಿರುವ ಇನ್‌ಕ್ಯಾಂಡಿಸೆಂಟ್‌ ಬಲ್ಬ್ಗಳನ್ನು ತೆಗೆದು ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಿದರೆ, ಸ್ವರ್ಣವರ್ಣದಿಂದ ಜಗಮಗಿಸುವ ಅರಮನೆ, ಸಿಲ್ವರ್‌ ಬಣ್ಣಕ್ಕೆ ತಿರುಗುತ್ತದೆ ಎಂಬ ಕಾರಣಕ್ಕೆ ಆ ಪ್ರಸ್ತಾವನೆ ಕೈಬಿಡಲಾಗಿದೆ. ಸದ್ಯ ಸ್ವರ್ಣವರ್ಣದ ಎಲ್‌ಇಡಿ ಬಲ್ಬ್ ತಯಾರಿಸುವ ಕಂಪನಿಗಳನ್ನು ಹುಡುಕಲಾಗುತ್ತಿದೆ. ಅರಮನೆ ಮಂಡಳಿ ಈಗಾಗಲೇ ಎಲ್‌ಇಡಿ ಬಲ್ಬ್ ತಯಾರಿಸುವ ಹಲವಾರು ಪ್ರತಿಷ್ಠಿತ ಕಂಪನಿಗಳನ್ನು ಸಂಪರ್ಕಿಸಿದ್ದು, ಗೋಲ್ಡನ್‌ ಶೇಡ್‌ನ‌ ಎಲ್‌ಇಡಿ ಬಲ್ಬ್ ಸಿಕ್ಕರೆ ಭವಿಷ್ಯದಲ್ಲಿ ಇನ್‌ಕ್ಯಾಂಡಿಸೆಂಟ್‌ ಬಲ್ಬ್ಗೆ ಬದಲಾಗಿ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗುತ್ತದೆ.

ಆಗ ಏನಾಗಿತ್ತು?: ಮೂರು ವರ್ಷಗಳ ಹಿಂದೆ ಇನ್‌ಕ್ಯಾಂಡಿಸೆಂಟ್‌ಬಲ್ಬ್ಗಳನ್ನು ಎಲ್‌ಇಡಿ ಬಲ್ಬ್ಗೆ ಪರಿವರ್ತಿಸುವ ತೀರ್ಮಾನ ಕೈಗೊಂಡಾಗ ಫಿಲಿಪ್ಸ್‌ ಕಂಪನಿ ಮುಂದೆ ಬಂದಿತ್ತು. ಇದು ಪ್ರಾಯೋಗಿಕವಾಗಿ ಅರಮನೆ ಆವರಣದಲ್ಲಿನ ಶ್ರೀಭುವನೇಶ್ವರಿ ದೇವಾಲಯದಲ್ಲಿ ಎರಡು ಸಾಲು ಬಲ್ಬ್ ತೆಗೆದು ಎಲ್‌ಇಡಿ ಬಲ್ಬ್ಗಳನ್ನು ಹಾಕಿತು. ಆದರೆ, ಈ ಬಲ್ಬ್ಗಳಿಂದ ಬಂದ ಬೆಳಕು ಸ್ವರ್ಣವರ್ಣಕ್ಕೆ ಬದಲಾಗಿ ಬೆಳ್ಳಿವರ್ಣದಂತೆ ಕಾಣಿಸಿತು. ಹೀಗಾಗಿ ಎಲ್‌ಇಡಿ ಬಲ್ಬ್ಗಳ ಅಳವಡಿಸುವ ಪ್ರಸ್ತಾವನೆ ಕೈಬಿಟ್ಟಿತು.

ದೀಪಾಲಂಕಾರಕ್ಕೆ 75 ವರ್ಷ
ನವರಾತ್ರಿಯ 10 ದಿನ ಮತ್ತು ವರ್ಷದ ಎಲ್ಲ ವಾರಾಂತ್ಯ, ಸರ್ಕಾರಿ ರಜಾ ದಿನಗಳಲ್ಲಿ ರಾತ್ರಿ 7 ರಿಂದ 8ರ ವರೆಗೆ ಜಗಮಗಿಸುವ ಸ್ವರ್ಣವರ್ಣದ ದೀಪಾಲಂಕಾರಕ್ಕೆ ಈಗ 75 ವರ್ಷದ ಸಂಭ್ರಮ. ಸ್ವಾತಂತ್ರ್ಯ ಪೂರ್ವದ 1942ರ ಸುಮಾರಿನಲ್ಲಿ ಮೈಸೂರು ಯದುವಂಶದ ಕೊನೆಯ ರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಅವರ ಕಾಲದಲ್ಲಿ ಮೈಸೂರು ಅರಮನೆಗೆ ವಿದ್ಯುತ್‌ ದೀಪಾಲಂಕಾರ ಮಾಡಿಸಲಾಯಿತು.

ತೇಗದ ಮರದ ಪಟ್ಟಿಗಳ ಮೇಲೆ ವೋಲ್ಡರ್‌ಗಳನ್ನು ಜೋಡಿಸಿ ಅಂದಾಜು ಒಂದು ಲಕ್ಷ ಸ್ಕೂ$› ಟೈಪ್‌ ಇನ್‌ಕ್ಯಾಂಡಿಸೆಂಟ್‌ ಬಲ್ಬ್ಗಳನ್ನು ಅಳವಡಿಸಲಾಗಿದೆ. ಆರಂಭದಲ್ಲಿ 30 ವ್ಯಾಟ್‌ನ ಬಲ್ಬ್ಗಳನ್ನು ಅಳವಡಿಸಲಾಗಿತ್ತು. ನಂತರದ ದಿನಗಳಲ್ಲಿ 20 ವ್ಯಾಟ್‌ನ ಬಲ್ಬ್ಗಳನ್ನು ಅಳವಡಿಸಲಾಯಿತು. ಸದ್ಯ 15 ವ್ಯಾಟ್‌ನ ಬಲ್ಬ್ಗಳನ್ನು ಅಳವಡಿಸಲಾಗಿದೆ.

ಮೈಸೂರು ಅರಮನೆಗೆ ಅನಿಯಮಿತವಾಗಿ ವಿದ್ಯುತ್‌ ಪೂರೈಸಲು 1000 ಕೆ.ವಿಯ 2 ಹಾಗೂ 500 ಕೆ.ವಿಯ 2 ಟ್ರಾನ್ಸ್‌ಫಾರ್ಮರ್‌ಗಳನ್ನು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ ಅರಮನೆ ಆವರಣದಲ್ಲಿ ಸ್ಥಾಪಿಸಿದ್ದು, ಇದರಿಂದ 11 ಕೆ.ವಿ/ 250 ವ್ಯಾಟ್‌ ವಿದ್ಯುತ್‌ ನಿರಂತರವಾಗಿ ಪೂರೈಕೆಯಾಗುತ್ತದೆ. ಅರಮನೆ ದೀಪಾಲಂಕಾರಕ್ಕೆ ವಾರ್ಷಿಕ 6,10,00 ಯೂನಿಟ್‌ ವಿದ್ಯುತ್‌ ಬಳಸಿಕೊಳ್ಳಲಾಗುತ್ತಿದ್ದು. ಇದಕ್ಕಾಗಿ ಮೈಸೂರು ಅರಮನೆ ಮಂಡಳಿ, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಗೆ ವಾರ್ಷಿಕ 77 ಲಕ್ಷ ರೂ. ವಿದ್ಯುತ್‌ ಬಿಲ್‌ ಪಾವತಿಸುತ್ತದೆ.

ನಿರ್ವಹಣೆಗಾಗಿ ಮೂವರು:
ಅರಮನೆಯ ದೀಪಾಲಂಕಾರ ವ್ಯವಸ್ಥೆಯಾಗಿಯೇ ಅರಮನೆಯ ಪವರ್‌ ಹೌಸ್‌ನಲ್ಲಿ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅರಮನೆ ಹಾಗೂ ಗೇಟ್‌ಗಳಿಗೆ ಮೂರು ಪ್ರತ್ಯೇಕ ಸ್ವಿಚ್‌ಗಳಿದ್ದು, ದೀಪಾಲಂಕಾರದ ವೇಳಾಪಟ್ಟಿಯಂತೆ ಈ ಮೂವರು ಸಿಬ್ಬಂದಿ ಏಕಕಾಲಕ್ಕೆ ಮೂರು ಸ್ವಿಚ್‌ಗಳನ್ನು ಹಾಕಿದ ಕೂಡಲೇ ಇಡೀ ಅರಮನೆ ಸ್ವರ್ಣವರ್ಣದಿಂದ ಜಗಮಗಿಸುತ್ತಾ ನೋಡುಗರ ಕಣ್ಮನ ಸೆಳೆಯುತ್ತದೆ.

ನಿರ್ವಹಣೆ ನಿರಂತರ: ಅರಮನೆಯ ಗೋಪುರ ಹಾಗೂ ಹೊರಭಾಗದಲ್ಲಿ ವಿದ್ಯುತ್‌ ಬಲ್ಬ್ಗಳನ್ನು ಅಳವಡಿಸಿರುವುದರಿಂದ ಹಕ್ಕಿ-ಪಕ್ಷಿಗಳು ಕುಳಿತು ಹಾಳಾಗುವುದು, ಮಳೆ-ಗಾಳಿಗೆ ಬಿದ್ದು ಹಾಳಾಗುವುದು ಸೇರಿದಂತೆ ವಾರ್ಷಿಕ 15 ರಿಂದ 20 ಸಾವಿರ ಬಲ್ಬ್ಗಳನ್ನು ನಿರಂತರವಾಗಿ ಬದಲಾಯಿಸಲಾಗುತ್ತದೆ ಎನ್ನುತ್ತಾರೆ ಅರಮನೆ ಮಂಡಳಿಯ ಎಇಇ ಸತೀಶ್‌.

– ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.